ಬೀದರ :ನುಡಿದಂತೆ ನಡೆಯುವ ಸಂಕಲ್ಪದೊಂದಿಗೆ ಮಾನ್ಯ ಮುಖ್ಯಮಂತ್ರಿಗಳು ಇಂದು ಮಂಡಿಸಿದೆ 5. 4,09,549 ಘಾತ್ರದ ಬಜೆಟ್ ಸಾಮಾಜಿಕ ಕಳಕಳಿ ಹಾಗೂ ಉದ್ಯಮಸ್ನೇಹಿಯಾಗಿದೆ.
ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಅತಿಥಿ ಶಿಕ್ಷಕರು ಹಾಗೂ ಸರ್ಕಾರಿ ಕಾಲೇಜುಗಳ ಅತಿಥಿ ಉಪನ್ಯಾಸರಿಗೆ ಪ್ರಸ್ತುತ ನೀಡುತ್ತಿರುವ ಮಾಸಿಕ ಗೌರವಧನ ತಲಾ 2000 . ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ 5267 ಶಿಕ್ಷಕರ ಹುದ್ದೆಗಳ ಭರ್ತಿ.
ಅಂಗನವಾಡಿ ಸಹಾಯಕಿಯರ ಪರ ಕಾಳಜಿ ಕಾರ್ಯಕರ್ತೆ, ಪತ್ರಕರ್ತರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ 5 ಲಕ್ಷ ವರೆಗೆ ನಗದು ರಹಿತ ಚಿಕಿತ್ಸೆ. ಈ ಬಜೆಟ್ ಸಮತೋಲನಯುತ ಬೆಳವಣಿಗೆ, ಆರ್ಥಿಕ ಶಕ್ತಿ ಮತ್ತು ಸಾಮಾಜಿಕ ನ್ಯಾಯಕ್ಕೆ ಪೂರಕವಾಗಿದೆ.
ಸಾಮಾಜಿಕ ನ್ಯಾಯದ ಅಡಿಯಲ್ಲಿ ನಾಡಿನ ಅಭಿವೃದ್ಧಿಯಾಗಿ ಅತ್ಯುತ್ತಮ ಬಜೆಟ್ ಅನ್ನು ಮುಖ್ಯಮಂತ್ರಿಗಳು ಮಂಡಿಸಿದ್ದಾರೆ ಹಾಗೂ ಈ ಬಜೆಟ್ ಎಲ್ಲವನ್ನೂ ಒಳ್ಳಗೊಂಡ ಸರ್ವ ವ್ಯಾಪಿ, ಸರ್ವ ಸ್ಪರ್ಶಿ ಬಜೆಟ್ ಆಗಿದೆ.
ನಾಡಿನ ಜನಸಾಮಾನ್ಯರ ಕಲ್ಯಾಣಕ್ಕೆ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಬಜೆಟ್ ನಲ್ಲಿ ವಿನೂತನ ಕಾರ್ಯಕ್ರಮಗಳನ್ನು ನೀಡಲಾಗಿದೆ. “ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು” ಬಜೆಟ್ನ ಮೂಲ ಆಶಯದಂತೆ ಬಜೆಟ್ ಮಂಡಿಸಿದ್ದಾರೆ.
ಜನಸಾಮಾನ್ಯರ ಬದುಕಿಗೆ ನೆಮ್ಮದಿಯ ಗ್ಯಾರಂಟಿ ಇದೆ, ಅಭಿವೃದ್ಧಿಯ ಮುನ್ನೋಟವಿದೆ, ಯುವಜನರು, ಮಹಿಳೆಯರು ಮತ್ತು ಮಕ್ಕಳ ಭವಿಷ್ಯಕ್ಕೆ ಭರವಸೆಯಿದೆ, ಶೋಷಿತರ ಬಾಳಿಗೆ ಹೊಸಬೆಳಕಿದೆ. ಜಾತಿ, ಧರ್ಮ, ಲಿಂಗ, ವರ್ಗ ಬೇಧವಿರದೆ ಎಲ್ಲರನ್ನೂ ತಲುಪಬಹುದಾದ ಇದೊಂದು ಪರಿಪೂರ್ಣ ಬಜೆಟ್ ಆಗಿದೆ. ಎಂದು ಸಾಮಾಜಿಕ ಮಾಧ್ಯಮ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸುಧಾಕರ ಕೊಳ್ಳುರ ರವರು ತಿಳಿಸಿದ್ದಾರೆ.