ಬೀದರ.04. ಮಾರ್ಚ.25:-ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೀದರ ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಮ) ಔರಾದ ಬಾ ಇವರ ಸಂಯುಕ್ತಾಶ್ರಯದಲ್ಲಿ ಮದ್ಯಾಪನ ಮತ್ತು ಮಾದಕ ವಸ್ತುಗಳ ದುಷ್ಟರಿಣಾಮ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮವನ್ನು ಮಾರ್ಚ.5 ರಂದು ಬೆಳಿಗ್ಗೆ 10.30ಕ್ಕೆ ಸರ್ಕಾಇರ ಕೈಗಾರಿಕಾ ತರಬೇತಿ ಸಂಸ್ಥೆ (ಮ) ಸಭಾಂಗಣ ಔರಾದ (ಬಾ) ದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಔರಾದ (ಬಾ) ಗ್ರೇಡ್-1 ತಹಸೀಲ್ದಾರರಾದ ಮಲ್ಲಶೆಟ್ಟಿ ಚಿದ್ರಿ ಅವರು ಮಾಡಲಿದ್ದಾರೆ. ಔರಾದ (ಬಾ) ಸ.ಕೈ.ತ.ಸಂ. (ಮ) ಪ್ರಾಚಾರ್ಯರರಾದ ನಾಗಭೂಷಣ ಮಠ ಇವರು ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಲಿದ್ದಾರೆ. ಹಾಗೂ ಮುಖ್ಯ ಅತಿಥಿಗಳಾಗಿ ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೋಶಾಧ್ಯಕ್ಷರಾದ ಶಿವಶಂಕರ ಟೋಕರೆ, ಔರಾದ (ಬಾ) ರೂರಲ್ ಐಟಿಐ ಪ್ರಾಚಾರ್ಯರರಾದ ರಾಜಕುಮಾರ ಮಾಳಗೆ, ಔರಾದ (ಬಾ) ಪಟ್ಟದ್ದೇವರು ಐಟಿಐ ಪ್ರಾಚಾರ್ಯರರಾದ ಸತೀಶ ಗಂದಿಗುಡಿ, ಔರಾದ (ಬಾ) ತಾಲ್ಲೂಕಾ ಕಸಾಪ ಅಧ್ಯಕ್ಷರಾದ ಬಾಲಾಜಿ ಅಮರವಾಡಿ, ಔರಾದ (ಬಾ) ಕ.ರಾ.ಸ.ನೌಕರರ ಸಂಘದ ಅಧ್ಯಕ್ಷರಾದ ಪಂಡರಿ ಆಡೆ, ಬೀದರ ಸ.ಕೈ.ತ.ಸಂ. ತರಬೇತಿ ಅಧಿಕಾರಿ ಬಾಬು ಪ್ರಭಾಜಿ ಅವರುಗಳು ಭಾಗವಹಿಸಲಿದ್ದಾರೆ. ಕಾಯ್ಕ್ರಮದಲ್ಲಿ ವಿಶೇಷ ಉಪನ್ಯಾಸವನ್ನು ಮುಧೋಳ (ಬಿ) ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಅನೀಲಕುಮಾರ ಗಡ್ಡೆ ನೀಡಲಿದ್ದಾರೆ.