=========================================
ಪ್ರಜಾ ಪ್ರಭಾತ ಸುದ್ಧಿ:
https://prajaprabhat.com
=========================================
ಬೆಂಗಳೂರು.06.ಮಾರ್ಚ.25:- ರಾಜ್ಯದಲ್ಲಿ ಓದುವಿಕೆ ಎನ್ನುವುದು ಮನುಷ್ಯನನ್ನು ಮೇಲ್ದರ್ಜೆಗೇರಿಸುವ ಅತ್ಯುತ್ತಮ ಸಾಧನ, ಓದಿನಿಂದ ಪಡೆದುಕೊಂಡಿದ್ದನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ.
ನೆಪ ಮಾತ್ರಕ್ಕೆ ಎನ್ನುವಂತಿದ್ದ ಗ್ರಾಮೀಣ ಗ್ರಂಥಾಲಯಗಳನ್ನು ಅರಿವು ಕೇಂದ್ರಗಳಾಗಿ ಮೇಲ್ದರ್ಜೆಗೇರಿಸುವ ಸಂದರ್ಭದಲ್ಲಿ ನಾವು ಯಾವ ಉದ್ದೇಶಗಳನ್ನು ಇಟ್ಟುಕೊಂಡಿದ್ದೆವೋ ಆ ಉದ್ದೇಶಗಳು ಈಗ ಸಾಕಾರವಾಗುತ್ತಿವೆ.
ಕೊಪ್ಪಳ ಜಿಲ್ಲೆ, ಕಾರಟಗಿ ತಾಲೂಕಿನ ಅರಿವು ಕೇಂದ್ರದಲ್ಲಿ ಅರಿವು ಕೇಂದ್ರದ ಪುಸ್ತಕಗಳ ನೆರವಿನಿಂದ ಪ್ರತಿಭಾವಂತ ವಿದ್ಯಾರ್ಥಿಯೊಬ್ಬ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಆಯ್ಕೆಯಾಗಿರುವ ಸಂಗತಿಯು ಅತ್ಯಂತ ಸಂತೋಷವನ್ನು ನೀಡುತ್ತದೆ.
ಗ್ರಾಮೀಣ ಯುವ ಸಮುದಾಯ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಅರಿವು ಕೇಂದ್ರಗಳನ್ನು ಪೂರ್ಣ ಬಳಕೆ ಮಾಡಿಕೊಂಡು ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗುತ್ತಿರುವ ಹಲವು ನಿದರ್ಶನಗಳಿವೆ,
ನಮ್ಮ ಯೋಜನೆಯೊಂದು ಪ್ರತಿಭಾವಂತರ ಭವಿಷ್ಯಕ್ಕೆ ದಾರಿದೀಪವಾಗಿರುವ ವಿಷಯಗಳನ್ನು ಕಂಡಾಗ ಸಂತೋಷ ಮತ್ತು ಸಂತೃಪ್ತ ಭಾವನೆ ಮೂಡುತ್ತದೆ
=========================================
ವೀಕ್ಷಕರೇ ನಮ್ಮ ಚಾನೆಲ್ ಜಾಹಿರಾತು ಹಾಗೂ ಸುದ್ದಿಗಾಗಿ
ಕರೆ ಮಾಡಿ ಅಥವಾ ವಾಟ್ಸಪ್ಪ್ ಮಾಡಿ: 9481611151
E_Mail ID: prajaprabhat24@gmail.com
=========================================