ಬೀದರ.05.ಮಾರ್ಚ.25:- ತಾಲೂಕಿನ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದರಾದ ಶ್ರೀ ಸಾಗರ ಖಂಡ್ರೆ ಅವರು ಇಂದು ಶಂಕುಸ್ಥಾಪನೆ ನೆರವೇರಿಸಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಈಶ್ವರ ಖಂಡ್ರೆ ಅವರ ಒಟ್ಟು ₹6.75 ಕೋಟಿ ಅನುದಾನದಡಿ ಈ ಕಾಮಗಾರಿಗಳು ಜಾರಿಗೆ ಬರಲಿದ್ದು, ಗ್ರಾಮೀಣ ಪ್ರದೇಶದ ಸಂಪರ್ಕ ಸುಧಾರಣೆಗೆ ಮಹತ್ವದ ಹೆಜ್ಜೆಯಾಗಿದೆ.

ಪ್ರಮುಖ ಕಾಮಗಾರಿಗಳು:
🔹 ಬಾಜೋಳಗಾ – ಕಪ್ಲಾಪೂರ ರಸ್ತೆ ಸುಧಾರಣೆ – ₹1 ಕೋಟಿ
🔹 ಬಾಜೋಳಗಾ – ನಾವದಗಿ ತಾಂಡಾ ರಸ್ತೆ ಸುಧಾರಣೆ – ₹1 ಕೋಟಿ
🔹 ಬಾಜೋಳಗಾ ಗ್ರಾಮದಲ್ಲಿ ಸಿಸಿ ರಸ್ತೆ ಹಾಗೂ ಒಳಚರಂಡಿ ನಿರ್ಮಾಣ – ₹65 ಲಕ್ಷ
🔹 ಬಾಜೋಳಗಾ – ವರವಟ್ಟಿ ಸಂಪರ್ಕ ಸೇತುವೆ ನಿರ್ಮಾಣ – ₹2.5 ಕೋಟಿ
🔹 ರಾಮತೀರ್ಥವಾಡಿ ರಸ್ತೆ ಅಗಲೀಕರಣ ಮತ್ತು ಸುಧಾರಣೆ – ₹1.60 ಕೋಟಿ
ಈ ಕಾಮಗಾರಿಗಳ ಮೂಲಕ ಗ್ರಾಮೀಣ ಮೂಲಸೌಕರ್ಯದ ಅಭಿವೃದ್ಧಿಗೆ ಮತ್ತೊಂದು ಪ್ರಮುಖ ಹೆಜ್ಜೆ ಇಡಲಾಗಿದೆ. ಭಾಲ್ಕಿ ತಾಲೂಕಿನ ಜನತೆಗೆ ಸುಗಮ ಸಾರಿಗೆ ವ್ಯವಸ್ಥೆ ಒದಗಿಸುವ ದೃಷ್ಟಿಯಿಂದ ಈ ಕಾಮಗಾರಿಗಳು ಅತ್ಯಂತ ಉಪಯುಕ್ತವಾಗಲಿವೆ.
