09/06/2025 12:29 AM

Translate Language

Home » ದೇಶ » ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನ ಕಾರ್ಯಕ್ರಮ

ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನ ಕಾರ್ಯಕ್ರಮ

Facebook
X
WhatsApp
Telegram


ಬೀದರ.03.ಫೆಬ್ರುವರಿ.25:-ಕುಷ್ಠರೋಗವು ಯಾವುದೇ ಶಾಪ ಪಾಪದಿಂದ ಬರುವುದಿಲ್ಲ, ಇದು ಒಂದು ಮೈಕೋಬ್ಯಾಕ್ಟೀರಿಯಂ ಲೆಪ್ರೆ ಎಂಬ ರೋಗಾಣುವಿನಿಂದ ಬರುವ ಸಾಂಕ್ರಮಿಕ ರೋಗವಾಗಿದ್ದು ಇದು ಮುಖ್ಯವಾಗಿ ಚರ್ಮ ಹಾಗೂ ನರಕ್ಕೆ ಸಂಭಂಧಪಟ್ಟಿದ್ದು ದೇಹದ ಯಾವುದೇ ಭಾಗದಲ್ಲಿ ಸ್ವರ್ಶ ಜ್ಞಾನವಿಲ್ಲದ ತಿಳಿ ಬಿಳಿ ಅಥವಾ ತಾಮ್ರ ಬಣ್ಣದ ಮಚ್ಚೆಗಳಿದ್ದಲ್ಲಿ ಅದು ಕುಷ್ಠರೋಗದ ಲಕ್ಷಣಗಳಾಗಿರಬಹುದು.

ಯಾವುದೆ ತರಹದ ಮಚ್ಚೆಗಳು ಇದಲ್ಲಿ ತಮ್ಮ ಸಮೀಪದ ಪ್ರಾಥಮೀಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಕ್ಷಿಸಿಕೊಳ್ಳಬೇಕು.

ರೋಗ ಕಂಡು ಬಂದಲ್ಲಿ  ಬಹುಔಷದಿ ಚಿಕಿತ್ಸೆಯಿಂದ ಗುಣ ಪಡಿಸಬಹುದು ಇದಕ್ಕೆ ಯಾವುದೆ ರೀತಿಯ ಹೆದರುವಂತಹ ಅಗತ್ಯವಿಲ್ಲಾ ಎಂದು ಬೀದರ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವೀರಶೆಟ್ಟಿ ಚನ್ನಶೆಟ್ಟಿ ಹೇಳಿದರು.


ಅವರು ಇಂದು ನಗರದ ಜಿಜಾಮಾತಾ ಪ್ರೌಡ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ಸ್ಪರ್ಶ್ ಕುಷ್ಠರೋಗ ಜಾಗೃತಿ ಪಾಕ್ಷಿಕ ಅಭಿಯಾನವನ್ನು ದಿನಾಂಕ: 30-01-2025 ರಿಂದ 13-02-2025 ರವರಗೆ ಜಿಲ್ಲೆಯಾಧ್ಯಂತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಬನ್ನಿರಿ ನಾವೆಲ್ಲರೂ ಸೇರಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ  ಕನಸಾದ ಕುಷ್ಠಮುಕ್ತ  ಭಾರತವನ್ನು  ಮಾಡಲು  ಪ್ರತಿಜ್ಞಾ ಮಾಡೋಣ ಎಂದು ಪ್ರತಿಜ್ಞೆ ಮಾಡಿಸಿದ್ದರು.


ಈ ಕಾರ್ಯಕ್ರಮದಲ್ಲಿ ಜಿಜಾಮಾತಾ ಪ್ರೌಡ ಶಾಲೆಯ ಮುಖ್ಯ ಗುರುಗಳಾದ  ಪರಮೇಶ್ವರ ಬಿರಾದಾರ, ಶಿಕ್ಷಕರಾದ ಅರ್ಜುನ ಧೊಳೆ, ವಾಸುದೇವ ರಾಠೋಡ್, ರಾಜಶೇಖರ, ಸೂರ್ಯಕಾಂತ, ಅನಿತಾ, ಆಶ್ವಿನಿ, ಭಾರತಿ ಸೇರಿದಮತೆ ಅರೋಗ್ಯ ಸಿಬ್ಬಂದಿಗಳು, ಶಿಕ್ಷಕರು  ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.  ಕಾರ್ಯಕ್ರಮ ನಿರೂಪಣೆ ತಾನಾಜಿ ಆರ್ ನಿರಗೂಡೆ ನಡೆಸಿಕೊಟ್ಟರು ಬಸವರಾಜ ರಾಯಪಳ್ಳಿ ವಂದರ್ನಾಪಣೆಯನ್ನು ಸಲ್ಲಿಸಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!