10/06/2025 4:09 AM

Translate Language

Home » ಲೈವ್ ನ್ಯೂಸ್ » ರಾಜ್ಯದಲ್ಲಿ 70 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆ ಖಾಲಿ, ಸರ್ಕಾರ ಈ ಹುದ್ದೆಗಳನ್ನು ಭರ್ತಿ ಮಾಡಿ, 27ನೇ ಸಾಹಿತ್ಯ ಸಮ್ಮೇಳನ ಆಗ್ರಹಿಸಿದೆ.!

ರಾಜ್ಯದಲ್ಲಿ 70 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆ ಖಾಲಿ, ಸರ್ಕಾರ ಈ ಹುದ್ದೆಗಳನ್ನು ಭರ್ತಿ ಮಾಡಿ, 27ನೇ ಸಾಹಿತ್ಯ ಸಮ್ಮೇಳನ ಆಗ್ರಹಿಸಿದೆ.!

Facebook
X
WhatsApp
Telegram

ಪ್ರಜಾವಾಣಿ ಸುಧಿ…

ಮಂಗಳೂರು ವಿಶ್ವವಿದ್ಯಾಲಯದ ಮಂಗಳ ಸಭಾಂಗಣದಲ್ಲಿ ಶನಿವಾರ ನಡೆದ ಸಮಾರೋಪ ಸಮಾರಂಭದಲ್ಲಿ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಕೋಶಾಧ್ಯಕ್ಷ ಐತ್ತಪ್ಪ ನಾಯ್ಕ್ ಸಮ್ಮೇಳನದ ನಿರ್ಣಯ ಮಂಡಿಸಿದರು.

(ಮಂಗಳ ಗಂಗೋತ್ರಿ): ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಶಿಕ್ಷಕ ಹುದ್ದೆಗಳಿಗೆ ನೇಮಕಾತಿ ನಡೆಯದೆ ಹಲವಾರು ವರ್ಷಗಳು ಕಳೆದಿವೆ.

70 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆ ಖಾಲಿ ಇದ್ದು, ಸರ್ಕಾರ ಈ ಹುದ್ದೆಗಳನ್ನು ಭರ್ತಿ ಮಾಡಿ, ಮಕ್ಕಳ ಕಲಿಕೆಗೆ ಅನುಕೂಲ ಮಾಡಿಕೊಡಬೇಕು ಎಂದು ಶನಿವಾರ ಮುಕ್ತಾಯಗೊಂಡ ದಕ್ಷಿಣ ಕನ್ನಡ ಜಿಲ್ಲಾ 27ನೇ ಸಾಹಿತ್ಯ ಸಮ್ಮೇಳನ ಆಗ್ರಹಿಸಿದೆ.

* ಅನುದಾನಿತ ಶಾಲೆಗಳಲ್ಲಿ ಹತ್ತಾರು ವರ್ಷಗಳಿಂದ ಯಾವುದೇ ಹುದ್ದೆ ಭರ್ತಿ ಮಾಡಿಲ್ಲ, ಪರಿಣಾಮವಾಗಿ ಹಲವಾರು ಶಾಲೆಗಳು ಶಿಕ್ಷಕರ ಕೊರತೆಯಿಂದ ಬಾಗಿಲು ಮುಚ್ಚಿವೆ.

* ಕನ್ನಡ ಶಾಲೆಗಳಲ್ಲಿ ಅಕ್ಷರ ದಾಸೋಹ, ಪ್ರತಿಭಾ ಕಾರಂಜಿ ಇನ್ನಿತರ ಕೆಲಸಗಳು ಶಿಕ್ಷಕರ ಮೇಲೆ ಒತ್ತಡ ಹೆಚ್ಚಿಸುತ್ತಿದ್ದು, ಬೋಧನೆಗೆ ಕಾಲಾವಕಾಶ ಸಿಗುತ್ತಿಲ್ಲ.

ಇದರಿಂದ ಮಕ್ಕಳ ಶೈಕ್ಷಣಿಕ ಗುಣಮಟ್ಟ ಕಡಿಮೆಯಾಗುತ್ತಿವೆ. ಸಮಸ್ಯೆಯನ್ನು ಬಗೆಹರಿಸಲು ಎಲ್ಲ ಸರ್ಕಾರಿ, ಅನುದಾನಿತ ಪ್ರಾಥಮಿಕ ಶಾಲೆಗಳಿಗೆ ಒಬ್ಬರು ಗುಮಾಸ್ತರ ನೇಮಕ ಮಾಡಬೇಕು.

* ಕರ್ನಾಟಕದ ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣದ ಪದವಿ ತರಗತಿಗಳಲ್ಲಿ ಕನ್ನಡ ಭಾಷಾ ಕಲಿಕೆ ಹಾಗೂ ಕನ್ನಡ ಐಚ್ಛಿಕ ವಿಷಯಗಳನ್ನು ಪಠ್ಯಕ್ರಮದಲ್ಲಿ ಕೈ ಬಿಡುತ್ತಿರುವುದು ಖಂಡನೀಯ. ಪದವಿಯಲ್ಲಿ ನಾಲ್ಕು ಸೆಮಿಸ್ಟರ್‌ಗಳಲ್ಲಿ ಕನ್ನಡ ಬೋಧಿಸುವುದನ್ನು ಕಡ್ಡಾಯ ಮಾಡಬೇಕು.

ಅರ್ಥಪೂರ್ಣ ಗೋಷ್ಠಿಗಳು: ‘ಹಿರಿಯರ ಕುರಿತು ಯುವ ಚಿಂತನೆ’ ಎರಡನೇ ದಿನದ ಮೊದಲ ಗೋಷ್ಠಿ. ವಿದ್ಯಾರ್ಥಿಗಳು, ಪ್ರಾಧ್ಯಾಪಕರು ವಿಷಯ ಮಂಡಿಸಿದರು. ಮೇಲ್ತೆನೆ ತಂಡದವರ ಬ್ಯಾರಿ ಹಾಡುಗಳಿಗೆ ವಿದ್ಯಾರ್ಥಿಗಳು ಕರತಾಡನದೊಂದಿಗೆ ಪ್ರಶಂಸೆ ಸೂಚಿಸಿದರು.

* ಅನುದಾನಿತ ಶಾಲೆಗಳಲ್ಲಿ ಹತ್ತಾರು ವರ್ಷಗಳಿಂದ ಯಾವುದೇ ಹುದ್ದೆ ಭರ್ತಿ ಮಾಡಿಲ್ಲ, ಪರಿಣಾಮವಾಗಿ ಹಲವಾರು ಶಾಲೆಗಳು ಶಿಕ್ಷಕರ ಕೊರತೆಯಿಂದ ಬಾಗಿಲು ಮುಚ್ಚಿವೆ.

* ಕನ್ನಡ ಶಾಲೆಗಳಲ್ಲಿ ಅಕ್ಷರ ದಾಸೋಹ, ಪ್ರತಿಭಾ ಕಾರಂಜಿ ಇನ್ನಿತರ ಕೆಲಸಗಳು ಶಿಕ್ಷಕರ ಮೇಲೆ ಒತ್ತಡ ಹೆಚ್ಚಿಸುತ್ತಿದ್ದು, ಬೋಧನೆಗೆ ಕಾಲಾವಕಾಶ ಸಿಗುತ್ತಿಲ್ಲ. ಇದರಿಂದ ಮಕ್ಕಳ ಶೈಕ್ಷಣಿಕ ಗುಣಮಟ್ಟ ಕಡಿಮೆಯಾಗುತ್ತಿವೆ. ಸಮಸ್ಯೆಯನ್ನು ಬಗೆಹರಿಸಲು ಎಲ್ಲ ಸರ್ಕಾರಿ, ಅನುದಾನಿತ ಪ್ರಾಥಮಿಕ ಶಾಲೆಗಳಿಗೆ ಒಬ್ಬರು ಗುಮಾಸ್ತರ ನೇಮಕ ಮಾಡಬೇಕು.

* ಕರ್ನಾಟಕದ ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣದ ಪದವಿ ತರಗತಿಗಳಲ್ಲಿ ಕನ್ನಡ ಭಾಷಾ ಕಲಿಕೆ ಹಾಗೂ ಕನ್ನಡ ಐಚ್ಛಿಕ ವಿಷಯಗಳನ್ನು ಪಠ್ಯಕ್ರಮದಲ್ಲಿ ಕೈ ಬಿಡುತ್ತಿರುವುದು ಖಂಡನೀಯ. ಪದವಿಯಲ್ಲಿ ನಾಲ್ಕು ಸೆಮಿಸ್ಟರ್‌ಗಳಲ್ಲಿ ಕನ್ನಡ ಬೋಧಿಸುವುದನ್ನು ಕಡ್ಡಾಯ ಮಾಡಬೇಕು.

ಅರ್ಥಪೂರ್ಣ ಗೋಷ್ಠಿಗಳು: ‘ಹಿರಿಯರ ಕುರಿತು ಯುವ ಚಿಂತನೆ’ ಎರಡನೇ ದಿನದ ಮೊದಲ ಗೋಷ್ಠಿ. ವಿದ್ಯಾರ್ಥಿಗಳು, ಪ್ರಾಧ್ಯಾಪಕರು ವಿಷಯ ಮಂಡಿಸಿದರು. ಮೇಲ್ತೆನೆ ತಂಡದವರ ಬ್ಯಾರಿ ಹಾಡುಗಳಿಗೆ ವಿದ್ಯಾರ್ಥಿಗಳು ಕರತಾಡನದೊಂದಿಗೆ ಪ್ರಶಂಸೆ ಸೂಚಿಸಿದರು.

ಕೇಂದ್ರದ ಅಧ್ಯಕ್ಷ ತುಕಾರಾಂ ಪೂಜಾರಿ ಮಾತನಾಡಿ, ‘ಕಿತ್ತೂರು ರಾಣಿ ಚನ್ನಮ್ಮ, ಝಾನ್ಸಿರಾಣಿ ಲಕ್ಷ್ಮಿಬಾಯಿ ಇಂತಹ ಸಾಧಕಿಯರ ಸಾಲಿನಲ್ಲಿ ರಾಣಿ ಅಬ್ಬಕ್ಕ ಭಿನ್ನವಾಗಿ ನಿಲ್ಲುತ್ತಾರೆ. ಪೋರ್ಚುಗೀಸರಿಗೆ ನಮ್ಮ ನೆಲದಿಂದಲೇ ತೊಲಗಿ ಎಂದು ಘೋಷಣೆ ಕೂಗುವ ಮೂಲಕ ಅಬ್ಬಕ್ಕ ಆ ಕಾಲದಲ್ಲೇ ರಾಷ್ಟ್ರೀಯತೆಯ ಕಲ್ಪನೆ ಮೂಡಿಸಿದವರು’ ಎಂದರು.

ಐವರು ಅಬ್ಬಕ್ಕರು ಆಳಿಕ್ವೆ ನಡೆಸಿದ್ದರೂ, ಕಿರಿಯ ಅಬ್ಬಕ್ಕ ಹೆಚ್ಚು ಹೆಸರು ಗಳಿಸಿದವರು. ಪ್ರಭುವಿಗಿಂತ ಪ್ರಜೆಗಳು ಮುಖ್ಯ ಎಂಬ ವಿಚಾರಧಾರೆಯ ಅಬ್ಬಕ್ಕ, ಎಲ್ಲ ಜಾತಿ, ಧರ್ಮದವರನ್ನು ಸಮಾನವಾಗಿ ಗೌರವಿಸಿದವರು. ರಾಜಕೀಯ, ಸಾಮಾಜಿಕ, ಸಾಹಿತ್ಯ ಕ್ಷೇತ್ರಗಳಲ್ಲಿ ಅಬ್ಬಕ್ಕ ನಮಗೆ ಸ್ಫೂರ್ತಿಯಾಗಬೇಕು ಎಂದು ಹೇಳಿದರು.

‘ಕವಿತೆಗಳ ಕಥೆ: ಕವಿ ಕಾವ್ಯ ಸಂವಾದ’ದಲ್ಲಿ ರಾಧಾಕೃಷ್ಣ ಉಳಿಯತ್ತಡ್ಕ, ಸ್ಮಿತಾ ಅಮೃತರಾಜ್, ಚೇತನ್ ಸೋಮೇಶ್ವರ, ವಿಲ್ಸನ್ ಕಟೀಲ್ ಕವನ ವಾಚಿಸಿದರು. ಚುಟುಕು ಸಾಹಿತ್ಯ, ಕನ್ನಡ ವೈದ್ಯ ಸಾಹಿತ್ಯದ ಕುರಿತೂ ಚರ್ಚೆಗಳು ನಡೆದವು.

ಪ್ಲಾಸ್ಟಿಕ್ ರಹಿತ ಸಮ್ಮೇಳನ: ಊಟ, ಉಪಾಹಾರಗಳಿಗೆ ಸ್ಟೀಲ್ ಲೋಟ, ತಾಟು, ವೇದಿಕೆಯಲ್ಲೂ ಸ್ಟೀಲ್ ಬಾಟಲಿಗಳೇ ಮಿಂಚಿದವು. ಅತಿಥಿಗಳಿಗೆ ಸ್ಮರಣಿಕೆ ಜೊತೆಗೆ ಬಟ್ಟೆಯ ಚೀಲ ನೀಡಲಾಯಿತು. ಪ್ಲಾಸ್ಟಿಕ್ ರಹಿತ ಸಮ್ಮೇಳನಕ್ಕೆ ಪ್ರಶಂಸೆ ವ್ಯಕ್ತವಾಯಿತು.

ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಪತ್ರಕರ್ತ ಜೋಗಿ ಸಮಾರೋಪ ಭಾಷಣ ಮಾಡಿದರು.

ಸಮ್ಮೇಳನದ ಅಧ್ಯಕ್ಷ ಪ್ರಭಾಕರ ಶಿಶಿಲ, ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಎಂ.ಪಿ.ಶ್ರೀನಾಥ್, ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ, ಪ್ರಮುಖರಾದ ಸತೀಶ್ಚಂದ್ರ ಎಸ್, ಬಿ.ಎಂ.ಕುಮಾರ್ ಹೆಗ್ಡೆ, ಕಿರಣ್‌ಚಂದ್ರ ಪುಷ್ಪಗಿರಿ, ನೀಲಾವರ ಸುರೇಂದ್ರ ಅಡಿಗ, ಸೋಮಣ್ಣ ಹೊಂಗಳ್ಳಿ ಮತ್ತಿತರರು ಇದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ಮಣ್ಣು ಬಹುತ್ವದ ಮಣ್ಣು. ಅದರ ಮೇಲ್ಮೈಯಲ್ಲಿ ಯಾವುದೇ ಸಂಘರ್ಷಗಳು ಇದ್ದರೂ ಕೂಡ ಆಳದಲ್ಲಿ ಸಾಮರಸ್ಯವಿದೆ ಶಕ್ತಿ ಅಡಗಿದೆ.

-ಬಿ.ಎ.ವಿವೇಕ ರೈ ಸಾಹಿತಿ

‘ಪತ್ನಿಗೆ ತಾಯಿ ಸ್ಥಾನದ ಗೌರವ’ ‘ಒಳ್ಳೆಯ ಹೆಣ್ಣು ಪತ್ನಿಯಾದರೆ ಪುರುಷ ಏನನ್ನೂ ಸಾಧಿಸಬಹುದು ಎನ್ನುವುದನ್ನು ನಾನು ಸ್ವತಃ ಅನುಭವಿಸಿದ್ದೇನೆ. ನಾನು ಎರಡು ವರ್ಷ ಖಿನ್ನತೆಗೆ ಜಾರಿದ ಸಂದರ್ಭವದು. ಅಕ್ಷರಶಃ ನರಕದ ಬದುಕು. ಮಡದಿಯೊಬ್ಬಳು ತಾಯಿಯ ಪಾತ್ರವನ್ನು ಹೇಗೆ ನಿರ್ವಹಿಸಬಲ್ಲಳು ಎಂಬುದನ್ನು ಆ ಸಂದರ್ಭದಲ್ಲಿ ನಾನು ಅರಿತೆ.

ನನ್ನ ಬದುಕು ಸಹ್ಯ ಮಾಡಿದವಳು ನನ್ನ ಪತ್ನಿ. ಆಗಿನಿಂದ ನಾನು ಪತ್ನಿಯನ್ನು ತಾಯಿ ಸ್ಥಾನದಲ್ಲಿಟ್ಟು ಗೌರವಿಸುತ್ತೇನೆ’ ಎಂದು ‘ಅಧ್ಯಕ್ಷರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಸಮ್ಮೇಳನದ ಅಧ್ಯಕ್ಷ ಪ್ರಭಾಕರ ಶಿಶಿಲ ಅವರು ತಮ್ಮ ಅನುಭವ ಹೇಳಿಕೊಂಡರು.

ರಸ ಪ್ರಸಂಗಗಳ ಆಮೋದ ಸಾಹಿತಿ- ಸಾಹಿತ್ಯ ರಸಪ್ರಸಂಗಗಳು ಗೋಷ್ಠಿ ಪ್ರೇಕ್ಷಕರಿಗೆ ಮುದ ನೀಡಿತು. ಆದಿಕವಿ ಪಂಪನ ‘ಮನುಷ್ಯ ಜಾತಿ ತಾನೊಂದೆ ವಲಂ’ ನುಡಿಯನ್ನು ನೆನಪಿಸಿದ ಪತ್ರಕರ್ತ ಬಿ.ಎಂ.ಹನೀಫ್ ಅವರು ಸಾಹಿತ್ಯ ಮುಖ್ಯವಾಗಿ ಕಲಿಸುವುದು ಪ್ರಜಾಪ್ರಭುತ್ವವನ್ನು.

ಅಭಿವ್ಯಕ್ತಿ ಸ್ವಾತಂತ್ರ್ಯ ಗೌರವಿಸುತ್ತಲೇ ಅದಕ್ಕೆ ಸಂಬಂಧಿಸಿದ ವಾಗ್ವಾದವನ್ನು ಗೌರವಯುತವಾಗಿ ನಡೆಸುವ ವಾತಾವರಣವನ್ನು ಸಾಹಿತಿಗಳು ಸೃಷ್ಟಿಸಬೇಕು ಎಂದರು. ಲೇಖಕ ನರೇಂದ್ರ ರೈ ದೇರ್ಲ ಹಾಗೂ ಜಯಪ್ರಕಾಶ್ ಮಾವಿನಕುಳಿ ಅವರು ಹೆಸರಾಂತ ಸಾಹಿತಿಗಳ ಒಡನಾಟ ರಸಪ್ರಸಂಗಗಳನ್ನು ಕಣ್ಣಿಗೆ ಕಟ್ಟುವಂತೆ ತೆರೆದಿಟ್ಟರು.

ಸೆಳೆದ ಪಟ್ಟಾಂಗ ಕಟ್ಟೆ ಎರಡನೇ ದಿನವೂ ಪಟ್ಟಾಂಗ ಕಟ್ಟೆ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆಯುವಲ್ಲಿ ಯಶಸ್ವಿಯಾಯಿತು. ಸಭಾಂಗಣದಲ್ಲಿಷ್ಟೇ ಪ್ರೇಕ್ಷಕರು ಪಟ್ಟಾಂಗ ಕಟ್ಟೆಯ ಎದುರಿಗಿದ್ದರು. ಸಮ್ಮೇಳನಕ್ಕೆ ಬಂದವರು ವಿಶೇಷವಾಗಿ ಶಾಲಾ ಮಕ್ಕಳಿಗೆ ನಾಟ್ಯ ನೃತ್ಯ ಹಾಡು ಮಿಮಿಕ್ರಿ ಅಭಿವ್ಯಕ್ತಿಗೆ ಈ ಕಟ್ಟೆ ವೇದಿಕೆ ಒದಗಿಸಿತು.

ಈ ಅನೌಪಚಾರಿಕ ವೇದಿಕೆ ಎಲ್ಲರಿಗೂ ಮುಕ್ತವಾಗಿತ್ತು. ಮೋಹನ ಶಿರ್ಲಾಲು ಅವರ ನಿರೂಪಣೆ ಇದಕ್ಕೆ ಇನ್ನಷ್ಟು ಮೆರುಗು ತುಂಬಿತು.

Source: ಪ್ರಜಾವಾಣಿ

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!