10/06/2025 2:02 AM

Translate Language

Home » ಲೈವ್ ನ್ಯೂಸ್ » ಡಿಜಿಟಲ್ ವಂಚನೆಯಿಂದ ಜಾಗೃತಗೊಳ್ಳಬೇಕಾಗಿದೆ-ಪ್ರೊ.ಬಿ.ಎಸ್.ಬಿರಾದಾರ.!

ಡಿಜಿಟಲ್ ವಂಚನೆಯಿಂದ ಜಾಗೃತಗೊಳ್ಳಬೇಕಾಗಿದೆ-ಪ್ರೊ.ಬಿ.ಎಸ್.ಬಿರಾದಾರ.!

Facebook
X
WhatsApp
Telegram

ಬೀದರ.14ಫೆಬ್ರುವರಿ.25:-ಇಂದಿನ ಡಿಜಿಟಲ್ ಯುಗದ ವ್ಯವಹಾರದಲ್ಲಿ ಆನ್ಲೈನ್ ವಂಚನೆ ಹಾಗೂ ಮೋಸಗಳು ನಿರಂತರವಾಗಿ ನಡೆಯುತ್ತಿವೆ. ಇಂತಹ ವಂಚನೆಯಿಂದ ಎಲ್ಲರೂ ಎಚ್ಚರವಹಿಸಿ, ಜನಸಾಮಾನ್ಯರು ಜಾಗೃತಗೊಳ್ಳಬೇಕಾದ ಅವಶ್ಯಕತೆಯಿದೆ ಎಂದು ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಎಸ್.ಬಿರಾದಾರ ನುಡಿದರು.


      ಅವರು ಇಂದು ಬೀದರ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಡಿಜಿಟಲ್ ತಂತ್ತಜ್ಞಾನ ಹಾಗೂ ಸೈಬರ್ ಸೆಕ್ಯೂರಿಟಿ ಅರಿವು’ ಒಂದು ದಿನದ ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
      ಪ್ರತಿದಿನ ಎಲ್ಲೋ ಒಂದು ಕಡೆ ಸೈಬರ್ ಅಪರಾಧಗಳು ಜರುಗುತ್ತಲೇ ಇವೆ. ವಂಚಕರು ವಿನೂತನ ತಂತ್ರಜ್ಞಾನದಿಂದ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದರು.


      ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾಲ್ಕಿ ಉಪವಿಭಾಗದ  ಪೊಲೀಸ್ ಉಪ ಅಧೀಕ್ಷಕರಾದ  ಭಾಲ್ಕಿಯ ಶಿವಾನಂದ ಪವಾಡಶೆಟ್ಟಿ ಮಾತನಾಡಿ, ವ್ಯಕ್ತಿಗಳ ವಯಕ್ತಿಕ ಮಾಹಿತಿ ಅವರಿಗೆ ಗೊತ್ತಿಲ್ಲದಂತೆಯೇ ವಂಚಕರಿಗೆ ಸುಲಭವಾಗಿ ದೊರೆಯುತ್ತಿರುವುದು ದುರಂತವಾಗಿದೆ.

ಪ್ರತಿಯೊಬ್ಬರು ತಮ್ಮ ಡಿವೈಸ್‍ಗಳನ್ನು ಅತ್ಯಂತ ಜಾಗೃತೆವÀಹಿಸಿ ನಿರ್ವಹಿಸಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಮೊಬೈಲ್ ಬಳಕೆಯ ಸಂದರ್ಭದಲ್ಲೂ ಸಹ ಸದಾ ಎಚ್ಚರವಹಿಸಬೇಕಾಗಿದೆ ಎಂದರು.


       ಭಾಲ್ಕಿ ಗ್ರಾಮೀಣ ಪೊಲೀಸ್ ವೃತ್ತ ನಿರೀಕ್ಷಕರಾದ  ಗುರುಪಾದ ಬಿರಾದಾರ ಮಾತನಾಡಿ, ವಾಟ್ಸಪ್, ಫೇಸ್‍ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್ ಬಳಕೆದಾರರು ಯಾವುದೋ ಗ್ರೂಪಿಗೆ ಅಡ್ಮಿನ್ ಆಗಿದ್ದರೆ ಆಗ್ರೂಪಿಗೆ ಅಪರಾಧದ ಅಂಶಗಳು ಹರಿದಾಡಿದರೆ ಆ ಗ್ರೂಪಿನ ಅಡಮಿನ್ ಅವರನ್ನೂ ಆರೋಪಿತರನ್ನಾಗಿ ಮಾಡಬಹುದಾಗಿದೆ. ವಂಚಕರಿಂದ ಫೇಕ್‍ಕಾಲ್, ಹನಿಟ್ರ್ಯಾಪ್, ವಿಡಿಯೋಕಾಲ್, ಓಟಿಪಿ ಬಳಕೆ ಹಾಗೂ ಎಟಿಎಮ್ ಮೋಸದಂತಹ ಪ್ರಕರಣಗಳು ಹೆಚ್ಚಾಗುತ್ತಿವೆ.

ಇಂದಿನ ಆಧುನಿಕ ಯುಗದಲ್ಲಿ ಇವುಗಳ ನಿಯಂತ್ರಣ ತುರ್ತಾಗಿದೆ. ಇಲ್ಲದಿದ್ದರೆ ಅಮಾಯಕರು ಮೋಸಗಾರರ ವಂಚನೆಗೆ ಒಳಗಾಗುತ್ತಾರೆ ಈ ಬಗ್ಗೆ ಮೋಸಕ್ಕೆ ಒಳಗಾದರೆ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆ ಅಥವಾ ಜಿಲ್ಲೆಯಲ್ಲಿನ ಸೈಬರ್ ಅಪರಾದ ಕೇಂದ್ರಕ್ಕೆ ದೂರು ಸಲ್ಲಿಸಬಹುದು. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾನ ಬಳಕೆ ಮಾಡುವಾಗ ಜಾಗೃತರಾಗಿರಬೇಕು. ಸುಳ್ಳು ಕರೆಗಳಿಗೆ ಮೋಸ ಹೋಗದಂತೆ ನಿಗಾವಹಿಸಬೇಕು ಎಂದು ಹೇಳಿದರು.  

 
     ಈ ಸಂದರ್ಭದಲ್ಲಿ ಡಿಜಿಟಲ್ ತಂತ್ರಜ್ಞಾನದ ಅರಿವು ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳು ಹಾಗೂ ವಿಶೇಷ ಉಪನ್ಯಾಸಕರಾದ ತಾಂತ್ರಿಕ ನಿರ್ದೇಶಕರು, ಭಾರತ ಸರ್ಕಾರ ರಾಷ್ಟ್ರೀಯ ಮಾಹಿತಿ ಕೇಂದ್ರ,(ಎನ್.ಐ.ಸಿ)ಯ ಬೀದರನ ಕೆ.ಶ್ರೀನಿವಾಸ, ಬೀದರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಶಾಂತಲಿಂಗ ಸಾವಳಗಿ, ಬೀದರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ನಾಗಭೂಷಣ ಕಮಠಾಣೆ, ಮೌಲ್ಯಮಾಪನ ಕುಲಸಚಿವರಾದ ಪ್ರೊ.ಪರಮೇಶ್ವರ ನಾಯ್ಕ.ಟಿ, ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಹಾಗೂ ಶಿಕ್ಷಣ ನಿಕಾಯದ ಡೀನರಾದ ಡಾ.ಮಲ್ಲಿಕಾರ್ಜುನ ಕನಕಟ್ಟೆ, ವಾಣಿಜ್ಯ ಹಾಗೂ ನಿರ್ವಹಣಾ ನಿಕಾಯದ ಡೀನರಾದ ಡಾ.ಶರಣಪ್ಪ ಮಲಗೊಂಡ, ಧನ್ನೂರಾ ಪೊಲೀಸ್ ಉಪನಿರೀಕ್ಷಕರಾದ ವಿಶ್ವರಾಧ್ಯರವರು ಹಾಗೂ ಬೀದರ ಜಿಲ್ಲಾಧಿಕಾರಿಗಳ ಕಛೇರಿಯ ಅಜಿತಕುಮಾರ ಎ.ಡಿ.ಐ.ಒ, ಭರತರಾಜ್, ಬೀದರ, ಕೇಶವ ಎನ್.ಐ.ಸಿ ಸಿಬ್ಬಂದಿಗಳು ಸೇರಿದಮತೆ ಇತರರು ಉಪಸ್ಥಿತರಿದ್ದರು.  

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!