09/06/2025 8:32 PM

Translate Language

Home » ಲೈವ್ ನ್ಯೂಸ್ » ಸೇವೆ ಕಾಯಮಾತಿಗೆ ಆಗ್ರಹ.!

ಸೇವೆ ಕಾಯಮಾತಿಗೆ ಆಗ್ರಹ.!

Facebook
X
WhatsApp
Telegram

ತುಮಕೂರು.20.ಫೆ.25:- ಕರ್ಣಾಟಕ ರಾಜ್ಯದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ಸೇವೆ ಕಾಯಮಾತಿ, ಸುರಕ್ಷತಾ ಸಲಕರಣೆ ವಿತರಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಂಗಳವಾರ ಮುನಿಸಿಪಲ್‌ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ CITU ಸಿಐಟಿಯು ಸಂಘಟ್ಣ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ತುಮಕೂರು ನಗರ ಸ್ಥಳೀಯ ವಿವಿಧ  ಇಲಾಖೆಗಳಲ್ಲಿ/ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿರುವ ಕಾರ್ಮಿಕರು.ಲೋಡರ್ಸ್, ಕಸದ ವಾಹನ ಚಾಲಕರು, ಸಹಾಯಕರು, ಕ್ಲೀನರ್ಸ್‌, ಪಾರ್ಕ್, ಸ್ಮಶಾನ ಕಾರ್ಮಿಕರು, ಕಂಪ್ಯೂಟರ್‌ ಆಪರೇಟರ್‌ ಇತರೆ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಕಾಯಂಗೊಳಿಸಬೇಕು.

ರಾಜ್ಯ ಸರ್ಕಾರ ಈ ಬಾರಿಯ ಬಜೆಟ್‍ನಲ್ಲಿ ಎಲ್ಲ ಕಾರ್ಮಿಕರ ಸೇವೆಗಳನ್ನು ನೇರ ಪಾವತಿಯಡಿ ತರಲು ಕ್ರಮಕೈಗೊಳ್ಳಬೇಕು. ಕನಿಷ್ಠ ಕೂಲಿ, ರಕ್ಷಣಾ ಸಲಕರಣೆ, ರಜೆ, ಸಂಬಳದ ಚೀಟಿ, ಉತ್ತಮ ಗುಣಮಟ್ಟದ ಉಪಾಹಾರ ಪೂರೈಸಬೇಕು ಎಂದು ಒತ್ತಾಯಿಸಿದರು.

ಬಿಜಿಎಸ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಸಿಐಟಿಯು ರಾಜ್ಯ ಘಟಕದ ಕಾರ್ಯದರ್ಶಿ ಕೆ.ಮಹಾಂತೇಶ್, ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್‌ ಮುಜೀಬ್, ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಮುಖಂಡರಾದ ಮಾರುತಿ, ಮಂಜುನಾಥ್‌, ಕುಮಾರ್, ಪ್ರಕಾಶ್, ನಾಗರಾಜು, ಮಧುಕುಮಾರ್‌, ಮಹೇಶ್, ರಂಗಸ್ವಾಮಿ ಇತರರು ಪಾಲ್ಗೊಂಡಿದ್ದರು.

ರಾಜ್ಯದ ವಿವಿಧ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರು ಸರಕಾರಕ್ಕೆ ಮನವಿ ಮಾಡಿದ್ದಾರೆ

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!