09/06/2025 4:27 AM

Translate Language

Home » ಲೈವ್ ನ್ಯೂಸ್ » ಕಲಬುರಗಿ: ಬರಹಗಾರರಿಂದ ಲೇಖನ ಆಹ್ವಾನ.!

ಕಲಬುರಗಿ: ಬರಹಗಾರರಿಂದ ಲೇಖನ ಆಹ್ವಾನ.!

Facebook
X
WhatsApp
Telegram

ಕಲಬುರಗಿ.29.ಜನವರಿ.25:-ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯು ಕಲ್ಯಾಣ ಕರ್ನಾಟಕದ ಭಾಷೆ, ಸಾಹಿತ್ಯ, ಸಾಮರಸ್ಯ ಸಂಸ್ಕೃತಿ, ಶೋಷಿತರ-ಮಹಿಳೆಯರ ಸ್ಥಿತಿಗತಿ, ಸ್ವಾತಂತ್ರ್ಯ ಚಳವಳಿ, ಸಾಮಾಜಿಕ ಚಳವಳಿಗಳು, 371 (ಜೆ)ನೇ ಕಲಂ ಹೋರಾಟ ಮತ್ತು ಅನುಷ್ಠಾನ, ಸಾಧಕ-ಬಾಧಕಗಳು, ಭವಿಷ್ಯದಲ್ಲಿ ಅಭಿವೃದ್ಧಿಪರ ಹಮ್ಮಿಕೊಳ್ಳಬೇಕಾದ ಯೋಜನೆಗಳ ಸೇರಿದಂತೆ ಒಟ್ಟಾರೆ ಇತಿಹಾಸದ ಕುರಿತು ಆಯಾ ಕ್ಷೇತ್ರಗಳಲ್ಲಿ ಅಂತರಾರಾಷ್ಟ್ರೀಯ ಮಟ್ಟದ ವಿದ್ವತ್ಪೂರ್ಣ ಸಂಶೋಧನಾ ಪುಸ್ತಕಗಳನ್ನು ಹೊರತರಲು ಯೋಚಿಸಿದ್ದು, ಇದಕ್ಕಾಗಿ ಆಸಕ್ತ ಬರಹಗಾರರಿಂದ ಲೇಖನ ಆಹ್ವಾನಿಸಿದೆ.

ಈ ಯೋಜನೆಯಲ್ಲಿ ಸಂಶೋಧನಾತ್ಮಕ ಪುಸ್ತಕ ಬರೆಯುವ ಆಸಕ್ತಿ ಇರುವವರು ತಾವು ಪುಸ್ತಕ ಬರೆಯಬಹುದಾದ ಕ್ಷೇತ್ರ, ವಿಷಯ, ಶೀರ್ಷಿಕೆಗಳನ್ನು ಸ್ಪಷ್ಟವಾಗಿ ಬರೆದು ಐದು ಪುಟಗಳಿಗೆ ಮೀರದಂತೆ ಲೇಖಗಳ ಸಂಕ್ಷಿಪ್ತ ಮಾಹಿತಿಯನ್ನು ಫೆಬ್ರವರಿ 20ರೊಳಗೆ ಕಾರ್ಯದರ್ಶಿಗಳು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ‘ಅಭಿವೃದ್ಧಿ ಭವನ’ ಐವಾನ-ಎ-ಶಾಹಿ, ಕಲಬುರಗಿ-585102 ವಿಳಾಸಕ್ಕೆ ಅಂಚೆ ಮೂಲಕ ಅಥವಾ ಖುದ್ದಾಗಿ ಅಥವಾ ಇಮೇಲ್ ವಿಳಾಸ kketihasa@gmail.com ಮೂಲಕವೂ ಸಲ್ಲಿಸಬಹುದು.

ಸಲ್ಲಿಕೆಯಾದ ಲೇಖಗಳನ್ನು ಪರಿಶೀಲನಾ ಸಮಿತಿ ಆಯ್ಕೆ ಮಾಡಲಿದ್ದು, ಸಮಿತಿಯ ನಿರ್ಣಯವೇ ಅಂತಿಮವಾಗಿರುತ್ತದೆ ಎಂದು ಮಂಡಳಿ ಪ್ರಕಟಣೆ ತಿಳಿಸಿದೆ.

ಈ ಬರಹಗಾರ ಲೇಖನ ಅಸಕ್ತಿ ಇರುವವರು ತಕ್ಷಣವೇ ಅರ್ಜಿ ಸಲ್ಲಿಸಬಹುದು.!

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!