09/06/2025 10:13 PM

Translate Language

Home » ಲೈವ್ ನ್ಯೂಸ್ » ಸರ್ಕಾರಿ ಶಾಲೆಗಳು ಬೆಳೆಸಲು ಕಂಕಣಬದ್ದರಾಗಿ ದುಡಿಯೋಣ -ಉತ್ತಮ ಶಿಂದೆ.

ಸರ್ಕಾರಿ ಶಾಲೆಗಳು ಬೆಳೆಸಲು ಕಂಕಣಬದ್ದರಾಗಿ ದುಡಿಯೋಣ -ಉತ್ತಮ ಶಿಂದೆ.

Facebook
X
WhatsApp
Telegram


ಭಾಲ್ಕಿ.16.ಫೆ.25:- ಬೀದರ್ ಜಿಲ್ಲೆಯ ಭಾಲ್ಕಿ ನಗರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಭಾಲ್ಕಿ ಹಾಗೂ ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘ ಭಾಲ್ಕಿ ವತಿಯಿಂದ ನೂತನವಾಗಿ ನೇಮಕವಾದ ಜಿ.ಪಿ.ಟಿ ಶಿಕ್ಷಕರಿಗೆ ಸ್ವಾಗತ ಸಮಾರಂಭ ಹಾಗೂ ಶಿಕ್ಷಕರ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮ ಪಟ್ಟಣದ ಬಿ.ಅರ್.ಸಿ ಕಚೇರಿಯಲ್ಲಿ ನಡೆಯಿತು.


ಕ್ಷೇತ್ರ ಸಮನ್ವಯಾಧಿಕಾರಿಗಳಾದ ಮನೋಹರ ಹೋಳ್ಕರ್ ರವರು ಮಾತನಾಡಿ ಸರ್ಕಾರಿ ಶಾಲೆ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕಾಗಿ ಎಲ್ಲರೂ ಚನ್ನಾಗಿ ಕೆಲಸ ಮಾಡಬೇಕು ಇದರಲ್ಲಿ ಜಿಪಿಟಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು,
ಸಂಘದ ತಾಲ್ಲೂಕ ಅಧ್ಯಕ್ಷರು ಆದ ಉತ್ತಮ ಶಿಂದೆ ಅವರು ಮಾತನಾಡಿ ಪ್ರತಿಯೊಬ್ಬ ಶಿಕ್ಷಕರು ಉತ್ತಮವಾಗಿ ಕೆಲಸ ನಿರ್ವಹಿಸಿ ನಿರ್ಭಿತಿಯಿಂದ ಕೆಲಸ ಮಾಡೋಣ ಎಂದು ಹೇಳಿದರು.

ಇದೆ ಸಂದರ್ಭದಲ್ಲಿ ಸಂಘದ ವತಿಯಿಂದ ನೂತನ ಶಿಕ್ಷಕರ ಸ್ವಾಗತ ಸಮಾರಂಭ ಹಾಗೂ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮ ನಡೆಯಿತು, ವೇದಿಕೆ  ಮೇಲಿರುವ ಗಣ್ಯರು ಸಂಘದ ಕೆಲಸವನ್ನು ಶ್ಲಾಘಿಸಿದರು.


ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರು ಆದ ನಿರಂಜಪ್ಪ ಪಾತ್ರೆ, ಬಸವರಾಜ ದಾನಾ, ಪ್ರಾಥಮಿಕ ಶಿಕ್ಷಕರ ಸಂಘದ ತಾಲ್ಲೂಕ ಅಧ್ಯಕ್ಷರು ಆದ ಸೂರ್ಯಕಾಂತ ಸುಂಟೆ, ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿಗಳು ಆದ ರಾಜಪ್ಪ ಪಾಟೀಲ, ಪ್ರೌಢ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿಗಳು ಆದ ಬಾಲಾಜಿ ಕಾಂಬಳೆ, SC/ST “ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ”ಸಮನ್ವಯ ಸಮಿತಿ ಕಾರ್ಯದರ್ಶಿಗಳಾದ ಸತ್ಯವಾನ ಕಾಂಬಳೆ ಇದ್ದರು, ಕಾರ್ಯಕ್ರಮದ ನಿರೂಪಣೆ ರಾಜು ಆಶೆಪ್ಪನೋರ್,ಪವನ ಅವರು ಅತಿಥಿಗಳಿಗೆ ಸ್ವಾಗತ ಹಾಗೂ ವಂದನಾರ್ಪಣೆ ದ್ಯಾವಣ್ಣ ಬೈಚಾಬಾಳ ಮಾಡಿದರು ಹಾಗೂ ತಾಲ್ಲೂಕಿನ ಪದವೀಧರ ಪ್ರಾಥಮಿಕ ಶಿಕ್ಷಕರು ಹಾಜರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!