09/06/2025 12:33 AM

Translate Language

Home » ಲೈವ್ ನ್ಯೂಸ್ » ಯುವಕರು ಮಾದಕ ವಸ್ತು ಸೇವೆನೆಯಿಂದ ದೂರವಿರುವ ಸಂಕಲ್ಪ ಮಾಡಬೇಕು: ತಹಶೀಲ್ದಾರ ಮಲಶೇಟ್ಟಿ ಚಿದಿ

ಯುವಕರು ಮಾದಕ ವಸ್ತು ಸೇವೆನೆಯಿಂದ ದೂರವಿರುವ ಸಂಕಲ್ಪ ಮಾಡಬೇಕು: ತಹಶೀಲ್ದಾರ ಮಲಶೇಟ್ಟಿ ಚಿದಿ

Facebook
X
WhatsApp
Telegram

ಬೀದರ.05.ಮಾರ್ಚ.25:- ಯುವ ಪೀಳಿಗೆ ದೂಮಪಾನ ಮಧ್ಯಪಾನದಿಂದ ಅನೇಕ ಆರೋಗ್ಯ ಸಮಸ್ಯೆ ಎದುರಿಸುತ್ತಿದೆ. ಇಂದಿನ ಯುವಕರು ಕುಡಿತ, ಡ್ರಗ್ಸ್, ಗುಟಕಾ ಚಟಗಳಿಂದ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ.


ನಶೆಯಲ್ಲಿ ಅಪರಾದ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಪ್ರತಿಯೊಬ್ಬರು ಮಾದಕ ವಸ್ತು ಸೇವೆನೆಯಿಂದ ದೂರ ಉಳಿಯುವ ಸಂಕಲ್ಪ ಮಾಡಬೇಕು ಎಂದು ಔರಾದ ತಾಲ್ಲೂಕ ತಹಶೀಲ್ದಾರ ಮಲಶೇಟ್ಟಿ ಚಿದ್ರಿ ಹೇಳಿದರು.



ಅವರು ಮಂಗಳವಾರ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೀದರ ಹಾಗೂ ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆ ಔರಾದ (ಬಾ) ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಮದ್ಯಪಾನ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ವಿಚಾರ ಸಂಕೀರಣ ಉದ್ಘಾಟಿಸಿ ಮಾತನಾಡಿದರು.

ಪ್ರಾಥಮಿಕ ಆರೋಗ್ಯ ಕೇಂದ್ರ ಮುದೋಳ (ಬಿ) ವೈದ್ಯಧಿಕಾರಿ ಡಾ. ಅನಿಕುಮಾರ ಗಡ್ಡೆ, ಅವರು ಅತಿಥಿ ಉಪನ್ಯಾಸ ನೀಡಿ ಮಾತನಾಡಿ, ತಂಬಾಕು, ಗುಟ್ಕಾ, ಮಧ್ಯ ಸೇವನೆಯಿಂದ ಕ್ಯಾನ್ಸರ್, ಪಾರ್ಶವಾಯುವಂತಹ ಮಾರಕ ರೋಗಗಳು ಬರುತ್ತವೆ. 16 ರಿಂದ 23 ವರ್ಷದ ಒಳಗಿನ ಯುವಕರು ಮೊದಲಿಗೆ ಮೋಜಿಗಾಗಿ ತಂಬಾಕು, ಗುಟ್ಕಾ, ಹಾಗೂ ಮಧ್ಯಸೇವನೆ ಪ್ರರಂಭಿಸುತ್ತಾರೆ. ನಂತರ ದಿನಗಳಲ್ಲಿ ಅದು ಹವ್ಯಾಸವಾಗಿ ಬೆಳೆದು ನಾನಾ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ದೇಶದಲ್ಲಿ ಪ್ರತಿ ದಿನ ಮದ್ಯಪಾನ ಹಾಗೂ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ 2500 ಜನ ಸಾವನ್ನಪುತ್ತಿದ್ದಾರೆ. ರಾಜ್ಯದಲ್ಲಿ ಕೂಡ ಅನೇಕ ಯುವಜನತೆ ಮಾರಕ ರೋಗಗಳಿಂದ ಬಲಿಯಾಗುತ್ತಿದ್ದಾರೆ ಎಂದರು 

ಔರಾದ ತಾಲ್ಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಾಲಾಜಿ ಅಮರವಾಡಿ ಮಾತನಾಡಿ, 15 ರಿಂದ 25 ವಯೋಮಾನದ ಇಂದಿನ ಯುವಕರು ಮದ್ಯಸೇವನೆ, ಗುಟ್ಕಾ ಮತ್ತಿತರ ನಶೆ ಏರಿಸುವ ವಸ್ತುಗಳಿಂದ ದೂರ ವೀರಬೇಕು.

ಪ್ರತಿಯೊಂದು ಮಾದಕವಸ್ತುಗಳು ಮೇಲೆ ಆರೋಗ್ಯಕ್ಕೆ ಹಾನಿಕಾರಕ ಎಂದು ಬರೆದರು ಕೂಡ ಅದನ್ನು ಲೆಕ್ಕಿಸದೆ ದುಶ್ಟಚಟಗಳಿಗೆ ಬಲಿಯಾಗುತ್ತಿದ್ದಾರೆ. ಅನಕ್ಷರಸ್ತರಿಗಿಂತ ಅಕ್ಷರಸ್ಥರೆ ಎಲ್ಲಾ ತಿಳಿದು ಓದಿಕೊಂಡರು ಸಹ ಮಾದಕ ವ್ಯಸನಿಗಳಾಗುತ್ತಿದ್ದಾರೆ ಎಂದು ಕಳಕಳಿ ವ್ಯಕ್ತಪಡಿಸಿದರು.

ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಸುಳ್ಳೊಳಿ ಅವರು ಮಾತನಾಡಿ, ಸರ್ಕಾರದ ವತಿಯಿಂದ ಯುವಜನತೆಗಳಲ್ಲಿ ಜಾಗೃತಿ ಮೂಡಿಸಲು ಮದ್ಯಪಾನ ಸಂಯಮ ಮಂಡಳಿಯವರಿಂದ ಇಂತಹ ವಿಚಾರ ಸಂಕಿರಣ ಕಾರ್ಯಕ್ರಮಗಳನ್ನು ಏರ್ಪಡಿಸಿ ಜಾಗೃತಿ  ಮಾಡಿಸಲಾಗುತ್ತಿದೆ ಆದ್ದರಿಂದ ವಿದ್ಯಾರ್ಥಿಗಳು ಎಲ್ಲ ರಿತಿಯ ದುಷ್ಚಟಗಳಿಂದ ದೂರ ಇಂದು ಸ್ವಾಸ್ಥ್ಯ ಸಮಾಜ  ನಿರ್ಮಾಣ ಮಾಡಲು ಕೈಜೋಡಿಸಬೇಕೆಂದರು.



ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಚಾರ್ಯ ನಾಗಭೂಷಣ ಮಠ ಅವರು ಮಾತನಾಡಿದರು,

ಕಾರ್ಯಕ್ರಮದಲ್ಲಿ ಶಿವಶಂಕರ ಟೋಕರೆ, ಔರಾದ ರೂರಲ್ ಐಟಿಐ ಕಾಲೇಜಿನ ಪ್ರಾಚಾರ್ಯ ರಾಜಕುಮಾರ ಮಾಳಗೆ, ಔರಾದ (ಬಾ) ಪಟ್ಟದೇವರು ಐಟಿಐ ಕಾಲೇಜಿನ ಪ್ರಾಚಾರ್ಯ ಸತೀಶ ಗಂದಿಗುಡಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕ ಅಧ್ಯಕ್ಷ ಪಂಡರಿ ಆಡೆ, ಸರ್ಕಾರ ಕೈಗಾರಿಕಾ ತರಬೇತಿ ಸಂಸ್ಥೆ ಬೀದರನ ತರಬೇತಿ ಅಧಿಕಾರಿ ಬಾಬು ಪ್ರಭಾಜಿ, ಔರಾದ ಸರ್ಕಾರ ಕೈಗಾರಿಕಾ ತರಬೇತಿ ಸಂಸ್ಥೆಯ ತರಬೇತಿ ಅಧಿಕಾರಿ ಯುಸುಫ ಮಿಯಾ, ವಾರ್ತಾ ಇಲಾಖೆಯ ವಿಜಯಕೃಷ್ಣ ಸೇರಿದಂತೆ ಕೈಗಾರಿಕಾ ತರಬೇತಿ ಸಂಸ್ಥೆಯ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!