09/06/2025 6:49 PM

Translate Language

Home » ಲೈವ್ ನ್ಯೂಸ್ » 250 ಅಡಿ ಎತ್ತರದ ಅಂಬೇಡ್ಕರ್‌ ಪ್ರತಿಮೆಗೆ ಆಗ್ರಹ.!

250 ಅಡಿ ಎತ್ತರದ ಅಂಬೇಡ್ಕರ್‌ ಪ್ರತಿಮೆಗೆ ಆಗ್ರಹ.!

Facebook
X
WhatsApp
Telegram

ಬೀದರ್‌.14.ಫೆ.25:- ಬೀದರ ಜಿಲ್ಲೆಯ ಲಾಲ್‌ ಬಾಗ್‌ನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್ ಅವರ 250 ಅಡಿ ಎತ್ತರದ ಪ್ರತಿಮೆ ಸ್ಥಾಪಿಸಬೇಕು’ ಎಂದು ಕರ್ನಾಟಕ ಭೀಮ ಸೇನೆ ರಾಜ್ಯ ಕಾರ್ಯದರ್ಶಿ ವಿಷ್ಣುವರ್ಧನ್ ವಾಲ್ದೊಡ್ಡಿ ಆಗ್ರಹಿಸಿದರು.

ನೆರೆಯ ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಅಂಬೇಡ್ಕರ್ ಅವರ ಭವ್ಯ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ.

ನಮ್ಮ ರಾಜ್ಯದಲ್ಲೂ ಸ್ಥಾಪಿಸಿ, ಯುವ ಜನಾಂಗಕ್ಕೆ ಪ್ರೇರಣೆ ಆಗುವಂತಹ ಕೆಲಸ ರಾಜ್ಯ ಸರ್ಕಾರ ಮಾಡಬೇಕು ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

2023ರಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆ ಹಾಗೂ 2024ರಲ್ಲಿ ಜರುಗಿದ ಲೋಕಸಭೆ ಚುನಾವಣೆಯಲ್ಲಿ ಎಲ್ಲ ದಲಿತ ಪರ ಸಂಘಟನೆಗಳು ಹಾಗೂ ಸಮುದಾಯವು ಕಾಂಗ್ರೆಸ್‌ ಪಕ್ಷವನ್ನು ದೊಡ್ಡ ಮಟ್ಟದಲ್ಲಿ ಬೆಂಬಲಿಸಿದೆ.

ಇದರಿಂದ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯ ಗಳಿಸಿದ್ದಾರೆ. ದಲಿತರ ಅಸ್ಮಿತೆಯ ಪ್ರತೀಕವಾಗಿರುವ ಅಂಬೇಡ್ಕರ್‌ ಪ್ರತಿಮೆ ಸ್ಥಾಪಿಸಿ ಋಣ ತೀರಿಸಬೇಕೆಂದು ಆಗ್ರಹಿಸಿದರು.

ಲಾಲ ಬಾಗ್‌ನಲ್ಲಿ ಅಂಬೇಡ್ಕರ್ ಪ್ರತಿಮೆಯೊಂದಿಗೆ ಡಿಜಿಟಲ್‌ ಗ್ರಂಥಾಲಯ ಸ್ಥಾಪಿಸಬೇಕು. ಅಂಬೇಡ್ಕರ್‌ ಅವರ ವಿಚಾರಗಳ ಪರಿಚಯ, ಸಂವಿಧಾನದ ಮಹತ್ವ ಸಾರುವ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.

ಯುವ ಮುಖಂಡ ಗೌತಮ ಪ್ರಸಾದ ಮಾತನಾಡಿ, ಬರುವ ಬಜೆಟ್‌ನಲ್ಲಿ 250 ಅಡಿ ಪ್ರತಿಮೆ ಸ್ಥಾಪನೆಗೆ ಅನುದಾನ ಮೀಸಲಿಡಬೇಕು. 2026ರ ಒಳಗೆ ಅದನ್ನು ಉದ್ಘಾಟಿಸಬೇಕು ಎಂದು ಹೇಳಿದರು.

ಕರ್ನಾಟಕ ಭೀಮಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರ್ಷಿತ ದಾಂಡೇಕರ್ ಮಾತನಾಡಿ, ಪ್ರತಿಮೆ ಸ್ಥಾಪಿಸುವ ವಿಚಾರವಾಗಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದರು.

ಸೇನೆಯ ಪ್ರಮುಖರಾದ ಶಿವಾನಂದ ಉಪ್ಪೆ, ಅಕ್ಷಯ ವರ್ಧನ, ವಿಜಯಕುಮಾರ ಬಾವಿಕಟ್ಟಿ, ಸುರೇಶ ಜೋಜನಾಕರ್, ರವಿ ಮೋರೆ ಹಾಜರಿದ್ದರು.

ಕರ್ನಾಟಕ ಭೀಮಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರ್ಷಿತ ದಾಂಡೇಕರ್ ಅವರು 250 ಪ್ರತಿಮೆ ಸ್ಥಾಪಿಸುವ ವಿಚಾರವಾಗಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದರು.ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದರು.ಸೇನೆಯ ಪ್ರಮುಖರಾದ ಶಿವಾನಂದ ಉಪ್ಪೆ, ಅಕ್ಷಯ ವರ್ಧನ, ವಿಜಯಕುಮಾರ ಬಾವಿಕಟ್ಟಿ, ಸುರೇಶ ಜೋಜನಾಕರ್, ರವಿ ಮೋರೆ ಹಾಜರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!