09/06/2025 9:52 AM

Translate Language

Home » ಲೈವ್ ನ್ಯೂಸ್ » ಮಹಾರಾಷ್ಟ್ರದಲ್ಲಿ ಮಹಾಯುವತಿ ಸರ್ಕಾರ ಸದೃಢವಾಗಿದೆ: ಶಿಂಧೆ, ಫ‌ಡ್ನವೀಸ್‌, ಅಜಿತ್‌ ಪವಾರ್‌ ಸ್ಪಷ್ಟನೆ

ಮಹಾರಾಷ್ಟ್ರದಲ್ಲಿ ಮಹಾಯುವತಿ ಸರ್ಕಾರ ಸದೃಢವಾಗಿದೆ: ಶಿಂಧೆ, ಫ‌ಡ್ನವೀಸ್‌, ಅಜಿತ್‌ ಪವಾರ್‌ ಸ್ಪಷ್ಟನೆ

Facebook
X
WhatsApp
Telegram

ಮುಂಬೈ.03.ಮಾರ್ಚ್.25:- ಮಹಾರಾಷ್ಟ್ರದಲ್ಲಿ ಮಹಾಯುವತಿ ಸರ್ಕಾರ ಬಗ್ಗೇ ಜನ ಹೂಹ ಪೋಹಗಾಳಿ ಎಬ್ಬಿಸಿದ್ದಾರೆ ಅಧಿಕಾರದಲ್ಲಿರುವ “ಮಹಾಯುತಿ’ ಮೈತ್ರಿಕೂಟದಲ್ಲಿ ಭಿನ್ನಮತ ಉಂಟಾಗಿದೆ ಎಂಬ ಎಂಬ ವದಂತಿಗಳ ಬೆನ್ನಲ್ಲೇ ಮೈತ್ರಿಕೂಟದಲ್ಲಿರುವ ಮೂವರು ನಾಯಕರು ಸ್ಪಷ್ಟನೆ ಕೊಟ್ಟಿದ್ದು, ಮಹಾಯುತಿ ಸದೃಢವಾಗಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಸಿಎಂ ಫ‌ಡ್ನವೀಸ್‌, ಡಿಸಿಎಂ ಅಜಿತ್‌ ಪವಾರ್‌ ಸಮ್ಮುಖದಲ್ಲಿ ಮಾತನಾಡಿದ ಏಕನಾಥ ಶಿಂಧೆ, ನೀವು ಎಷ್ಟಾದರೂ ವದಂತಿ ಹಬ್ಬಿಸಿ.ಮಹಾರಾಷ್ಟ್ರದ ಬಿರು ಬಿಸಿಲಿನಲ್ಲಿ ನಾವು ಶೀತಲ ಸಮರ ಮಾಡುವುದಾದರೂ ಹೇಗೆ’ ಎಂದು ಹಾಸ್ಯಚಟಾಕಿ ಹಾರಿಸಿದ್ದಾರೆ.

ಈ ಮೂಲಕ ಮೈತ್ರಿಕೂಟದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದು ನಮ್ಮ 2ನೇ ಬಜೆಟ್‌ ಅಧಿವೇಶನವಾಗಿದೆ.

ಆದರೆ ಈ ಬಾರಿ ನಮ್ಮ ಪಾತ್ರಗಳು ಬಲಾಗಿವೆಯಷ್ಟೇ. ಅಜಿತ್‌ ಅಣ್ಣ ಪಾತ್ರ ಹಾಗೇ ಉಳಿದುಕೊಂಡಿದೆ’ ಎಂದು ಶಿಂಧೆ ಹೇಳಿದ್ದಾರೆ.

ಫ‌ಡ್ನವೀಸ್‌ ಮಾತನಾಡಿ ಮಹಾಯುತಿಯಲ್ಲಿ ಒಡಕು ಪ್ರಶ್ನಿಸುತ್ತಿರುವ ವಿಪಕ್ಷದ ಒಕ್ಕೂಟ ಸದೃಢವಾಗಿದೆ ಯೇ’ ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ಫ‌ಡ್ನವೀಸ್‌ ನಡೆಸಿದ ಸಭೆಗೆ ಏಕನಾಥ ಶಿಂಧೆ ಗೈರಾಗಿದ್ದಾಗ ಮೈತ್ರಿಕೂಟದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬ ವದಂತಿ ಕೇಳಿಬಂದಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಶಿಂಧೆ ನನ್ನನ್ನು ಹಗುರವಾಗಿ ಪರಿಗಣಿಸಬೇಡಿ ಎಂದಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!