ಬೆಂಗಳೂರು.04.ಮಾರ್ಚ.25:- ಇಂದು ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿನ ಲೋಪಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಕುರಿತಂತೆ ಈಗಾಗಲೇ ಕೆಪಿಎಸ್ಸಿ ಮತ್ತು ಕೆಇಎ ಅಧಿಕಾರಿಗಳ ಜತೆಗೆ ನಾವು ಸಭೆ ನಡೆಸಿದ್ದೇವೆ.
ಕೆಪಿಎಸ್ಸಿ ಪರೀಕ್ಷೆ ಪ್ರಕ್ರಿಯೆಯಲ್ಲಿ ಕರ್ನಾಟಕ ಕೇಡರ್ ಅಧಿಕಾರಿಗಳು ಇರಬಾರದು ಎಂಬ ಹೈಕೋರ್ಟ್ ಆದೇಶದ ಕಾರಣದಿಂದಾಗಿ ಹೊರಗಿನ ಕೇಡರ್ ಅಧಿಕಾರಿಗಳನ್ನು ಅಧ್ಯಕ್ಷರನ್ನಾಗಿ ಮಾಡಲಾಗುತ್ತಿದೆ. ಅನುವಾದದ ವೇಳೆ ತಂತ್ರಜ್ಞಾನ ಬಳಕೆ ಮಾಡಲು ಹೋಗಿ ನಮ್ಮ ಜನರಿಗೆ ಅನ್ಯಾಯವಾಗಿದೆ. ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲಾಗುತ್ತಿದೆ.
ನಮ್ಮ ಸರ್ಕಾರದ ಆದ್ಯತೆ ಯುವಜನರಿಗೆ ಉದ್ಯೋಗ ದೊರಕಿಸಿಕೊಡುವುದಾಗಿದೆ. ಕೆಪಿಎಸ್ಸಿ ಸುಧಾರಣೆಗೆ ಚರ್ಚೆ ನಡೆದಿದೆ. ಇದನ್ನು ಸರಿಪಡಿಸದೆ ಇದ್ದರೆ ಯುವಜನತೆಗೆ ಮೋಸ ಮಾಡಿದಂತಾಗಲಿದೆ. ಖಂಡಿತವಾಗಿಯೂ ನಾವು ಅವರ ಸಮಸ್ಯೆಗೆ ಸ್ಪಂದಿಸುತ್ತೇವೆ.
