10/06/2025 1:52 AM

Translate Language

Home » ಲೈವ್ ನ್ಯೂಸ್ » ಆನೆಕಾಲು ರೋಗ ನಿರ್ಮೂಲನೆಗಾಗಿ ಸಾಮೂಹಿಕ ಔಷಧಿ ಸೇವನೆ ಕಾರ್ಯಕ್ರಮ: ಕೇಂದ್ರ ಮತ್ತು ರಾಜ್ಯ ತಂಡ ಪರಿಶೀಲನೆ

ಆನೆಕಾಲು ರೋಗ ನಿರ್ಮೂಲನೆಗಾಗಿ ಸಾಮೂಹಿಕ ಔಷಧಿ ಸೇವನೆ ಕಾರ್ಯಕ್ರಮ: ಕೇಂದ್ರ ಮತ್ತು ರಾಜ್ಯ ತಂಡ ಪರಿಶೀಲನೆ

Facebook
X
WhatsApp
Telegram

====================================
ಪ್ರಜಾ ಪ್ರಭಾತ ಸುದ್ಧಿ:
https://prajaprabhat.com
====================================

ಬೀದರ.08.ಮಾರ್ಚ.25:- ಬೀದರ ಜಿಲ್ಲೆಯ ಔರಾದ-ಬಿ ತಾಲ್ಲೂಕಿನಲ್ಲಿ ಚಟುವಟಿಕೆಗಳು ನಡೆಸಲಾಗುತ್ತಿರುವ ಪ್ರದೇಶಗಳಿಗೆ ಕೇಂದ್ರ ಸರ್ಕಾರದ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ನಿರ್ದೇಶಕರಾದ ಡಾಃತನುಜೈನ್ ಅವರು ತಮ್ಮ ತಂಡದಿಂದ ದಿನಾಂಕಃ 06-03-2025 ರಂದು ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಮುಧೋಳ-ಬಿ, ಕೌಡಗಾಂವ ಹಾಗೂ ಔರಾದ-ಬಿ ತಾಲ್ಲೂಕಿನ ನಗರ ಪ್ರದೇಶಗಳಿಗೆ ಇಂದು ಭೇಟಿ ನೀಡಿ ಸಾರ್ವಜನಿಕರು ಆನೆಕಾಲು ರೋಗ ಮಾತ್ರೆ ಸೇವಿಸಿರುವ ಕುರಿತು ಭೌತಿಕವಾಗಿ ಮನೆಗಳಿಗೆ ಭೇಟಿ ನೀಡಿ ಕಾರ್ಯಕ್ರಮದ ಪ್ರಗತಿಯನ್ನು ಪರಿಶೀಲಿಸಿದರು.


ಸ್ಥಳದಲ್ಲಿ ಹಾಜರಿದ್ದ ಸಾರ್ವಜನಿಕರಿಗೆ ತಮ್ಮಕುಟುಂಬದ ಎಲ್ಲಾ ಸದಸ್ಯರೊಂದಿಗೆ ಈ ಚಟುವಟಿಕೆಯ ಸದುಪಯೋಗವನ್ನು ಪಡೆದುಕೊಂಡು ಡಿಇಸಿ ಅಲ್ಬೆಂಡಾಲ್ ಮತ್ತು ಐವರ್‌ಮೆಕ್ಟೀನ್ ಮಾತ್ರೆಗಳನ್ನು ಸೇವಿಸಿ ಆನೆಕಾಲು ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಕೋರಿದರು, ಹಾಗೂ ಇಲಾಖೆಯ ಎಲ್ಲಾ ಅಧಿಕಾರಿಗಳನ್ನು ಬೀದರ ಜಿಲ್ಲೆಯಿಂದ ಆನೆಕಾಲು ರೋಗವನ್ನು ನಿರ್ಮೂಲನೆ ಮಾಡಲು ನಿಯಮಿತವಾಗಿ ಶ್ರಮಿಸುವಂತೆ ಸೂಚಿಸಿದರು.


ಬೀದರ ಜಿಲ್ಲೆಯೂ ಆನೆಕಾಲು ರೋಗ ಪ್ರಸರಣದ ಗಂಡಾAತರ ಜಿಲ್ಲೆಯಾಗಿದ್ದು, ಜಿಲ್ಲೆಯಲ್ಲಿ ಆನೆಕಾಲು ರೋಗಿಗಳ ಪ್ರಕರಣ ಮತ್ತು ರೋಗ ಹರಡಿಸುವ ಸಕ್ರೀಯ ಪ್ರಕರಣಗಳು ಪದೇ ಪದೇ ಗೋಚರಿಸುತ್ತಿರುವುದರಿಂದ ಸರಕಾರದ ಮಾರ್ಗದರ್ಶನದ ಅನುಸಾರವಾಗಿ ಜಿಲ್ಲೆಯ ಔರಾದ-ಬಿ ತಾಲೂಕಿನ ಎ ಬ್ಲಾಕಿನ ವ್ಯಾಪ್ತಿಯಲ್ಲಿ ಔರಾದ-ಬಿ ನಗರ ಪ್ರದೇಶ, ಹೆಡಗಾಪೂರ, ವಡಗಾಂವ-ಡಿ, ಚಿಂತಾಕಿ ಮತ್ತು ಮುಧೋಳ-ಬಿ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮೀಣ ಮತ್ತು ಪಟ್ಟಣ/ನಗರ ಪ್ರದೇಶಗಳಲ್ಲಿ ದಿನಾಂಕಃ 10-02-2025 ರಿಂದ 28-02-2025 ರವರೆಗೆ ಈ ವರ್ಷವೂ ಊಟದ/ಉಪಹಾರದ ನಂತರ ಅರ್ಹ ಫಲಾನುಭವಿಗಳಿಗೆ ಸಾಮೂಹಿಕ ಔಷಧಿ ಡಿ.ಇ.ಸಿ. ಹಾಗೂ ಅಲ್ಬೆಂಡಾಜೋಲ್ ಮತ್ತು ಐವರ್ ಮೆಕ್ಟೀನ್ ಮಾತ್ರೆಗಳನ್ನು ಆರೋಗ್ಯ ಕಾರ್ಯಕರ್ತರು/ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಪ್ರತಿ ಮನೆ ಮನೆಗೆ ಭೇಟಿ ನೀಡಿ ಮಾತ್ರೆಗಳನ್ನು ಸೇವನೆ ಮಾಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿರುತ್ತದೆ.


ಈ ಚಟುವಟಿಕೆಯಲ್ಲಿ ಮಾತ್ರೆ ಸೇವನೆಯಿಂದ ವಂಚತರಾದ ಅರ್ಹ ಫಲಾನುಭವಿಗಳನ್ನು ಮಾತ್ರೆ ನುಂಗಿಸಲು ಇಲಾಖೆಯ ಮಾರ್ಗಸೂಚಿಯನ್ವಯ ಕಾರ್ಯಕ್ರಮವನ್ನು ದಿನಾಂಕಃ 10-03-2025 ರವರೆಗೆ ಮುಂದುವರೆಸಲಾಗಿರುತ್ತದೆ.
ಈ ತಂಡದೊoದಿಗೆ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ರಾಜ್ಯ ಉಪ ನಿರ್ದೇಶಕರಾದ ಡಾಃಮಹೆಮೂದ ಷರೀಫ್ , ಕೇಂದ್ರ ತಂಡದ ಡಾಃ ಕಲ್ಪನಾ ಬಾರಹ, ಡಾಃಸ್ಮತಾರಾವತ್ ಡಾಃಜಯರಾಮ ಡಾಃಜಸ್ಟೀನ್ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳಾದ ಡಾಃರಾಜಶೇಖರ್ ಪಾಟೀಲ್ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾಃಗಾಯತ್ರಿ ಉಪಸ್ಥಿತರಿದ್ದರು.

====================================
ವೀಕ್ಷಕರೇ ನಮ್ಮ ಚಾನೆಲ್ ಜಾಹಿರಾತು ಹಾಗೂ ಸುದ್ದಿಗಾಗಿ
ಕರೆ ಮಾಡಿ ಅಥವಾ ವಾಟ್ಸಪ್ಪ್ ಮಾಡಿ: 9481611151
E_Mail ID: prajaprabhat24@gmail.com
====================================

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!