09/06/2025 2:59 PM

Translate Language

Home » ಲೈವ್ ನ್ಯೂಸ್ » ಔರಾದ್ ಪಟ್ಟಣದಲ್ಲಿ ಹೆಚ್ಚುವರಿ SBI BANK ಶಾಖೆ ಸಿಪ್ರದಲಿ. ಸಂಸದ ಸಾಗರ ಖಂಡ್ರೆ

ಔರಾದ್ ಪಟ್ಟಣದಲ್ಲಿ ಹೆಚ್ಚುವರಿ SBI BANK ಶಾಖೆ ಸಿಪ್ರದಲಿ. ಸಂಸದ ಸಾಗರ ಖಂಡ್ರೆ

Facebook
X
WhatsApp
Telegram

ಬೀದರ.04.ಮಾರ್ಚ.25:- ಬೀದರ ಲೋಕಸಭಾ ಸಂಸದರಾದ ಸಾಗರ್ ಈಶ್ವರ ಖಂಡ್ರೆ ಅವರ ಅಧ್ಯಕ್ಷತೆಯಲ್ಲಿ ನಡದ ಸಭೆಯಲ್ಲಿ ಕೃಷಿ ಸಾಲಗಳು (ಕೆಸಿಸಿ), ಬೆಳೆ ಸಾಲಗಳು, ಶಿಕ್ಷಣ ಸಾಲಗಳು ಮತ್ತು ಉದ್ಯೋಗ ಆಧಾರಿತ ಸಾಲಗಳ ಕುರಿತು ಪರಾಮರ್ಶೆ ನಡೆಯಿತು. ಸಂಸದರು ರೈತರಿಗೆ ನೀಡಿರುವ ಬೆಳೆ ಸಾಲಗಳ ಪರಿಶೀಲನೆ ನಡೆಸಿ, ಬ್ಯಾಂಕ್ ಅಧಿಕಾರಿಗಳಿಗೆ ಎಲ್ಲಾ ಅರ್ಹ ರೈತರಿಗೆ ಕೃಷಿ ಸಾಲ ನೀಡುವಂತೆ ಸೂಚನೆ ನೀಡಿದರು.

ಶಿಕ್ಷಣ ಸಾಲಗಳ ಕುರಿತು ಆರ್‍ಬಿಐ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ವಿದ್ಯಾರ್ಥಿಗಳಿಗೆ ಜಾಮೀನಿಲ್ಲದೆ (ಓo ಅoಟಟಚಿಣeಡಿಚಿಟ) ಶಿಕ್ಷಣ ಸಾಲ ನೀಡುವಂತೆ ಆದೇಶಿಸಿದರು. ಕೆಲ ಬ್ಯಾಂಕುಗಳು ಬೆಳೆ ಸಾಲದ ಗುರಿ ತಲುಪಲು ವಿಫಲವಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, PಒಇಉP ಯೋಜನೆಯಡಿ ಉದ್ಯಮ ಸಾಲಗಳ ಅನುಮೋದನೆಯನ್ನು ಗುರಿಯಂತೆ ಪೂರೈಸಲು ಸೂಚಿಸಿದರು.
ಸಂಸದರು ಮೆಹಕರನಲ್ಲಿ ಎಸ್‍ಬಿಐ ಶಾಖೆ, ಮತ್ತು ಔರಾದ್ ಪಟ್ಟಣದಲ್ಲಿ ಹೆಚ್ಚುವರಿ ಶಾಖೆ ತೆರೆಯುವ ಸಾಧ್ಯತೆಗಳ ಕುರಿತು ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು ಮತ್ತು ರೈತರು, ವಿದ್ಯಾರ್ಥಿಗಳು, ಹಾಗೂ ಯುವ ಉದ್ಯಮಿಗಳಿಗೆ ಅಗತ್ಯವಿರುವ ಹಣಕಾಸು ನೆರವನ್ನು ಸುಗಮವಾಗಿ ಒದಗಿಸುವಂತೆ ಬ್ಯಾಂಕ ಅಧಿಕಾರಿಗಳಿಗೆ ಸೂಚಿಸಿದರು.


ಈ ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಗಿರೀಶ ಬದೋಲೆ, ಲಿಡ್ ಬ್ಯಾಂಕ್ ವ್ಯವಸ್ಥಾಪಕರಾದ ಸತೀಶಕುಮಾರ ಗಾಯಕವಾಡಿ, ಜಿಲ್ಲಾ ವಿವಿಧ ಬ್ಯಾಂಕಿಂಗ್ ಮುಖ್ಯಸ್ಥರು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Author

One Comment

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!