09/06/2025 10:13 PM

Translate Language

Home » ಲೈವ್ ನ್ಯೂಸ್ » ಬೀದರ ವಿಶ್ವವಿದ್ಯಾಲಯಕ್ಕೆ ನೂತನವಾಗಿ ನೇಮಿಸಿದ ಆರು ಜನ ಸಿಂಡಿಕೇಟ್ ಸದಸ್ಯರು ವರದಿಮಾಡಿ ಕೊಂಡರು.!

ಬೀದರ ವಿಶ್ವವಿದ್ಯಾಲಯಕ್ಕೆ ನೂತನವಾಗಿ  ನೇಮಿಸಿದ ಆರು ಜನ ಸಿಂಡಿಕೇಟ್ ಸದಸ್ಯರು ವರದಿಮಾಡಿ ಕೊಂಡರು.!

Facebook
X
WhatsApp
Telegram

ಬೀದರ.08.ಮಾರ್ಚ.25:-ಬೀದರ ವಿಶ್ವವಿದ್ಯಾಲಯಕ್ಕೆ ನೂತನವಾಗಿ ಕರ್ನಾಟಕ ಸರ್ಕಾರ ನೇಮಿಸಿದ ಆರು ಜನ ಸಿಂಡಿಕೇಟ್ ಸದಸ್ಯರು ಆಗಮಿಸಿ ಇಂದು ವರದಿ ಮಾಡಿಕೊಂಡರು. ಅವರಲ್ಲಿ

1) ಶ್ರೀಶಿವನಾಥ ಪಾಟೀಲ್ ಮಾಧವರಾವ್ ಪಾಟೀಲ್ (ಸಾಮಾನ್ಯ),

2) ಶ್ರೀಸಚಿನ್ ಶಿವರಾಜ್                                     (ಸಾಮಾನ್ಯ),

3) ಶ್ರೀವಿಠಲ್‍ದಾಸ್ ಪ್ಯಾಗೆ ದೇವಿದಾಸ ಪ್ಯಾಗೆ (ಪರಿಶಿಷ್ಟ ಜಾತಿ),

4) ಶ್ರೀಅರ್ಜುನ್ ಮತೆಪ್ಪ ಕನಕ.                             (ಹಿಂದುಳಿದ ವರ್ಗ),

5) ಶ್ರೀಅಬ್ದುಲ್ ಸತ್ತಾರ್ ಚಾಂದ್ ಸಾಬ್.       (ಅಲ್ಪಸಂಖ್ಯಾತರು)

6) ಶ್ರೀಮತಿ ವೈಷ್ಣವಿ ಆರ್.ಪಾಟೀಲ್‍ರವರು

ಇಂದು ಸರ್ಕಾರ ನೀಡಿದ ತಮ್ಮ ಜವಾಬ್ದಾರಿಗೆ ವರದಿ ಮಾಡಿಕೊಂಡರು.


ಈ ಸಂದರ್ಭದಲ್ಲಿ ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೋ.ಬಿ.ಎಸ್.ಬಿರಾದಾರರವರು ಮಾತನಾಡುತ್ತಾ, ನೂತನ ಸಿಂಡಿಕೇಟ್ ಸದಸ್ಯರ ಆಗಮನದಿಂದ ವಿಶ್ವವಿದ್ಯಾಲಯಕ್ಕೆ ವಿಶೇಷ ಶಕ್ತಿ ಬಂದಂತಾಗಿದೆ.

ವಿಶಾಲವಾದ 322 ಎಕರೆಯಲ್ಲಿ ವ್ಯಾಪಿಸಿರುವ ಬೀದರ ವಿಶ್ವವಿದ್ಯಾಲಯವು 124 ಕಾಲೇಜುಗಳ ಸಂಯೋಜನೆಯೊಂದಿಗೆ 14 ಸ್ನಾತಕೋತ್ತರ ಪದವಿ ಕೋರ್ಸುಗಳು ಹಾಗೂ 26000 ವಿದ್ಯಾರ್ಥಿಗಳು ಪ್ರವೇಶ ಪಡೆದಂತಹ ವಿಶ್ವವಿದ್ಯಾಲಯವಾಗಿದೆ.

ನೂತನ ವಿಶ್ವವಿದ್ಯಾಲಯವು ಅಭಿವೃದ್ದಿ ಹೊಂದಬೇಕಾದರೆ ಎಲ್ಲಾ ಸಿಂಡಿಕೇಟ್ ಸದಸ್ಯರ ಸಹಕಾರ ಮಾರ್ಗದರ್ಶನ ಅವಶ್ಯಕತೆಯಿದೆ. ಎಲ್ಲರ ಸಹಕಾರದೊಂದಿಗೆ ಮಾದರಿ ವಿಶ್ವವಿದ್ಯಾಲಯದೊಂದಿಗೆ ವಿಶ್ವವಿದ್ಯಾಲಯ ಕಟ್ಟೋಣವೆಂದರು.

ನೂತನ ವಿಶ್ವವಿದ್ಯಾಲಯವು ಈ ಭಾಗಕ್ಕೆ ವರದಾನವಾಗಿದೆ. ಈ ಭಾಗದ ವಿದ್ಯಾರ್ಥಿಗಳ ಧ್ಯೇಯೋದ್ದೇಶಗಳನ್ನು ಈಡೇರಿಸುವಲ್ಲಿ ಕೈಜೋಡಿಸೋಣ, ಎಲ್ಲರೂ ಒಗ್ಗೂಡಿ ವಿಶ್ವವಿದ್ಯಾಲಯದ ಅಭಿವೃದ್ದಿಗಾಗಿ ಕಂಕಣಬದ್ದರಾಗೋಣವೆಂದರು.


  ಬೀದರ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರಾದ ಸುರೇಖಾ ಕೆ.ಎ.ಎಸ್ ರವರು ಎಲ್ಲರನ್ನು ಸ್ವಾಗತಿಸಿದರು, ಬೀದರ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೋ.ಪರಮೇಶ್ವರ ನಾಯ್ಕ.ಟಿ ರವರು ಸರ್ವರನ್ನು ವಂದಿಸಿದರು. ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಶಿಕ್ಷಕ/ಶಿಕ್ಷಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!