ಬೀದರ್: 29.ಜನೆವರಿ.25: ಬೀದರ ನಗರ ಆಸ್ಪತ್ರೆಯಲ್ಲಿ ‘ಶಸ್ತ್ರಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ತೋರಿದ ನಗರದ ವೈದ್ಯರನ್ನು ಅಮಾನತುಗೊಳಿಸಬೇಕು’ ಎಂದು ಹುಮನಾಬಾದ್ ತಾಲ್ಲೂಕಿನ ಸಿಂದಬಂದಗಿ ಗ್ರಾಮದ ನರಸಿಂಗ್ ವಿಠ್ಠಲ ಆಗ್ರಹಿಸಿದ್ದಾರೆ.
ನನ್ನ ಬಲಗೈ ಕೈ ಬೆರಳಿನ ಮೂಳೆ ಮುರಿದಿತ್ತು. ಚಿಕಿತ್ಸೆಗಾಗಿ 2024ರ ನ. 21ರಂದು ಆಸ್ಪತ್ರೆಗೆ ದಾಖಲಾಗಿದ್ದೆ. ಶಸ್ತ್ರಚಿಕಿತ್ಸೆ ಮಾಡಿ ನ. 30ರಂದು ಡಿಸ್ಚಾರ್ಜ್ ಮಾಡಿದ್ದಾರೆ. ತಿಂಗಳ ವಿಶ್ರಾಂತಿ ಬಳಿಕ ಎಕ್ಸ್ರೇ ತೆಗೆಸಿ ನೋಡಿದಾಗ ನನ್ನ ಬಲಗೈ ಕೈ ಬೆರಳಿನ ಮೂಳೆ ಮುರಿದ ಅವಸ್ಥೆಯಲ್ಲಿಯೇ ಇರುವುದು ಗೊತ್ತಾಗಿದೆ.
ಬ್ರಿಮ್ಸ್ ಬೀದರ್ ಆಸ್ಪತ್ರೆಯಲ್ಲಿ ‘ಶಸ್ತ್ರಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ತೋರಿದ ನಗರದ ವೈದ್ಯರನ್ನು ಅಮಾನತುಗೊಳಿಸಬೇಕು’ ಎಂದು ವೈದ್ಯರ ವಿರುದ್ಧ ಕ್ರಮ ಜರುಗಿಸಬೇಕು. ಚಿಕಿತ್ಸಾ ವೆಚ್ಚ ಭರಿಸಬೇಕೆಂದು ಆಗ್ರಹಿಸಿದ್ದಾರೆ.