ಬೀದರ.07.ಫೆಬ್ರುವರಿ.25: ಕರ್ನಾಟಕ ಏರ್ ಸ್ಕ್ವಾಡ್ರನ್ (ಟಿ) ಎನ್ಸಿಸಿ, ಬೀದರ್ನ ಕೆಡೆಟ್ ಸಾಜೆಂಟ್ ಬೊಮ್ಮಗೊಂಡ ಅವರು ಕರ್ನಾಟಕ ಮತ್ತು ಗೋವಾ ರಾಜ್ಯ ಆರ್ಡಿಸಿ ಕಾಂಟಿಜಿಂಟ್ನ ಸದಸ್ಯರಾಗಿದ್ದಾರೆ, ಅವರು 26ನೇ ಜನವರಿ 2025 ರಂದು ರಾಷ್ಟ್ರೀಯ ರಾಜಧಾನಿಯಲ್ಲಿ ನಡೆದ ಗಣರಾಜ್ಯೋತ್ಸವದ ಪ್ರಧಾನಮಂತ್ರಿ ರ್ಯಾಲಿಯಲ್ಲಿ ಭಾಗವಹಿಸಿದ್ದರು.
ಕರ್ನಾಟಕ ಮತ್ತು ಗೋವಾ ತಂಡವು 2024-25ನೇ ಸಾಲಿನ ಅತ್ಯುತ್ತಮ ಎನ್ಸಿಸಿ ಆರ್ಡಿಸಿ ಕಾಂಟಿಜೆಂಟ್ನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಪ್ರಧಾನಮಂತ್ರಿ ಬ್ಯಾನರ್ ಮತ್ತು ಟ್ರೋಫಿಯನ್ನು ಗೆದ್ದಿದೆ.
ಕೆಡೆಟ್ ಸಾಜೆಂಟ್ ಬೊಮ್ಮಗೊಂಡ ಅವರು ಬೀದರ್ನ ಸರ್ಕಾರಿ ಪಾಲಿಟೆಕ್ನಿಕ ಕಾಲೇಜಿನಲ್ಲಿ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದು, ಕಳೆದ 10 ವರ್ಷಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಬೀದರ್ ಎನ್ಸಿಸಿ ಘಟಕವನ್ನು ಪ್ರತಿನಿಧಿಸಿದ ಏಕೈಕ ಎನ್ಸಿಸಿ ಹಿರಿಯ ಕೆಡೆಟ್ ಆಗಿದ್ದಾರೆ.
ಅವರ ಶ್ರಮ ಮತ್ತು ಶ್ರದ್ಧೆ ಬೀದರ ಪಟ್ಟಣಕ್ಕೆ ದೊಡ್ಡ ಕೀರ್ತಿ ತಂದೆ. ಬೀದರನ ಎನ್ಸಿಸಿ ಘಟಕ ಮತ್ತು ಬೀದರನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸಿಬ್ಬಂದಿ ಸತತ ಪರಿಶ್ರಮಕ್ಕೆ ಅವರ ಯಶಸ್ಸು ಸಾಕ್ಷಿಯಾಗಿದೆ.