09/06/2025 2:13 AM

Translate Language

Home » ಲೈವ್ ನ್ಯೂಸ್ » ರಂಜಾನ್-ಹೋಳಿ ಹಬ್ಬ ಸೌಹಾರ್ದ ಸಭೆ:
ಶಾಂತಿ ಸುವ್ಯವಸ್ಥೆ, ಸಹೋದರತ್ವದಿಂದ ಆಚರಿಸಲು ಕರೆ.!

ರಂಜಾನ್-ಹೋಳಿ ಹಬ್ಬ ಸೌಹಾರ್ದ ಸಭೆ:
ಶಾಂತಿ ಸುವ್ಯವಸ್ಥೆ, ಸಹೋದರತ್ವದಿಂದ ಆಚರಿಸಲು ಕರೆ.!

Facebook
X
WhatsApp
Telegram

ಬೀದರ.01.ಮಾರ್ಚ.25:- ಬೀದರ ಜಿಲ್ಲೆಯಾದ್ಯಂತ ರಂಜಾನ್ ಹಾಗೂ ಹೋಳಿ ಹಬ್ಬಗಳನ್ನು ಶಾಂತಿಯುತವಾಗಿ ಸಹೋದರತ್ವ ಭಾವನೆಯಿಂದ ಕೋಮು ಸೌಹಾರ್ದತೆಗೆ ಯಾವುದೇ ರೀತಿಯಲ್ಲಿ ಧಕ್ಕೆ ಬಾರದಂತೆ ಆಚರಿಸುವಂತೆ ಬೀದರ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರ ಇಂದಿಲ್ಲಿ ಕರೆ ನೀಡಿದರು.


ಬೀದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿಂದು ಈ ಕುರಿತು ವಿವಿಧ ಸಮುದಾಯಗಳ ಗಣ್ಯರ ನಾಯಕರ ಸಭೆಯನ್ನುದ್ದೇಶಿಸುತ್ತಾ ಅವರು ಮಾತನಾಡಿದರು.
ಹೋಳಿ ಹಬ್ಬದ ದಿನದಂದು ಮಧ್ಯಾಹ್ನ 12:30 ಗಂಟೆಯವರೆಗೆ ಎಲ್ಲರೂ ಬಣ್ಣದಾಟವನ್ನು ಮುಗಿಸಬೇಕು.

ಈ ಸಂದರ್ಭದಲ್ಲಿ ಯಾವುದೇ ವ್ಯಕ್ತಿಗಳಿಗೆ ಬಣ್ಣದಿಂದ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಅದೇ ರೀತಿ ರಂಜಾನ್ ಹಬ್ಬದ ಪ್ರಯುಕ್ತ ಓಲ್ಡ್ ಸಿಟಿಯಲ್ಲಿ ವ್ಯಾಪಾರ ಮಾಡಲು ವ್ಯಾಪರಸ್ಥರಿಗೆ ಮೊದಲನೆ ಹತ್ತು ದಿನ ರಾತ್ರಿ 1 ಗಂಟೆಯವರೆಗೆ, ಎರಡನೇ ಹತ್ತು 10 ದಿನ ರಾತ್ರಿ 1 ಗಂಟೆಯವರೆಗೆ, ಮೂರನೆ ಹತ್ತು ದಿನ ಬೆಳಗ್ಗಿನವರೆಗೆ ಸಮಯವಕಾಶ ಕಲ್ಪಿಸಿ ವ್ಯಾಪರಸ್ಥರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.


ನಗರಸಭೆ ಅಧ್ಯಕ್ಷರಾದ ಎಂ.ಡಿ.ಗೌಸ್ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವು ಕೂಡ ಹಿಂದು-ಮುಸ್ಲಿಂ ಬಾಂಧವರು ಪ್ರೀತಿ, ಭಾಂದವ್ಯದಿಂದ ಆಚರಿಸುತ್ತಾ ಬಂದಿದ್ದೇವೆ. ಯಾವುದೇ ರೀತಿ ಅಹಿತಕರ ನಡೆಯದಂತೆ ನೋಡಿಕೊಳ್ಳುತ್ತೇವೆ ಎಂದರು.


ಇದೇ ಸಂದರ್ಭದಲ್ಲಿ ಹಿಂದು-ಮುಸ್ಲಿಂ ಸಮುದಾಯದ ಮುಖಂಡರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.


ಈ ಸಭೆಯಲ್ಲಿ ನಗರಸಭೆ ಸದಸ್ಯರಾದ ಇರ್ಶಾದ ಪೈಲ್ವಾನ, ಅಬ್ದುಲ್ ಅಜೀಜ್ ಮುನ್ನಾ, ಡಾ.ಮಕಸೂದ ಚಂದಾ, ಶಾಹಿನ ಪವೇಜ್, ಎಂ.ಕೆ.ಬೇಗ, ನಂದಕಿಶೋರ ಶಮಾ, ಸೂರ್ಯಕಾಂತ ಶೆಟಕಾರ, ಮನೋಹರ ದಂಡೆ, ಡಿ.ವೈ.ಎಸ್.ಪಿ. ಶಿವನಗೌಡ ಪಾಟೀಲ ಸೇರಿದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು, ವಿವಿಧ ಸಮುದಾಯದ ಮುಖಂಡರುಗಳು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!