ಬೀದರ.30.ಜನವರಿ.25:- ಉತ್ತರ ಪ್ರದೇಶ ರಾಜ್ಯದ ಪ್ರಯಾಗರಾಜ ನಗರದಲ್ಲಿ (ಕುಂಭಮೇಳಾ) ಮೌನಿ ಅಮವಾಸ್ಯದಂದು ಜನವರಿ.29 ರಂದು ಬೆಳಗಿನ ಜಾವ ತ್ರಿವೇಣಿ ಸಂಗಮ ತೀರದಲ್ಲಿ ಕಾಲ್ತುಳಿತದಿಂದ ಜನರು ಮರಣ, ಗಾಯಗೊಂಡ ಮಾಹಿತಿಯು ಸುದ್ದಿ ಮಾಧ್ಯಮಗಳಿಂದ ತಿಳಿದುಬಂದಿರುತ್ತದೆ.
ಕಾರಣ ಜಿಲ್ಲೆಯ ಸಾರ್ವಜನಿಕರು ಹಾಗೂ ಭಕ್ತರು ಕುಂಭಮೇಳಕ್ಕೆ ತೆರಳಿದ್ದಲ್ಲಿ ಹಾಗೂ ಕಾಣೆಯಾಗಿ ಸಂಪರ್ಕ ಸಾಧಿಸದೇ ಇದ್ದಲ್ಲಿ ಅಂತವರ ಸಂಬoಧಿಕರು ಮಾಹಿತಿಯನ್ನು ಜಿಲ್ಲಾಧಿಕಾರಿಗಳ ಕಚೇರಿಯ ದೂರವಾಣಿ ಸಂಖ್ಯೆ: 8884838404, 9986286973 ಗೆ ಸಂಪರ್ಕಿಸಿ ವಿವರ ನೀಡುವಂತೆ ಬೀದರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.