ಕೊಡಗು.14.ಫೆ.25:- ಗೃಹ ಸಚಿವರಾದ ಡಾ. ಜಿ. ಪರಮೇಶ್ವರ ಪತ್ನಿ ಯೊಂದಿಗೆ ದಲೈಲಾಮ ಅವರನ್ನು ಭೇಟಿ ಮಾಡಿ, ಅವರ ಆಶೀರ್ವಾದ ಪಡೆದಿದ್ದಾರೆ. ಗೃಹ ಸಚಿವ ಜಿ. ಪರಮೇಶ್ವರ್ ಅವರು ಇಂದು ಮಾಧ್ಯಮಗಳೊಂದಿಗೆ ಮಾತನಾಡಿ, ಇತ್ತೀಚೆಗೆ ಭೇಟಿಯಾದ ಬಗ್ಗೆ ಸ್ಪಷ್ಟನೆ ನೀಡಿದರು.
ನಾವು ಬೌದ್ಧ ಧರ್ಮ ಪಾಲನೆ ಮಾಡುತ್ತೇವೆ. ದಲೈಲಾಮ ಆಶೀರ್ವಾದ ಪಡೆದುಕೊಳ್ಳಲು ಬಂದಿದ್ದೇವೆ. ಶಾಂತಿ ನೆಮ್ಮದಿ ಪಡೆದುಕೊಳ್ಳಲು ಬಂದಿದ್ದೇವೆ ಎಂದು ತಿಳಿಸಿದರು.
ದಲೈಲಾಮ ಬಂದಾಗ ಹಲವು ಬಾರಿ ಭೇಟಿ ಮಾಡಿದ್ದೇನೆ. ದಲೈಲಾಮ ಆರೋಗ್ಯವಾಗಿದ್ದಾರೆ. ಏಳು ವರ್ಷಗಳ ಬಳಿಕ ಇಲ್ಲಿಗೆ ಬಂದಿದ್ದಾರೆ. ಅವರಿಗೆ 90 ವರ್ಷ ಆಗಿದೆ, ಆರೋಗ್ಯವಾಗಿದ್ದಾರೆ. ಅವರ ಮೇಲೆ ಅಪಾರ ಗೌರವ ಇದೆ ಎಂದರು.
ಕೇಂದ್ರ ಸಚಿವರು ಬಂದ ಬಗ್ಗೆ ಮಾಹಿತಿ ಇಲ್ಲ ಭೇಟಿ ಆಗಿಲ್ಲ. ದಲೈಲಾಮ ಅವರಿಗೆ ಜೀವ ಬೆದರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಎಲ್ಲಾ ಭದ್ರತೆಯನ್ನು ನೀಡಲಾಗಿದೆ. ಎಂದು ತಿಳಿಸಿದರು.
“ಅವರು ಯಾವಾಗಲೂ ಕರ್ನಾಟಕಕ್ಕೆ ಬಂದಾಗೆಲ್ಲ ನಾನು ಭೇಟಿ ಮಾಡುತ್ತೇನೆ. ಅವರ ಆಶೀರ್ವಾದವನ್ನು ಪಡೆದುಕೊಳ್ಳುತ್ತೇನೆ. ಅವರು ಬೌದ್ಧ ತತ್ವಗಳಲ್ಲಿ ನಂಬಿಕೆ ಇಟ್ಟವರು. ಅದೇ ರೀತಿ ನಮಗೆಲ್ಲರಿಗೂ ಕೂಡ ಆ ವಿಶ್ವಾಸ ನಂಬಿಕೆ ಇದೆ. ಅವರು ಇಡೀ ವಿಶ್ವಕ್ಕೆ ಶಾಂತಿ ಸಂದೇಶವನ್ನು ನೀಡುತ್ತಾರೆ. ಅದರಲ್ಲಿ ನಮಗೂ ನಂಬಿಕೆ ಇದೆ. ಹಾಗಾಗಿ ನಾನು ಅವರನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆದುಕೊಂಡೆ. ಅದು ಬಿಟ್ಟರೆ ಬೇರೆ ಏನೂ ಇಲ್ಲ, ಯಾವುದೇ ಚರ್ಚೆಗಳು ನಡೆದಿಲ್ಲ. ಅವರ ಆಶೀರ್ವಾದ ಪಡೆದಿದ್ದೇನೆ ಅಷ್ಟೇ”, ಎಂದು ಸ್ಪಷ್ಟಪಡಿಸಿದರು.