ಬೀದರ.30.ಜನವರಿ.25:- ಬೀದರ್ ಗಡಿ ಭಾಗದ ಎಲ್ಲಾ ಸರಕಾರಿ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಹಾಗೂ ಹುದ್ದೆಗಳಿಗಾಗಿ ಮೀಸಲಾತಿಯ ಅವಶ್ಯಕತೆ ಇದೆ ಎಂದು ನರಸಪ್ಪಾ ಜಾನಕೆ ಅಭಿಪ್ರಾಯಪಟ್ಟರು.
ಇಂದು ಯಾಕತಪೂರ ಗ್ರಾಮದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾನಿಶ ಏಜುಕೇಷನ್ ಚಾರಿಟೇಬಲ್ ಟ್ರಸ್ಟ್ ಹಮ್ಮಿಕೊಂಡಿರುವ, ʼಗಡಿ ಭಾಗದಲ್ಲಿ ಕನ್ನಡ ಭಾಷೆ ಜಾಗೃತಿ ಸಾಹಿತ್ಯ ಮತ್ತು ಸಂಸ್ಕೃತಿಕ ಕಾರ್ಯಕ್ರಮʼವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಜಿಲ್ಲೆ ಬಹು ರಾಜ್ಯ ಗಡಿಗಳಿಂದ ಕೂಡಿದೆ. ಇಲ್ಲಿನ ಜನರು ಪಂಚ ಭಾಷೆಗಳನ್ನು ಮಾತನಾಡುತ್ತಾರೆ. ಕನ್ನಡ ಈ ನೆಲದ ಭಾಷೆಯಾಗಿ ಇಲ್ಲಿನ ಜನ ಅಭಿಮಾನ, ಸ್ವಾಭಿಮಾನದಿಂದ ಭಾಷಾ ಪ್ರೇಮವನ್ನು ಬೆಳೆಸುತ್ತಿದ್ದಾರೆ ಎಂದರು.
ಡಾ.ಸುಬ್ಬಣ್ಣ ಕರಕನಳ್ಳಿ ಅವರು ಮಾತನಾಡಿ, ಪ್ರಗತಿಗೆ ಶಿಕ್ಷಣವೇ ಮೂಲ, ನಮ್ಮ ಎಲ್ಲಾ ಸಮಸ್ಯೆಗಳನ್ನು ಹೊಗಲಾಡಿಸುವ ಶಕ್ತಿ ಶಿಕ್ಷಣಕ್ಕೆ ಇದೆ.
ಕನ್ನಡ ಭಾಷೆ ಶಿಕ್ಷಣ ಅನ್ನದ, ಚಿನ್ನದ ಭಾಷೆಯಾಗಿದೆ. ಇದು ಏಕತೆ, ಭಾವೈಕ್ಯತೆಯ ಭಾಷೆಯಾಗಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಶಾಲೆಯ ಮುಖ್ಯಗುರು ಜಾವೀದ್ ಅಹಮ್ಮದ್ ಮಾತನಾಡಿ, ಕನ್ನಡ ಭಾಷೆ ಪ್ರತಿದಿನ ವ್ಯವಹಾರಿಕ ಭಾಷೆಯಾಗಬೇಕು. ಗಡಿ ಭಾಗದ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸ ಸರ್ಕಾರ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ದಾನಿಶ ಎಜುಕೇಷನ್ ಚಾರಿಟೇಬಲ್ ಟ್ರಸ್ಟನ ಅಧ್ಯಕ್ಷ ಗೌಸೋದ್ದೀನ್ ಕುಪೇಂದ್ರ ಹೊಸಮನಿ, ಗ್ರಾಮ ಪಂಚಾಯತ್ ಸದಸ್ಯೆ ರತ್ನಮ್ಮಾ ಗಣಾಪೂರ, ಸಂಜೀವಕುಮಾರ್ ದಳಪತಿ, ಸೈಯದ್ ಮುದ್ದೆ, ವಿನಾಯಕ್ ಚವ್ಹಾಣ್, ಕಮಲಾಕರ್, ಅರ್ಚನಾ, ಬಸವಶ್ರೀ, ತಾವರ ಬೇಗಂ ಹಾಗೂ ಕಾಸೀಬ್ ಮುಸ್ತಾಕಿನ್ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಗಡಿ ಭಾಗದ ಎಲ್ಲಾ ಸರಕಾರಿ ಶಾಲೆ ಕಾಲೇಜುಗಳಿಲ್ಲಿ ಕಲಿತ್ ವಿದ್ಯಾರ್ಥಿಗಳಿಗೆ ವಿಶೇಷವಾದ ಅವಕಾಶ ಕಲ್ಪಿಸಿದರೆ ವಿದ್ಯಾರ್ಥಿ ಜೀವನದಲ್ಲಿ