ಬೆಂಗಳೂರು.21.ಫೆ.25:- ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಮಸೂದೆ 2025 ಪ್ರಕಾರ ವಿಶ್ವವಿದ್ಯಾಲಯಗಳ ಕುಲಪತಿ ನೇಮಕದ ಅಧಿಕಾರವನ್ನು ರಾಜ್ಯಪಾಲರಿಂದ ಕಿತ್ತುಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರ, ಘಟಿಕೋತ್ಸವದ ‘ಗೌರವ’ಕ್ಕೆ ಅವರನ್ನು ಸೀಮಿತಗೊಳಿಸುವತ್ತ ಹೆಜ್ಜೆ ಇಟ್ಟಿದೆ. ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ-2000ದ ಪ್ರಕಾರ ಕುಲಪತಿ ನೇಮಕಾತಿಗೆ ಮೂವರು ಸದಸ್ಯರನ್ನು ಒಳಗೊಂಡ ಶೋಧನಾ ಸಮಿತಿಯನ್ನು ರಾಜ್ಯ ಸರ್ಕಾರ ರಚಿಸುತ್ತಿತ್ತು ಇದಕ್ಕೆ ತಿದ್ದುಪಡಿಯ ಮೂಲಕ ಕರ್ನಾಟಕ ವಿಶ್ವವಿದ್ಯಾಲಯ ಮಸೂದೆ 2025 ರಚನೆ ಮಾಡಲಾಗಿದೆ.
ರಾಜ್ಯದ ವಿಶ್ವವಿದ್ಯಾಲಯ ಕುಲಪತಿಗಳ ನೇಮಕಾತಿ ಅಧಿಕಾರವನ್ನು ಸಂಪೂರ್ಣವಾಗಿ ರಾಜ್ಯಪಾಲರಿಗೆ ನೀಡಲು ವಿಶ್ವವಿದ್ಯಾಲಯ ಅನುದಾನ ಆಯೋಗ ನಿಯಮಗಳಿಗೆ ತಿದ್ದುಪಡಿ ತರಲು ಮುಂದಾಗಿದ್ದು, ಕರಡು ಬಿಡುಗಡೆ ಮಾಡಿದೆ.
ಈ ಕುರಿತು ಆರು ರಾಜ್ಯಗಳ ಉನ್ನತ ಶಿಕ್ಷಣ ಸಚಿವರು ಈಚೆಗೆ ಬೆಂಗಳೂರಿನಲ್ಲಿ ಸಮಾವೇಶ ನಡೆಸಿ, ಕೇಂದ್ರಕ್ಕೆ ಸಡ್ಡು ಹೊಡೆದಿದ್ದರು. ಇದರ ನಡುವೆಯೇ ರಾಜ್ಯ ಸರ್ಕಾರ ತಿದ್ದುಪಡಿ ಮಸೂದೆ ಮಂಡನೆಗೆ ಸಿದ್ಧತೆ ನಡೆಸಿದೆ.
ಕುಲಪತಿಗಳ ನೇಮಕವೂ ಸೇರಿದಂತೆ ವಿಶ್ವವಿದ್ಯಾಲಯಗಳ ಆಡಳಿತದಲ್ಲಿ ರಾಜ್ಯ ಸರ್ಕಾರಕ್ಕೆ ಪರಮಾಧಿಕಾರ ನೀಡುವ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಮಸೂದೆ-2025 ಸಿದ್ಧವಾಗಿದ್ದು, ಫೆ.3ರಿಂದ ಆರಂಭವಾಗುವ ಬಜೆಟ್ ಅಧಿವೇಶನದಲ್ಲೇ ಮಂಡಿಸಲಾಗುತ್ತಿದೆ.
ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ-2000ದ ಪ್ರಕಾರ ಕುಲಪತಿ ನೇಮಕಾತಿಗೆ ಮೂವರು ಸದಸ್ಯರನ್ನು ಒಳಗೊಂಡ ಶೋಧನಾ ಸಮಿತಿಯನ್ನು ರಾಜ್ಯ ಸರ್ಕಾರ ರಚಿಸುತ್ತಿತ್ತು. ಸಮಿತಿಯ ಸದಸ್ಯರನ್ನೂ ಶಿಫಾರಸು ಮಾಡುವ ಅಧಿಕಾರವನ್ನು, ವಿಶ್ವವಿದ್ಯಾಲಯಗಳ ಕುಲಾಧಿಪತಿಯೂ ಆಗಿರುವ ರಾಜ್ಯಪಾಲರು ಹೊಂದಿದ್ದರು. ಆಯಾ ವಿಶ್ವವಿದ್ಯಾಲಯದ ಸಿಂಡಿಕೇಟ್, ವಿಶ್ವವಿದ್ಯಾಲಯ ಅನುದಾನ ಆಯೋಗ ಹಾಗೂ ರಾಜ್ಯಪಾಲರು ತಲಾ ಒಬ್ಬರನ್ನು ನೇಮಕ ಮಾಡುವ ಅಧಿಕಾರ ಹೊಂದಿದ್ದಾರೆ. ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡುವ ಸದಸ್ಯ ಸಮಿತಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ. ಹೊಸ ಕಾಯ್ದೆಯಲ್ಲಿ ಶೋಧನಾ ಸಮಿತಿಗೆ ಸದಸ್ಯರನ್ನು ನೇಮಿಸುವ ರಾಜ್ಯಪಾಲರ ಅಧಿಕಾರವನ್ನೂ ಮೊಟಕುಗೊಳಿಸಲಾಗಿದೆ.
ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳ ಶ್ರೇಣಿಗಿಂತ ಕಡಿಮೆಯಿಲ್ಲದ, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅನುಭವ ಇರುವ, ಸಂಸತ್ತಿನ ಮೂಲಕ ಸ್ಥಾಪಿಸಲಾದ ರಾಷ್ಟ್ರೀಯ ಸಂಸ್ಥೆ ಅಥವಾ ಸಂಸ್ಥೆಯ ಮುಖ್ಯಸ್ಥರನ್ನೇ ಶೋಧನಾ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಗುತ್ತದೆ. ಶೋಧನಾ ಸಮಿತಿ ಅಂತಿಮಗೊಳಿಸಿದ ಮೂವರ ಪಟ್ಟಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ನಂತರ ಪಟ್ಟಿಯನ್ನು ಸರ್ಕಾರವು ರಾಜ್ಯಪಾಲರಿಗೆ ಕಳುಹಿಸುತ್ತದೆ. ರಾಜ್ಯಪಾಲರು ಸರ್ಕಾರದ ಮುಖ್ಯಸ್ಥರ ಜತೆ ಚರ್ಚಿಸಿ, ಒಬ್ಬರನ್ನು ನೇಮಕ ಮಾಡುತ್ತಾರೆ. ಆದರೆ, ಹೊಸ ಮಸೂದೆಯಲ್ಲಿ ಶೋಧನಾ ಸಮಿತಿ ಸಿದ್ಧಪಡಿಸಿದ ಮೂವರ ಪಟ್ಟಿಯಲ್ಲಿ ಹೆಚ್ಚಿನ ಅರ್ಹತೆ ಇರುವ ಒಬ್ಬರನ್ನು ಕುಲಪತಿಯಾಗಿ ಸರ್ಕಾರದ ಮುಖ್ಯಸ್ಥರೇ ನೇಮಿಸುತ್ತಾರೆ.
ಕುಲಪತಿ ಹುದ್ದೆಗೆ ಸಮರ್ಥರು ಸಿಗದಿದ್ದರೆ ಪಟ್ಟಿ ತಿರಸ್ಕಾರ
ಕುಲಪತಿ ನೇಮಕಕ್ಕೆ ರಚಿಸಿದ ಶೋಧನಾ ಸಮಿತಿ ಮೂವರು ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಅವರ ಸಂಪೂರ್ಣ ವಿವರಗಳೊಂದಿಗೆ ಸರ್ಕಾರಕ್ಕೆ ಸಲ್ಲಿಸಬೇಕು. ಮೂವರಲ್ಲಿ ಹೆಚ್ಚು ಅರ್ಹತೆ ಇರುವ ಒಬ್ಬರನ್ನು ರಾಜ್ಯ ಸರ್ಕಾರ ಒಂದು ತಿಂಗಳ ಒಳಗೆ ನೇಮಿಸುತ್ತದೆ. ಹೊಸ ಮಸೂದೆಯ ನಿಯಮದಂತೆ ಸಮಿತಿ ಶಿಫಾರಸು ಮಾಡಿದ ಪಟ್ಟಿಯಲ್ಲಿನ ಯಾರೊಬ್ಬರೂ ಸಮರ್ಥ ಎನಿಸದಿದ್ದರೆ, ನೇಮಕ ಮಾಡಲು ಸರ್ಕಾರ ನಿರಾಕರಿಸಬಹುದು. ಅರ್ಹ ಅಭ್ಯರ್ಥಿಗಳನ್ನು ಮರು ಶೋಧನೆ ಮಾಡಲು ಅದೇ ಸಮಿತಿಗೆ ಸೂಚಿಸಬಹುದು, ಇಲ್ಲವೇ ಹೊಸ ಮಿತಿ ರಚಿಸಬಹುದು. ನಿರ್ದಿಷ್ಟಪಡಿಸಿದ ಕಾರಣಗಳಿಗಾಗಿ ಕುಲಪತಿ ನೇಮಕಾತಿಯನ್ನು
ಸ್ಥಗಿತಗೊಳಿಸಬಹುದು. ಮರು ಅಧಿಸೂಚನೆ ಹೊರಡಿಸಿ, ಹೊಸದಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸಬಹುದು.
ನೇಮಕವಾದವರು ನಾಲ್ಕು ವರ್ಷ ಅವಧಿ ಅಥವಾ 67ರ ವಯೋಮಿತಿ ಯಾವುದು ಮೊದಲೋ ಅಲ್ಲಿಯವರೆಗೆ ಕುಲಪತಿಗಳಾಗಿ ಕೆಲಸ ಮಾಡುತ್ತಾರೆ.
ವಿಶೇಷ ವಿ.ವಿಗೆ ಅದೇ ವಿಷಯದ ಕುಲಪತಿಗಳಿಗೆ ಅದೇ ವಿಷಯದಲ್ಲಿ ಸಾಕಷ್ಟು ಅನುಭವ ಇರುವ, ಅರ್ಹ ಅಧ್ಯಾಪಕರ ಆಯ್ಕೆಯನ್ನು ಕಡ್ಡಾಯಗೊಳಿಸಲಾಗಿದೆ.
ರಾಜ್ಯದಲ್ಲಿ ವಿಶೇಷ ಉದ್ದೇಶಗಳಿಗಾಗಿ ಸ್ಥಾಪಿಸಿದ ಹಲವು ವಿಶ್ವವಿದ್ಯಾಲಯಗಳಿವೆ. ಅಂತಹ ವಿಶ್ವವಿದ್ಯಾಲಯಗಳಿಗೆ ಅದೇ ವಿಷಯಗಳಲ್ಲಿ ಪರಿಣತಿ ಇರುವ, ಆ ವಿಭಾಗಗಳಲ್ಲಿ ಕೆಲಸ ಮಾಡಿದ ಅಧ್ಯಾಪಕರನ್ನೇ ಕುಲಪತಿಗಳಾಗಿ ನೇಮಕ ಮಾಡಬೇಕು ಎನ್ನುವ ನಿಯಮಗಳನ್ನು ಮಸೂದೆ ಒಳಗೊಂಡಿದೆ.
ವಿಜಯಪುರದ ಅಕ್ಕಮಹಾದೇವಿ, ಬೆಂಗಳೂರಿನ ಕ್ಲಸ್ಟರ್ವಿಜಯಪುರದ ಅಕ್ಕಮಹಾದೇವಿ, ಬೆಂಗಳೂರಿನ ಕ್ಲಸ್ಟರ್ ವಿಶ್ವವಿದ್ಯಾಲಯಗಳಿಗೆ ಮಹಿಳೆಯರು, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಕನ್ನಡ ವಿಶ್ವವಿದ್ಯಾಲಯ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾನಿಲಯ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ್
ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಮಸೂದೆ 2025 ಪ್ರಕಾರ ರಾಜ್ಯಪಾಲ ಅವರಿಗೆ ಅಧಿಕಾರ ಘಟಿಕೋತ್ಸವಕ್ಕೆ ಸೀಮಿತ ಕುಲಪತಿಗಳ ನೇಮಕವೂ ಸೇರಿದಂತೆ ವಿಶ್ವವಿದ್ಯಾಲಯಗಳ ಆಡಳಿತದಲ್ಲಿ ರಾಜ್ಯ ಸರ್ಕಾರಕ್ಕೆ ಪರಮಾಧಿಕಾರ ನೀಡುವ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಮಸೂದೆ-2025 ಸಿದ್ಧವಾಗಿದ್ದು, ಫೆ.3ರಿಂದ ಆರಂಭವಾಗುವ ಬಜೆಟ್ ಅಧಿವೇಶನದಲ್ಲೇ ಮಂಡಿಸಲಾಗಿದೆ.