ನಾಡಿನ ಶಕ್ತಿಯಾಗಿರುವ ಸಮಸ್ತ ಮಹಿಳೆಯರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು.
‘ಹೆಣ್ಣೊಂದು ಕಲಿತರೆ ಶಾಲೆಯೊಂದನ್ನು ತೆರೆದಂತೆ’ ಎಂಬ ನುಡಿ ವಿಸ್ತಾರ ರೂಪ ಪಡೆದುಕೊಂಡಿದೆ. ‘ಹೆಣ್ಣೊಬ್ಬಳು ಪಣ ತೊಟ್ಟರೆ ಇಡೀ ಊರೇ ಸ್ವಚ್ಛವಾದಂತೆ’ ಎಂದು ಈಗ ಹೇಳಬಹುದು. ಇದಕ್ಕೆ ಉದಾಹರಣೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಹೊಸಕೆರೆ ಗ್ರಾಮ ಪಂಚಾಯಿತಿಯ ಸ್ವಚ್ಛ ವಾಹಿನಿಯ ಚಾಲಕಿ ರಾಜೇಶ್ವರಿ.
ವಾಹನ ಚಾಲನೆಯಂತಹ ಶ್ರಮದಾಯಕ ಕೆಲಸ ಪುರುಷರಿಗೆ ಸೀಮಿತ ಎಂಬ ಮನಸ್ಥಿತಿಯನ್ನು ಪಕ್ಕಕ್ಕಿರಿಸಿದ ರಾಜೇಶ್ವರಿ ಅವರು ದೃಢಮನಸ್ಸು, ಆಸ್ಥೆಯಿಂದ ಚಾಲನೆ ಕಲಿತರು. ಪರಿಸರವನ್ನು ಶುಚಿಗೊಳಿಸುವ ಹೊಣೆ ಬಗ್ಗೆ ಇರುವ ಹಿಂಜರಿಕೆಯನ್ನು ತೊಡೆದುಹಾಕಿದರು. ಇಂದು ಅವರ ಶ್ರಮದ ಫಲವಾಗಿ ಊರು ಕಂಗೊಳಿಸುತ್ತಿದೆ.
ಸ್ವಚ್ಛ, ಸುಂದರ ಸಮಾಜ ನಿರ್ಮಾಣದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕನಸಿಗೆ ಶಕ್ತಿಯಾಗಿ ನಿಂತಿರುವ ಈ ಸ್ಫೂರ್ತಿದಾಯಕ ಮಹಿಳೆಗೆ ನಮ್ಮ ವಂದನೆಗಳು!
#WomensDay2025
