09/06/2025 5:10 PM

Translate Language

Home » ಬೀದರ » ಕಾಯಕನಿಷ್ಠೆಯ ಶರಣ ಮಡಿವಾಳ ಮಾಚಿದೇವರು-ಪ್ರೊ.ಪರಮೇಶ್ವರ ನಾಯ್ಕ.ಟಿ

ಕಾಯಕನಿಷ್ಠೆಯ ಶರಣ ಮಡಿವಾಳ ಮಾಚಿದೇವರು-ಪ್ರೊ.ಪರಮೇಶ್ವರ ನಾಯ್ಕ.ಟಿ

Facebook
X
WhatsApp
Telegram


ಬೀದರ.02ಫೆಬ್ರುವರಿ.25:  ಮಡಿವಾಳ ಮಾಚಿದೇವರು 12ನೆಯ ಶತಮಾನದ ಅಪ್ರತಿಮ ಶರಣರು, ಮಾಚಿದೇವರು ಜನರ, ಸಮಾಜದ ಮನೆ-ಮನಗಳನ್ನು ಶುಚಿಗೊಳಿಸುವ ಕಾಯಕದಲ್ಲಿ ನಿರತರಾದವರು ಎಂದು ಬೀದರ ವಿಶ್ವವಿದ್ಯಾಲಯದ ಮೌಲ್ಯಮಾಪoನ ಕುಲಸಚಿವರಾದ ಪ್ರೊ.ಪರಮೇಶ್ವರ ನಾಯ್ಕ.ಟಿ. ಹೇಳಿದರು.


ಅವರು ಇಂದು ಬೀದರ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವೀರಗಣಾಚಾರಿ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.


ವಿಶ್ವಸಾಹಿತ್ಯಕ್ಕೆ ಶರಣರು ನೀಡಿದ ವಚನ ಸಾಹಿತ್ಯ ಅಪೂರ್ವವಾದುದು, ಇಂತಹ ಅಪೂರ್ವ ವಚನ ಸಾಹಿತ್ಯವನ್ನು ಸಂರಕ್ಷಿಸುವ ಕಾಯಕವನ್ನು ನಿರ್ವಹಿಸಿದವರು ಶರಣ ಮಡಿವಾಳ ಮಾಚಿದೇವರು.

‘ಕಲಿದೇವರ ದೇವಾ’ ಅಂಕಿತದಲ್ಲಿ ನೂರಾರು ವಚನಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿರುವ ಮಡಿವಾಳ ಮಾಚಿದೇವರು ಸಮಾಜದಲ್ಲಿನ ಶೋಷಣೆಯ ವಿರುದ್ಧ ಹೋರಾಡಿ ಸಮಾನತೆಗಾಗಿ ಹಂಬಲಿಸಿದವರು.

ಅಂದಿನ ಕಾಲದ ವೀರಯೋಧರಾಗಿದ್ದ ಮಡಿವಾಳ ಮಾಚಿದೇವರು ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ವಚನಗಳ ಕಟ್ಟುಗಳ ರಕ್ಷಣೆಗೈದ ಅಪ್ಪಟ ಶರಣರು, ಸುಂದರ ಸಮಾಜದ ಕನಸುಗಾರರಾಗಿದ್ದ ಶರಣರು ನುಡಿದಂತೆ ನಡೆದರು, ನಡೆದಂತೆ ನುಡಿದರು. ಕಲ್ಯಾಣದ ಅನುಭವ ಮಂಟಪದಲ್ಲಿ ಬಸವಾದಿ ಶರಣರು ಒಂದೆಡೆ ಸೇರಿ ಸಮಾಜಕ್ಕೆ ಅನುಭವಾಮೃತವನ್ನು ನೀಡುತ್ತಿದ್ದರು. ವಚನಗಳ ಕಟ್ಟುಗಳನ್ನು ರಕ್ಷಿಸುವಲ್ಲಿ ಮಡಿವಾಳ ಮಾಚಿದೇವರ ಪಾತ್ರ ಮಹತ್ವದ್ದಾಗಿದೆ ಎಂದು ನುಡಿದರು.


     ಈ ಸಂದರ್ಭದಲ್ಲಿ ಬೀದರ ವಿಶ್ವವಿದ್ಯಾಲಯದ ವಿಶೇಷಾಧಿಕಾರಿಗಳಾದ ಡಾ.ರವೀಂದ್ರನಾಥ ವಿ.ಗಬಾಡಿ, ಬೀದರ ವಿಶ್ವವಿದ್ಯಾಲಯದ ಅಧ್ಯಾಪಕ, ಅಧ್ಯಾಪಕೇತರ ಸಿಬ್ಬಂದಿವರ್ಗದವರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!