ಬೀದರ.04.ಮಾರ್ಚ.25: – ಜಿಲ್ಲೆಯ ಎಲ್ಲಾ ಸಾರ್ವಜನಿಕರಿಗೆ ಶ್ರವಣ ಸೇವೆಗಳ ಸೌಲಭ್ಯವನ್ನು ಒದಗಿಸುವಲ್ಲಿ ನಾವೆಲ್ಲರು ಕೈಜೋಡಿಸೋಣ. ನಮ್ಮ ಜಿಲ್ಲೆಯಲ್ಲಿ ನವಜಾತ ಶಿಶುಗಳ ಉಚಿತ ಶ್ರವಣ ತಪಾಸಣೆ ಈಗಾಗಲೇ ಬ್ರೀಮ್ಸ್ ಬೋಧಕ ಆಸ್ಪತ್ರೆಯಲ್ಲಿ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಬೀದರ ಹಾಗೂ ತಾಲೂಕು ಸಾರ್ವಜನಿಕ ಆಸ್ಪತ್ರೆ ಔರಾದ ಇಲ್ಲಿ ಮಾಡಲಾಗುತ್ತಿದ್ದು, ಶ್ರವಣ ಪರಿಕ್ಷೆ ಮಾಡಿಸಿ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಧ್ಯಾನೇಶ್ವರ ನಿರಗುಡೆ ಮಾಹಿತಿ ನೀಡಿದರು.
ಅವರು ಮಂಗಳವಾರದಂದು ಜಿಲ್ಲಾ ನರ್ಸಿಂಗ್ ಕಾಲೇಜ ಬೀದರದಲ್ಲಿ ಹಮ್ಮಿಕೊಂಡಿದ್ದ “ಬದಲಾಗುತ್ತಿರುವ ಮನ-ಸ್ಥಿತಿ ಕಿವಿ ಮತ್ತು ಶ್ರವಣ ಆರೈಕೆಯನ್ನು ಎಲ್ಲರಿಗೂ ವಾಸ್ತವವಾಗಿಸಲು ನಿಮ್ಮನ್ನು ಸಶಕ್ತಗೊಳಿಸಿಕೊಳ್ಳಿ” ಎಂಬ ಘೋಷ ವಾಕ್ಯದೊಂದಿಗೆ ವಿಶ್ವ ಶ್ರವಣ ದಿನ ಆಚರಿಸಲಾಯಿತು.
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾಗಳು ಎನ್.ಪಿ.ಪಿ.ಸಿ.ಡಿ ಕಾರ್ಯಕ್ರಮದ ನೋಡಲ್ ಅಧಿಕಾರಿ ಡಾ. ದಿಲೀಪ ಡೋಗ್ರೆ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಡಾ|| ನಿಶಾ ಕೌರ ಅವರು ಜಿಲ್ಲೆಯ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಕಾರ್ಯಕ್ರಮದ ಬಗ್ಗೆ ಮಾತನಾಡಿ ಕಿವಿಯ ಸಮಸ್ಯೆಯಿಂದ ತಮ್ಮಲ್ಲಿ ಬರುವ ಮಕ್ಕಳಿಗೆ ಎನ್.ಪಿ.ಪಿ.ಸಿ.ಡಿ ಘಟಕಕ್ಕೆ ಕಳುಹಿಸುವಂತೆ ಮಾಹಿತಿ ನೀಡಿದರು.
ಈ ಸಂದಂರ್ಭದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ|| ಅಹೆಮದುದ್ದಿನ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳು ಡಾ. ಶಿವಶಂಕರ ಬಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿಗಳು ಡಾ. ಕಿರಣ ಪಾಟೀಲ್, ಜಿಲ್ಲಾ ಸರ್ವೇಕಣಾಧಿಕಾರಿಗಳು ಡಾ. ಶಂಕರೆಪ್ಪಾ ಬೊಮ್ಮಾ, ಡಾ. ಜಿಲ್ಲಾ ಎನ್.ವಿ.ಬಿ.ಡಿ.ಸಿ.ಪಿ. ಅಧಿಕಾರಿಗಳು ಡಾ. ರಾಜಶೇಖರ ಪಾಟೀಲ್, ಪ್ರಾಂಶುಪಾಲರು ಜಿಲ್ಲಾ ತರಬೇತಿ ಕೇಂದ್ರ ಬೀದರ ಡಾ. ಸಂಜೀವ್ ಕುಮಾರ ಪಾಟೀಲ್, ತಾಲೂಕಾ ಆರೋಗ್ಯ ಅಧಿಕಾರಿಗಳು ಡಾ. ಸಂಗಾರೆಡ್ಡಿ, ಡಾ. ಸುಮಂತ ಕಣಜಿಕರ್ ಇ.ಎನ್.ಟಿ ವಿಭಾಗದ ಮುಖ್ಯಸ್ಥರು ಬ್ರೀಮ್ಸ್, ಡಾ. ನಿಶಾ ಕೌರ ಇ.ಎನ್.ಟಿ ತಜ್ಞರು ಬ್ರೀಮ್ಸ್, ವೆಂಕಟರಮಣ ಆಡಿಯೋಲಾಜಿಸ್ಟ್, ಡಾ. ಲಕ್ಷಮಿಕಾಂತ ವಲ್ಲೆಪುರೆ ಜಿಲ್ಲಾ ಸಲಹೆಗಾರು ಕ್ಯೂ.ಎ, ಬಿಲಾಲ್, ಸೋಹೇಲ್, ಮುದ್ಸರ್, ಮಹೇಶರೆಡ್ಡಿ, ರೂಸ್ವೆಲ್ಟ್, ಶಿವಾನಂದ, ಶಾಲುಬಾಯಿ ಸೇರಿದಂತೆ ಇತರರು ಉಪಸ್ಥತರಿದ್ದರು.