09/06/2025 5:01 PM

Translate Language

Home » ಲೈವ್ ನ್ಯೂಸ್ » ಎಂ.ಎ ಅನುತ್ತೀರ್ಣ: ಸರ್ಕಾರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕ

ಎಂ.ಎ ಅನುತ್ತೀರ್ಣ: ಸರ್ಕಾರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕ

Facebook
X
WhatsApp
Telegram

ಮಹಾಲಿಂಗಪುರ: ಸರ್ಕಾರಿ ಪದವಿಪೂರ್ವ ಕಾಲೇಜು ಮಹಾಲಿಂಗಪುರ ಪಟ್ಟಣದ ಕಾಲೇಜಿನಲ್ಲಿ ಕಳೆದ ಎಂಟು ತಿಂಗಳಿಂದ ಅನರ್ಹ ಅತಿಥಿ ಉಪನ್ಯಾಸಕರೊಬ್ಬರು ಕಾರ್ಯ ನಿರ್ವಹಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

2024ರ ಜೂನ್ ತಿಂಗಳಿನಿಂದ ಇಂಗ್ಲಿಷ್ ವಿಷಯದಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವ ಗಂಗಪ್ಪ ಮಲಕಪ್ಪ ಗಾಡಿಕರ (ಜಿ.ಎಂ.ಗಾಡಿಕರ) ಹುದ್ದೆಗೆ ಅಗತ್ಯವಿರುವ ಎಂಎ ಪದವಿಯ ಅನುತ್ತೀರ್ಣಗೊಂಡ ಅಂಕಪಟ್ಟಿ ಲಗತ್ತಿಸಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆಯಡಿ ಜಮಖಂಡಿಯ ಈರಪ್ಪ ಸುತಾರ ಎಂಬವರು ಕೇಳಿದ್ದ ಮಾಹಿತಿಯನ್ನು ಪೂರೈಸುವ ವೇಳೆ ‘ಅತಿಥಿ ಉಪನ್ಯಾಸಕ’ ಅನರ್ಹ ಎಂಬುದು ಗೊತ್ತಾಗಿದೆ.

2015ರಲ್ಲಿ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಮಹಾರಾಷ್ಟ್ರದ ಗೂಗವಾಡದ ಬಸವೇಶ್ವರ ವಿದ್ಯಾ ಪ್ರತಿಷ್ಠಾನದ ದೂರಶಿಕ್ಷಣ ಕೇಂದ್ರದಲ್ಲಿ ಸ್ನಾತಕೋತ್ತರ ಎಂಎ ಪದವಿಯಲ್ಲಿ ಅನುತ್ತೀರ್ಣಗೊಂಡ ಅಂಕಪಟ್ಟಿಯನ್ನು ಗಾಡಿಕರ ಲಗತ್ತಿಸಿದ್ದು, ಇದನ್ನು ಗಮನಿಸದ ಅಂದಿನ ಪ್ರಾಚಾರ್ಯ ಎಸ್.ಆರ್. ನಾಯಕೋಡಿ ನೇಮಕಾತಿ ಮಾಡಿಕೊಂಡಿದ್ದಾರೆ. ವಿಶೇಷ ಎಂದರೆ ಇದೇ ಅಂಕಪಟ್ಟಿಯ ದಾಖಲೆ ಸಲ್ಲಿಸಿ ವಿವಿಧ ಶಾಲೆಗಳಲ್ಲಿಯೂ ಉಪನ್ಯಾಸಕರಾಗಿ ಗಾಡಿಕರ ಕೆಲಸ ಮಾಡಿದ್ದಾರೆ.

ಕಾಲೇಜಿನಲ್ಲಿ ಇಂಗ್ಲಿಷ್ ವಿಷಯದ ಕಾಯಂ ಉಪನ್ಯಾಸಕಿಯೊಬ್ಬರು ಅನಾರೋಗ್ಯ ಕಾರಣದಿಂದ 2023ರ ಡಿ. 31 ರಿಂದ ದೀರ್ಘಾವಧಿ ರಜೆ (ವೇತನ ರಹಿತ ರಜೆ) ಮೇಲೆ ತೆರಳಿದ್ದಾರೆ. ಇದಕ್ಕೂ ಮುನ್ನ ಅನಾರೋಗ್ಯ ಕಾರಣದಿಂದ ಹಲವು ರಜೆ ಹಾಕಿದ್ದರಿಂದ 2023ರ ನ. 18 ರಂದು ಕಾಲೇಜು ಅಭಿವೃದ್ಧಿ ಸಮಿತಿಯವರು ಠರಾವು ಪಾಸು ಮಾಡಿ ಇಂಗ್ಲಿಷ್ ಉಪನ್ಯಾಸಕರನ್ನಾಗಿ ಗಾಡಿಕರ ಅವರನ್ನು ನೇಮಕ ಮಾಡಿಕೊಂಡು ಸಮಿತಿ ವತಿಯಿಂದ ವೇತನ ನೀಡಿದ್ದಾರೆ.

2024ರ ಜೂನ್‍ನಲ್ಲಿ ಕಾಲೇಜಿಗೆ ಅಗತ್ಯವಿರುವ ಅತಿಥಿ ಉಪನ್ಯಾಸಕರ ಪಟ್ಟಿಯನ್ನು ಉಪನಿರ್ದೇಶಕರಿಗೆ ಕಳುಹಿಸುವಾಗಲೂ ಇಂಗ್ಲಿಷ್ ವಿಷಯವನ್ನು ನಮೂದಿಸಿಲ್ಲ. ಪೂರ್ವ ಯೋಜಿತವಾಗಿ ನೇಮಕ ಮಾಡಿಕೊಳ್ಳುವ ಯೋಚನೆಯಿಂದಲೇ ಇವರನ್ನೇ ‘ಅತಿಥಿ ಉಪನ್ಯಾಸಕರು’ ಎಂದು ನೇಮಕ ಮಾಡಿಕೊಳ್ಳಲಾಗಿದೆ. ಕಳೆದ ವರ್ಷ ಜೂನ್‍ನಿಂದ ಡಿಸೆಂಬರ್‌ವರೆಗೆ ಗೌರವ ಧನವನ್ನು ಸಹ ಪಾವತಿಸಲಾಗಿದೆ.

ಅತಿಥಿ ಉಪನ್ಯಾಸಕ ಜಿ.ಎಂ.ಗಾಡಿಕರ ಸಲ್ಲಿಸಿರುವ ಎಂಎ ಪದವಿಯ ಅಂಕಪಟ್ಟಿ.ಶಿವಪ್ಪ ಜೋಡಟ್ಟಿ ಪ್ರಾಚಾರ್ಯರು ಸರ್ಕಾರಿ ಪಪೂ ಕಾಲೇಜ್ ಮಹಾಲಿಂಗಪುರಸ್ನಾತಕೋತ್ತರ ಪದವಿ ಅನುತ್ತೀರ್ಣ ಆಗಿರುವ ಅಂಕಪಟ್ಟಿ ಸಲ್ಲಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಕುರಿತು ಉಪನಿರ್ದೇಶಕರ ಗಮನಕ್ಕೆ ತಂದಿದ್ದೇನೆ. ಅವರ ಸೂಚನೆಯಂತೆ ಮುಂದಿನ ಕ್ರಮ ಜರುಗಿಸಲಾಗುವುದು.


ಕೆಲಸದಿಂದ ಬಿಡುಗಡೆಗೆ ಕೋರಿಕೆ ಸ್ನಾತಕೋತ್ತರ ಪದವಿ ಅನುತ್ತೀರ್ಣ ಆಗಿರುವ ದಾಖಲೆ ಸಲ್ಲಿಸಿ ಕೆಲಸಕ್ಕೆ ಸೇರಿದ್ದು ನಿಜ. ಅನುತ್ತೀರ್ಣ ಆಗಿರುವ ವಿಷಯಗಳನ್ನು ಬರೆಯಬೇಕು ಎಂದುಕೊಂಡಿದ್ದೆ. ಆದರೆ ಅಧ್ಯಯನ ಕೇಂದ್ರ ಮುಚ್ಚಿದ ನಂತರ ಏನೂ ತೋಚಲಿಲ್ಲ. ಬಿಡುಗಡೆ ಮಾಡುವಂತೆ ಪ್ರಾಚಾರ್ಯರಿಗೆ ಕೋರಿದ್ದೇನೆ – ಜಿ.ಎಂ. ಗಾಡಿಕರ ಅತಿಥಿ ಉಪನ್ಯಾಸಕ ಸರ್ಕಾರಿ ಪಿಯು ಕಾಲೇಜ್ ಮಹಾಲಿಂಗಪುರ

ಆತಿಥಿ ಉಪನ್ಯಸ್ಕರ್ ಎಂದು ಬೇಕಬೀಟಿದವರು ತಾಕೊಂಡ್ ಕಾರ್ಯವಹಿಸ್ತಿರುವು ಪ್ರಾಂಶುಪಾಲ ಮೇಲೆ ಕಾನನ್ ಕ್ರಮ ತುಂ

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!