ಹುಮನಾಬಾದ.29.ಜನೆವರಿ.25:- ಹುಮನಾಬಾದ್ ತಾಲ್ಲೂಕಿನ ಬೇನ್ ಚಿಂಚೋಳಿ ಗ್ರಾಮದಲ್ಲಿನ ಮಹಾಲಕ್ಷ್ಮಿ ದೇವಿಯ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮದ ಎಲ್ಲ ಸಮುದಾಯದ ಜನರು ಸೇರಿಕೊಂಡು ಮಹಾಲಕ್ಷ್ಮಿ ದೇವಿ ಜಾತ್ರಾ ಅತ್ಯಂತ ವೈಭವದಿಂದ ಆಚರಣೆ ಮಾಡಿರುವುದು ಜಾತ್ರೆಗಳ ಆಚರಣೆಯಿಂದ ಪರಸ್ಪರ ಸೌಹಾರ್ದತೆ ಬೆಳೆಯುತ್ತದೆ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಹೇಳಿದರು.
ಸಮುದಾಯ ಭವನ ಪರಿಶೀಲನೆ: ತಾಲ್ಲೂಕಿನ ಬೇನ್ ಚಿಂಚೋಳಿ ಗ್ರಾಮದಲ್ಲಿನ ಮಹಾದೇವ ದೇವಸ್ಥಾನದ ಹತ್ತಿರದಲ್ಲಿನ ಸಮುದಾಯ ಭವನದ ಕಾಮಗಾರಿಯನ್ನು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಪರಿಶೀಲನೆ ನಡೆಸಿದರು.
ನಂತರ ಅವರು ಮಾತನಾಡಿ, ಸಮುದಾಯ ಭವನದ ಇನ್ನುಳಿದ ಕಾಮಗಾರಿಗಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಯೋಜನೆಯಡಿಲ್ಲಿ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ಭೀಮರಾವ್ ನಂದಿ, ಜೈರಾಜ ಪಾಟೀಲ, ದಯಾನಂದ ರಾವ್ ಪಾಟೀಲ , ರಮೇಶ ಖೇರೋಜಿ , ಮಲ್ಲಿಕಾರ್ಜುನ ಅತಿವಾಳ, ಕವಿರಾಜ ಆತಿವಾಳ, ಅಪ್ಪರಾವ್ ಪಾಟೀಲ, ಶಿವಕುಮಾರ್ ಕಣಜಿ, ಭೀಮಷಾ, ನಾಗೇಂದ್ರ ಪಾಟೀಲ , ಹಣಮಂತ ಕಣಜಿ , ಎಸ್. ಸಂಜುರೆಡ್ಡಿ ಅಣದುರೆ ಸೇರಿದಂತೆ ಇತರರು ಇದ್ದರು.
ತಾಲ್ಲೂಕಿನ ಬೇನ್ ಚಿಂಚೋಳಿ ಗ್ರಾಮದಲ್ಲಿನ ಮಹಾದೇವ ದೇವಸ್ಥಾನದ ಹತ್ತಿರದಲ್ಲಿನ ಸಮುದಾಯ ಭವನದ ಕಾಮಗಾರಿಯನ್ನು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಪರಿಶೀಲನೆ ನಡೆಸಿ ಮಹಾಲಕ್ಷ್ಮಿ ದೇವಿ ಜಾತ್ರಾ ಅತ್ಯಂತ ವೈಭವದಿಂದ ಆಚರಣೆ ಮಾಡಿರುವುದು ಜಾತ್ರೆಗಳ ಆಚರಣೆಯಿಂದ ಪರಸ್ಪರ ಸೌಹಾರ್ದತೆ ಬೆಳೆಯುತ್ತದೆ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಹೇಳಿದರು.