09/06/2025 10:06 PM

Translate Language

Home » ಲೈವ್ ನ್ಯೂಸ್ » ಜಾತಿ ಜನಗಣತಿ ಮಾಡಿದ ನಂತರವೇ ಒಳಮೀಸಲಾತಿ ಜಾರಿ .!

ಜಾತಿ ಜನಗಣತಿ ಮಾಡಿದ ನಂತರವೇ ಒಳಮೀಸಲಾತಿ ಜಾರಿ .!

Facebook
X
WhatsApp
Telegram

ಬೀದರ.27.ಜನವರಿ.25:- ರಜ್ಯದಲ್ಲಿ ಒಳ ಮೀಸಲಾತಿ ಜಾರಿಗೆ ತರುವ ಅಂತಾ ಕೆಲವು ದಲಿತ ಎಡಗೈ. ಬಲಗೈ ಸಂಘಟನೆಗಳು ಸತತ್ವಾಗಿ ಹೋರಾಟ ನಡೆಸುತ್ತಿದ್ದಾರೆ.ಜಾತಿ ಜನಗಣತಿ ಮಾಡಿದ ನಂತರವೇ ಒಳಮಿಸಲಾತಿ ಜಾರಿಗೆ ತರಬೇಕು ಎಂದು ಗೋರ್ ಸೇನಾ ರಾಷ್ಟ್ರೀಯ ಸಂಘಟನೆಯು ಒತ್ತಾಯ ಮಾಡಿದೆ.ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೋರ್ ಸೇನಾ ಮಹಿಳಾ ಅಧ್ಯಕ್ಷ ಸವಿತಾ ರಾಠೋಡ್ ಅವರು, ಜಾತಿ ಜನಗಣತಿಯು 2011ರ ನಂತರ ನಡೆದಿಲ್ಲ.

2011ರಲ್ಲಿಯೂ ನಮ್ಮ ಸಮುದಾಯದ ಜನಗಣತಿ ಸರಿಯಾಗಿ ನಡೆದಿಲ್ಲ. ಹಾಗಾಗಿ ನಮ್ಮ ಜನಸಂಖ್ಯೆ ಹೆಚ್ಚಾಗಿದ್ದು, ಒಳಮಿಸಲಾತಿಯಲ್ಲಿ ನಮ್ಮ ಜನಸಂಖ್ಯೆಗೆ ತಕ್ಕಂತೆ ಮೀಸಲಾತಿ ಒದಗಿಸುತ್ತಿಲ್ಲ. ನಾಗಮೋಹನ್ ದಾಸ್ ಅವರಿಗೆ ಭೇಟಿಯಾಗಿ ಇದರ ಬಗ್ಗೆ ಮನವಿಪತ್ರ ಸಲ್ಲಿಸಿದ್ದೇವೆ ಎಂದು ತಿಳಿಸಿದರು.

ಗೋವರ್ಧನ್ ರಾಠೋಡ್ ಮಾತನಾಡಿ, ಈಗ ಒಲಮೀಸಲಾತಿ ಜಾರಿಗೆ ಮಾಡಿದರೆ ನಮ್ಮ ಸಮುದಾಯಕ್ಕೆ ಅನ್ಯಾಯವಾಗುತ್ತದೆ. ಹಾಗಾಗಿ ಒಳಮೀಸಲಾತಿ ಜಾರಿಗೆ ತರುವ ಮುನ್ನ ನಮ್ಮ ಸಮುದಾಯದ ಜಾತಿ ಜನಗಣತಿ ಆಗಬೇಕು. ಜಾತಿ ಜನಗಣತಿ ನಡೆದಾಗ ಮಾತ್ರ ನಮ್ಮ ಜನಸಂಖ್ಯೆಗೆ ತಕ್ಕಂತೆ ಮೀಸಲಾತಿ ಸಿಗುತ್ತದೆ. ಒಂದು ವೇಳೆ ಜಾತಿ ಜನಗಣತಿ ನಡೆಸದೆ ಒಳಮೀಸಲಾತಿ ಜಾರಿ ಮಾಡಿದರೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಗೋರ್ ಸೇನಾ ಸಂಘಟನೆಯ ಜಿಲ್ಲಾಧ್ಯಕ್ಷ ರಮೇಶ್ ಜಾಧವ್, ಉಪಾಧ್ಯಕ್ಷ ನೀಲಕಂಠ ರಾಠೋಡ್, ಕಾರ್ಯಧ್ಯಕ್ಷ ಬಾಬು ಜಾಧವ್ ಹಾಗೂ ಶಶಿಕಲಾ ವಸಂತ್ ಭಾಗವಹಿಸಿದ್ದರು.

ಒಳಮೀಸಲಾತಿ ಜಾರಿಗೆ ತರುವ ಮೋಟ್ ಮೊದಲು ಜಾತಿ ಗಣತಿ ಕಾರ್ಯ ಮಾಡ್ಬೇಕು ಅಂತಾ ಕೆಲವು ಸಂಗತ್ನೆಗಳು

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!