09/06/2025 12:32 AM

Translate Language

Home » ದೇಶ » ಲೇವಾದೇವಿದಾರರು, ಫೈನಾನ್ಸ್‍ಗಳು ನಿಯಮಮೀರಿ ಬಡ್ಡಿಗೆ ದೂರು ಸಲ್ಲಿಸಲು ಸಾರ್ವಜನಿಕರಲ್ಲಿ ಮನವಿ.!

ಲೇವಾದೇವಿದಾರರು, ಫೈನಾನ್ಸ್‍ಗಳು ನಿಯಮಮೀರಿ ಬಡ್ಡಿಗೆ ದೂರು ಸಲ್ಲಿಸಲು ಸಾರ್ವಜನಿಕರಲ್ಲಿ ಮನವಿ.!

Facebook
X
WhatsApp
Telegram


ಬೀದರ.03.ಫೆಬ್ರುವರಿ.25:- ಕರ್ನಾಟಕ ಲೇವಾದೇವಿದಾರರ ಅಧಿನಿಯಮ 1961 ಕಲಂ 28(1) ರನ್ವಯ ಹಾಗೂ ಸರ್ಕಾರದ ಅಧಿಸೂಚನೆಯನ್ವಯ ಭದ್ರತೆ ಸಾಲಗಳಿಗೆ ಗರಿಷ್ಠ ವಾರ್ಷಿಕ ಶೇ. 14 ಹಾಗೂ ಭದ್ರತೆ ಇಲ್ಲದೇ ಇರುವ ಸಾಲಗಳಿಗೆ ಗರಿಷ್ಠ ವಾರ್ಷಿಕ ಶೇ.16 ರಷ್ಟು ಮಾತ್ರ ವಿಧಿಸಬೇಕಾಗಿರುವ ನಿಯಮವಿರುತ್ತದೆ. ಈ ನಿಯಮವನ್ನು ನಗರದ ಲೇವಾದೇವಿದಾರರು ಅಥವಾ ಫೈನಾನ್ಸ್‍ಗಳು ಸಾರ್ವಜನಿಕರಿಂದ  ಹೆಚ್ಚಿನ ಬಡ್ಡಿ ವಸೂಲಾತಿ ಮಾಡುತ್ತಿರುವುದು ಕಂಡುಬಂದಲ್ಲಿ ಕೂಡಲೇ ಈ ಕೆಳಗಿನ ಅಧಿಕಾರಿಗಳನ್ನು ಸಂಪರ್ಕಿಸಿ ದೂರು ನೀಡಬಹುದಾಗಿದೆ ಎಂದು ಬೀದರ ಸಹಕಾರ ಸಂಘಗಳ ಉಪ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ದೂರು ನೀಡಲು ಸಂಪರ್ಕಿಸಬಹುದಾದ ಅಧಿಕಾರಿಗಳ ವಿವರ: ಕಲಬುರಗಿ ಪ್ರಾಂತ ಕಲಬುರಗಿ ಸಹಕಾರ ಸಂಘಗಳ ಜಂಟಿ ನಿಬಂಧಕರು ದೂರವಾಣಿ ಸಂಖ್ಯೆ: 9448813536, ಬೀದರ ಸಹಕಾರ ಸಂಘಗಳ ಉಪ ನಿಬಂಧಕರ ದೂರವಾಣಿ ಸಂಖ್ಯೆ: 9448656638, ಬೀದರ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ದೂರವಾಣಿ ಸಂಖ್ಯೆ: 9448891880 ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!