09/06/2025 4:19 AM

Translate Language

Home » ಸಂಪಾದಕಿಯ » ಕನಸಿನ ಗಂಟಾದ “ಇಡುಗಂಟು ಆರೋಗ್ಯ ವಿಮೆ ಮತ್ತು ರಜೆ” ವರ್ಷವಾದರೂ ಆದೇಶ ಬಂದಿಲ್ಲ ಗೊಂದಲದಲ್ಲಿ ಅತಿಥಿ ಉಪನ್ಯಾಸಕರು.

ಕನಸಿನ ಗಂಟಾದ “ಇಡುಗಂಟು ಆರೋಗ್ಯ ವಿಮೆ ಮತ್ತು ರಜೆ” ವರ್ಷವಾದರೂ ಆದೇಶ ಬಂದಿಲ್ಲ ಗೊಂದಲದಲ್ಲಿ ಅತಿಥಿ ಉಪನ್ಯಾಸಕರು.

Facebook
X
WhatsApp
Telegram

ಅತಿಥಿ ಉಪನ್ಯಾಸಕರ ಬೇಡಿಕೆಗಳು ಮತ್ತು ಸರ್ಕಾರದ ಭರವಸೆಗಳು….

ಅತಿಥಿ ಉಪನ್ಯಾಸಕರ ಜ್ಯೋತೆ ಸರ್ಕಾರಗಳು ಆಟಾ ಆಡುತಿದೆ …..

ಅತಿಥಿ ಉಪನ್ಯಾಸಕರಿಗೆ ಕನಸಿನ ಗಂಟಾದ ಇಡುಗಂಟು ವರ್ಷವಾದರೂ ಆದೇಶ ಅನುಷ್ಠಾನವಾಗದೇ ಸಂಕಷ್ಟದಲ್ಲಿ ನಿವೃತ್ತರ ಕುಟುಂಬಗಳು.

ಅತಿಥಿ ಉಪನ್ಯಾಸಕರ ಸೇವೆಯನ್ನು ಅಗತ್ಯ ಸೇವೆ ಎಂದು ಪರಿಗಣಿಸಿ (12 ತಿಂಗಳು) ವರ್ಷ ಪೂರ್ತಿ ವೇತನ ಹಾಗೂ ಉದ್ಯೋಗ ಭದ್ರತೆಯನ್ನು ಘೋಷಿಸುವಂತೆ

ಆರೋಗ್ಯ ವಿಮೆಗಾಗಿ, ಉಪನ್ಯಾಸಕರು ಪ್ರತಿ ತಿಂಗಳು 400 ರೂಪಾಯಿಗಳನ್ನು ನೀಡಬೇಕು, ಇದರಿಂದ  ಅವರಿಗೆ ವರ್ಷಕ್ಕೆ 5 ಲಕ್ಷ ರೂಪಾಯಿ ವಿಮೆ ಹೊಂದಲು ಅನುವು ಮಾಡಿಕೊಡುತ್ತದೆ ಎಂದು ಸುಧಾಕರ್ ಹೇಳಿದರು. ಈ ಸೌಲಭ್ಯ ಕಲ್ಪಿಸಲು ವಾರ್ಷಿಕ 6.53 ಕೋಟಿ ಅನುದಾನದ ಅಗತ್ಯವಿದೆ. ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಆರೋಗ್ಯ ವಿಮೆ ಸೇರಿದಂತೆ ಕೆಲ ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಅತಿಥಿ ಉಪನ್ಯಾಸಕರು ಕೆಲವು ಬೇಡಿಕೆಗಳನ್ನು ನಮ್ಮ ಮುಂದೆ ಇಟ್ಟಿದ್ದರು. ಸೇವೆ ಕಾಯಂ ಅವರ ಪ್ರಮುಖ ಬೇಡಿಕೆಯಾಗಿದೆ. ಅವರಿಗೆ ತಿಂಗಳಿಗೆ ಒಂದು ದಿನ ವೇತನ ಸಹಿತ ರಜೆ ನೀಡಲಾಗುವುದು. ಅವರನ್ನು ಗೌರವದಿಂದ ನಡೆಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ವರ್ಷವಾದರೂ ಆದೇಶ ಬಂದಿಲ್ಲ,

ರಜೆ, ಸೌಲಭ್ಯ? ಅತಿಥಿ ಉಪನ್ಯಾಸಕರಿಗೆ ಇನ್‌ಕ್ರಿಮೆಂಟ್, ವೇತನ ಸಹಿತ ರಜೆ, ಆರೋಗ್ಯ ಸವಲತ್ತು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವುದಾಗಿ ಸಚಿವ ಎಂಸಿ ಸುಧಾಕರ್  ಘೋಷಣೆ ಮಾಡಿದರೂ, ಅದನ್ನುಅತಿಥಿ ಅಧ್ಯಾಪಕ ಅಧ್ಯಕ್ಷ ಹನುಮಂತಗೌಡ ಕಲ್ಮನಿ ಬಹಿಷ್ಕರಿಸಿದ್ದಾರೆ.  ಧರಣಿ ಮುಂದುವರಿಸುವುದಾಗಿ ತಿಳಿಸಿದ್ದಾರೆ.  ತಮ್ಮ  ಸೇವೆಯನ್ನು ಕಾಯಂಗೊಳಿಸಬೇಕೆಂಬ ಅವರ ಬೇಡಿಕೆಗೆ ಸರಕಾರ ಸ್ಪಂದಿಸಿಲ್ಲ ಎಂದು ಆರೋಪಿಸಿದ್ದಾರೆ.

ಉಪನ್ಯಾಸಕರಾಗಿ ಸೇವೆ ಸಲ್ಲಿಸಿದವರಿಗೆ 60 ವರ್ಷವಾದಾಗ ಸೇವೆಯಿಂದ ಹೊರಗಿಡಲಾಗುತ್ತಿದೆ. ಈ ಸಮಯದಲ್ಲಿ ಅವರಿಗೆ ಭದ್ರತಾ ರೂಪದಲ್ಲಿ ವಾರ್ಷಿಕ 50,000 ರೂಗಳಂತೆ ಗರಿಷ್ಠ 5 ಲಕ್ಷ .

ಅಧುನಿಕ ಗುಲಾಮರ ಪದ್ಧತಿ.

ಪ್ರತಿದಿನ ನಮಸ್ಕಾರ, ತುತ್ತು ಅನ್ನಕ್ಕೂ ಹಾಹಾಕಾರ ನಿವೃತ್ತಿ ಹೆಸರಿನಲ್ಲಿ ಬರಿಗೈಯಿಂದ ಕಾಲೇಜಿನಿಂದ ಹೊರಬಿದ್ದ ಅತಿಥಿ ಉಪನ್ಯಾಸಕರು ಬೇರೆ ದುಡಿಮೆ ಮಾಡಲಾಗದ ವಯಸ್ಸಿನಲ್ಲಿ ಮಕ್ಕಳು, ಕುಟುಂಬದ ನಿರ್ವಹಣೆ ಮಾಡಲಾಗದೇ ಸಂಕಷ್ಟಕ್ಕೊಳಗಾಗಿದ್ದಾರೆ. ತಮ್ಮದೇ ಕುಟುಂಬಕ್ಕೆ ತಾವೇ ಹೊರೆಯಾಗಿದ್ದಾರೆ.

ವಯಸ್ಸಿನ ಭಾರ. ಅನಾರೋಗ್ಯದ ಸಮಸ್ಯೆ, ಪ್ರತಿದಿನ ಮಾತ್ರೆಗಳಿಗೂ ಹಣ ಹೊಂದಿಸಲಾಗದ ಪರಿಸ್ಥಿತಿಯಲ್ಲಿದ್ದಾರೆ. ಊರೆಲ್ಲ ಶಿಷ್ಯರೇ ಇದ್ದು ಪ್ರತಿದಿನ ನಮಸ್ಕಾರ ಸಿಕ್ಕಿದರೂ ಒಂದು ಹೊತ್ತು ಊಟ ಸಿಗದ ಅಸಹಾಯಕತೆಯಲ್ಲಿದ್ದಾರೆ.

ಇಂತಹವರ ಕಷ್ಟಕ್ಕೆ ವರವಾಗಬೇಕಿದ್ದ ಇಡುಗಂಟು ಸರ್ಕಾರದ ಧೂಳು ತಿನ್ನುತ್ತಿರುವ ಇಡುಗಂಟು ಸಹಾಯ ಕೋರಿದ ಅರ್ಜಿಗಳು ಈ ಒಂದು ವರ್ಷದ ಅವಧಿಯಲ್ಲಿ 60 ವರ್ಷ ದಾಟದ ಬಹಳಷ್ಟು ಅತಿಥಿ ಉಪನ್ಯಾಸಕರು ರಾಜ್ಯದ ವಿವಿಧ ಕಾಲೇಜುಗಳಲ್ಲಿ ಸೇವೆಯಿಂದ ಹೊರಗುಳಿದಿದ್ದು ಇದೀಗ ಅವರಿಗೆ ದುಡಿಮೆಯೂ ಇಲ್ಲ. ಜೀವನಕ್ಕೆ ಯಾವುದೇ ಆದಾಯವಿಲ್ಲ, ಹೀಗಾಗಿ ಜೀವನ ನಿರ್ವಹಣೆ ಕಷ್ಟವಾಗಿದೆ.

ಈ ಸಮಯದಲ್ಲಿ ಸರ್ಕಾರಕ್ಕೆ ಇಡುಗಂಟು ಆದೇಶದಿಂದಲಾದರೂ ತಮಗೆ ಒಂದಿಷ್ಟು ಸಹಾಯ ಸಿಗಲಿದೆ ಎಂದು ಅರ್ಜಿ ಸಲ್ಲಿಸಿದವರ ಮನವಿಗಳು ಕಾಲೇಜು ಶಿಕ್ಷಣ ಇಲಾಖೆ ಅಧಿಕಾರಿಗಳ ಚೇಬಲ್ ಮೇಲೆ ಧೂಳು ಹಿಡಿಯುತ್ತಿವೆ.

ಉನ್ನತ ಶಿಕ್ಷಣ ಸಚಿವ ಡಾ ಎಂ.ಸಿ ಸುಧಾಕರ್ ನೀಡಿದ ಭರವಸೆಯ ಮಾತು, ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯದ 20240 4000 edes ಹೊರಡಿಸಿತ್ತು.

ಆದರೆ ಒಂದು ವರ್ಷವಾದರೂ ಈ ಸೌಲಭ್ಯ ಜಾರಿಯಾಗದೇ ಆತಿಥಿ ಉಪನ್ಯಾಸಕರು ಪರದಾಡುವಂತಾಗಿದೆ.

ರಾಜ್ಯಾದ್ಯಂತ ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿನ 430 ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಪ್ರತಿ ವರ್ಷ ಲಭ್ಯವಾಗುವ ಉಳಿಕೆ ಕಾರ್ಯಭಾರಕ್ಕೆ ಕಾಲಕಾಲಕ್ಕೆ ಅತಿಥಿ ಉಪನ್ಯಾಸಕರನ್ನು ಬಳಸಿಕೊಂಡು ಕಾಲೇಜಿನ ಪ್ರವಚನಗಳನ್ನು ನಿರ್ವಹಿಸಲಾಗುತ್ತಿದೆ. ಹೀಗೆ 2004ರಿಂದಲೂ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಅವರು ದುಡಿದ ದಿನಗಳಿಗೆ ಮಾತ್ರ ಗೌರವಧನ ಸಿಗುವುದು ಬಿಟ್ಟರೆ ಮತ್ತಾವುದೇ ಸೌಲಭ್ಯಗಳರಲಿಲ್ಲ.

2024ರ ಜನವರಿಯಲ್ಲಿ ಅತಿಥಿ ಉಪನ್ಯಾಸಕರು ರಾಜ್ಯಾದ್ಯಂತ ನಡೆಸಿದ ಶಿಕ್ಷಣ ಸಚಿವ ಡಾ. ಎಂಸಿ ಸುಧಾಕರ್ ರೊಂದಿಗೆ ಮತ್ತು ಇನ್ನೊಂದು ಹಂತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗೆ ನಡೆಸಿದ ಸಭೆಗಳ ಫಲವಾಗಿ ಅತಿಥಿ ಉಪನ್ಯಾಸಕರ ಗೌರವಧನ ಪರಿಷ್ಕರಣೆ, ಪ್ರತಿ ಶೈಕ್ಷಣಿಕ ವರ್ಷದಲ್ಲಿ ಹತ್ತುತಿಂಗಳ ಸೇವೆ, ತಿಂಗಳಿಗೊಂದು ದಿನದ ರಜೆ ಸೌಲಭ್ಯ, ಮತ್ತು ವಯೋನಿವೃತ್ತಿ ಹೊಂದುವ ಅತಿಥಿ ಉಪನ್ಯಾಸಕರಿಗೆ ವಾರ್ಷಿಕ 50,000 ರೂಗಳಂತೆ ಗರಿಷ್ಠ ಲಕ್ಷ ರೂಗಳ ಇಡುಗಂಟಿನ ಸೌಲಭ್ಯ ಸಂಯುಕ್ತ ಕರ್ನಾಟಕ ಪತ್ರಿಕೆಯೊಂದಿಗೆ ತಮ್ಮ ಬವಣೆ ಹಂಚಿಕೊಂಡ ಚಿಕ್ಕಬಳ್ಳಾಪುರ ಜಿಲ್ಲೆಯ ನಿವೃತ್ತ ಅತಿಥಿ ಉಪನ್ಯಾಸಕರುಗಳಾದ ಗಂಗಪ್ಪ ಪ್ರತಿಭಟನೆ.

ಮುಷ್ಕರದ ಪರಿಣಾಮವಾಗಿ ಉನ್ನತ ಸೌರಿಬಿದನೂರಿನ ಇಂಗ್ಲೀಷ್ ಉಪನ್ಯಾಸಕ. ಮಲ್ಲಿಕಾರ್ಜುನ, ಶಿಡ್ಲಘಟ್ಟದ ಇಂಗ್ಲಿಷ್ ಉಪನ್ಯಾಸಕ ರಾಮಚಂದ್ರ ಇವರುಗಳು ಸರ್ಕಾರ ಬೇಗ ಇಡುಗಂಟಿನ ನೆರವು ನೀಡಿ ಸ್ಪಂದಿಸಲಿ ಎಂದು ಒತ್ತಾಯಿಸಿದ್ದಾರೆ.

ದೀಪದ ಕೆಳಗೆ ಕತ್ತಲು ಭಾನುವಾರ ಗೌರಿಬಿದನೂರು ತಾಲೂಕಿನ ಹೊಸೂರಿನ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಉನ್ನತ ಶಿಕ್ಷಣ ಸಚಿವ ಡಾ. ಎಂಸಿ ಸುಧಾಕ‌ರ್ರರನ್ನು ಉಪನ್ಯಾಸಕರಿಗೆ ಇಡುಗಂಟು ಕೊಡುವ ಮಾತು ಕೊಟ್ಟಿದ್ದೇವೆ ಅದನ್ನು  ಏನಾದರು ಅಂತಹ ಸಮಸ್ಯೆ ಇದ್ದರೆ ನನ್ನ ಗಮನಕ್ಕೆ ತಂದರೆ ಪರಿಹರಿಸುವ ಎಂದು ಹೇಳಿದ್ದಾರೆ.

ಆದರೆ ಅತಿಥಿ ಉಪನ್ಯಾಸಕರು ಕಚೇರಿಗಳಿಗೆ ಅಲೆದು ಮನವಿಪತ್ರಗಳನ್ನು ನೀಡಿದ್ದು ಉನ್ನತ ಶಿಕ್ಷಣ ಸಚಿವರಿಗೆ ಮುಖ್ಯಮಂತ್ರಿಗೆ ರಿಜಿಸ್ಟರ ಪೋಸ್ಟ್ ಮಾಡಿದ್ದು ಅವರ ಕೈಗೆ ತಲುಪಿಲ್ಲವೇ? ಸಚಿವರನ್ನು ಅಧಿಕಾರಿಗಳೇ ಕತ್ತಲಲ್ಲಿಡುವ ಪ್ರಯತ್ನ ನಡೆಸಿದ್ದಾರೆಯೇ ಎಂಬ ಶಂಕೆ ಮೂಡುವಂತೆ ಮಾಡಿದೆ.

ಬಾಗಿಲ ಬಳಿಯಿಂದಲೇ ಆಚೆ ಕಳಿಸುವ ಪಿಎಗಳು ಇಡುಗಂಟಿನ ಸಹಾಯ ಬಯಸಿ ಅರ್ಜಿ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ಕಾಲೇಜು ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಕುರಿತು ತಮಗೆ ಇಲಾಖೆಯಲ್ಲಿ ಹಣವಿಲ್ಲ, ಅರ್ಥಿಕ ಇಲಾಖೆ ಹಣ ಕೊಟ್ಟಿಲ್ಲ. ಬಜೆಟ್‌ ನಲ್ಲಿ ಹಣ ತೆಗೆದಿಟ್ಟಿಲ್ಲ ಇತ್ಯಾದಿ ಕಾರಣಗಳನ್ನು ನೀಡಿ ಇದುವರೆಗೂ ಬಿಡಿಗಾಸು ಕೂಡ ಕೊಟ್ಟಿಲ್ಲ.

ಇಡುಗಂಟನ ಸೌಲಭ್ಯಕ್ಕಾಗಿ ಕಾಲೇಜು ಶಿಕ್ಷಣ ಇಲಾಖೆ ಕಚೇರಿಯ ಸುತ್ತ ಅಲೆದು ಅಲೆದು ನಿವೃತ್ತ ಅತಿಥಿ ಉಪನ್ಯಾಸಕರು ಹೈರಾಣಾಗಿದ್ದಾರೆ. ಆಯುಕ್ತರ ಪಿಎಗಳು ಇವರನ್ನು ಆಯುಕ್ತರ ಭೇಟಿಗೂ ಅವಕಾಶ ನೀಡದೇ ಬಾಗಿಲ ಬಳಿಯಿಂದಲೇ ಹೊರ ಕಳೆಸುತ್ತಿದ್ದಾರೆ.

ಉನ್ನತ ಶಿಕ್ಷಣ ಸಚಿವರ ಭೇಟಿಗೆ ಅವಕಾಶ ಸಿಗದೇ ಮನವಿ ಪತ್ರಗಳನ್ನು ರಿಜಿಸ್ಟರ್ ಪೋಸ್ಟ್ ಮಾಡಿ ಏನಾದರೂ ಫಲಿತ ಸಿಗಬಹುದೇ ಎಂದು ಪ್ರತಿನಿತ್ಯ ಪ್ರತ್ಯುತ್ತರಕ್ಕಾಗಿ ಚಾತಕ ಪಕ್ಷಿಗಳಂತೆ ಕಾದು ಕುಳಿತಿದ್ದಾರೆ.

ಅತಿಥಿ ಉಪನ್ಯಾಸಕರಿಗೆ ಕನಸಿನ ಗಂಟಾದ ಇಡುಗಂಟು ವರ್ಷವಾದರೂ ಆದೇಶ ಅನುಷ್ಠಾನವಾಗದೇ ಸಂಕಷ್ಟದಲ್ಲಿ ನಿವೃತ್ತರ ಕುಟುಂಬಗಳು

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!