08/06/2025 10:37 PM

Translate Language

Home » ಲೈವ್ ನ್ಯೂಸ್ » ದೇಶದ ಅಖಂಡತೆ ಹಾಗೂ ಭದ್ರ ಬುನಾದಿಗೆ
ಸಂವಿಧಾನವೇ ಮುಖ್ಯ-ಸಚಿವ ಈಶ್ವರ ಬಿ.ಖಂಡ್ರೆ

ದೇಶದ ಅಖಂಡತೆ ಹಾಗೂ ಭದ್ರ ಬುನಾದಿಗೆ
ಸಂವಿಧಾನವೇ ಮುಖ್ಯ-ಸಚಿವ ಈಶ್ವರ ಬಿ.ಖಂಡ್ರೆ

Facebook
X
WhatsApp
Telegram

ಬೀದರ.26ಜನವರಿ.25:- ವಿಶ್ವಕ್ಕೆ ಮಾದರಿಯಾದ ಭಾರತದ ಲಿಖಿತ ಸಂವಿಧಾನದಂತೆ ನಡೆಯುವುದೇ ನಮ್ಮೆಲ್ಲರ ಜವಾಬ್ದಾರಿ ಎಂದು ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರು ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಹೇಳಿದರು.


ಅವರು ಜಿಲ್ಲಾ ಕ್ರೀಡಾಂಗಣದಲ್ಲಿ 76ನೇ ಗಣರಾಜ್ಯೋತ್ಸವದಂದು ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು. ಸಂವಿಧಾನದಲ್ಲಿ ಎಲ್ಲರಿಗೂ ಅಗತ್ಯವಾದ ಸ್ವಾತಂತ್ರ ಹಕ್ಕುಗಳನ್ನು ಪ್ರಸ್ತಾಪಿಸಲಾಗಿದೆ. ದೇಶದ ಅಖಂಡತೆಗೆ ಹಾಗೂ ಭದ್ರ ಬುನಾದಿಗೆ ಸಂವಿಧಾನವೇ ಮುಖ್ಯಯೆಂದರು.


ಸ್ವಾತಂತ್ರ್ಯ ಹೊಂದಿದ ನಂತರ ಡಾ.ಬಾಬಾ ಸಾಹೇಬ ಅಂಬೇಡ್ಕರ ನೇತೃತ್ವದಲ್ಲಿ ರಚನೆಯಾದ ಸಂವಿಧಾನ ಇಡೀ ಜಗತ್ತಿಗೆ ಮಾದರಿಯಾಗಿದೆ. 75 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಹಸಿರು ಕ್ರಾಂತಿಯ ನಂತರ ದೇಶ ಆಹಾರ ಧಾನ್ಯಗಳನ್ನು ರಫ್ತು ಮಾಡಲು ಆರಂಭಿಸಿತು. ಔದ್ಯೋಗಿಕ ಕ್ರಾಂತಿ, ವಿಜ್ಞಾನ-ತಂತ್ರಜ್ಞಾನ ಅಭಿವೃದ್ಧಿ, ಮಾಹಿತಿ ತಂತ್ರಜ್ಞಾನ, ಸಾಮಾಜಿಕ, ಆರ್ಥಿಕ ಬದಲಾವಣೆಗೆ ಹಲವಾರು ಹಿರಿಯ ನಾಯಕರು ಶ್ರಮಿಸಿದರು.

ಜವಹರಲಾಲ ನೆಹರು, ಲಾಲಬಹುದ್ದೂರ ಶಾಸ್ತ್ರೀ, ಮುರಾರ್ಜಿ ದೇಸಾಯಿ, ವಿ.ಪಿ.ಸಿಂಗ್, ಇಂದಿರಾಗಾಂಧಿ, ನರಸಿಂಹರಾವ್, ಮನಮೋಹನ ಸಿಂಗ್ ಸೇರಿದಂತೆ ಅನೇಕರು ಈ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ನಡೆಸಿದರು ಎಂದು ಸಚಿವರು ನುಡಿದರು.


ಈಗಲೂ ಸಾಕಷ್ಟು ಸಮಸ್ಯೆಗಳಿವೆ, ಜಾತಿ ಧರ್ಮಗಳ ಸಂಘರ್ಷ, ಅಸಮಾನತೆ, ಬಡತನ ನಿರುದ್ಯೋಗದಂತಹ ಗಂಭೀರ ಸಮಸ್ಯೆಗಳಿವೆ. ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದಲ್ಲಿ ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಮಹಿಳಾ ಅಭಿವೃದ್ಧಿಗೆ, ಬಡತನ ನಿರ್ಮೂಲನೆಗೆ ಹಲವಾರು ದೃಷ್ಟಿಯಿಂದ ಶ್ರಮಿಸಲಾಗುತ್ತಿದೆಯೆಂದರು.
ರಾಜ್ಯದ ಪಂಚ ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿವೆ.

ಇತರೇ ರಾಜ್ಯಗಳು ಅನುಕರಣೆ ಮಾಡುತ್ತಿವೆ. ಐದು ಗ್ಯಾರಂಟಿಗಳಿಗೆ ಪ್ರತಿವರ್ಷ 54 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ. ರಾಜ್ಯದ ಜಿ.ಡಿ.ಪಿ. ಸಹ ಹೆಚ್ಚಾಗಿದೆಯೆಂದು ತಿಳಿಸಿದರು.

ಹಸಿವು ಮುಕ್ತ ಕರ್ನಾಟಕ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರವು ಘೋಷಣೆ ಮಾಡಿದ ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರದಿಂದ 05 ಕೆ.ಜಿ. ಹೆಚ್ಚುವರಿ ಅಕ್ಕಿ ನೀಡುವ ಬದಲಾಗಿ ನೇರ ನಗದು ಹಣ ಪಾವತಿಸಲು ಸೆಪ್ಟೆಂಬರ್-2024ರ ಮಾಹೆಗೆ ಜಿಲ್ಲೆಗೆ ರೂ.1887.06 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿರುತ್ತದೆ. ಒಟ್ಟು 307802 ಅರ್ಹ ಪಡಿತರ ಚೀಟಿಗಳ 1155837 ಫಲಾನುಭವಿಗಳ ಮುಖ್ಯಸ್ಥರ ಬ್ಯಾಂಕ್ ಖಾತೆಗಳಿಗೆ ರೂ.18,87,06,630 ಗಳನ್ನು ಪಾವತಿಸಲಾಗಿರುತ್ತದೆ. ಜುಲೈ-2023 ರಿಂದÀ ಸೆಪ್ಟೆಂಬರ್-2024ರ ವರೆಗೆ ಒಟ್ಟು ರೂ.2,75,24,69,320.00 ಗಳನ್ನು ಕುಟುಂಬಗಳ ಮುಖ್ಯಸ್ಥರ ಬ್ಯಾಂಕ್ ಖಾತೆಗಳಿಗೆ ಡಿ.ಬಿ.ಟಿ ಮೂಲಕ ಜಮೆ ಮಾಡಲಾಗಿದೆ ಎಂದರು.


ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ಮಹಿಳಾ ಮತ್ತು ಬಾಲಕಿಯರು ಒಟ್ಟು ಸೇರಿ 6.54 ಕೋಟಿ ಜನರು ಈ ಸೌಲಭ್ಯವನ್ನು ಪಡೆದಿರುತ್ತಾರೆ. ಹಾಗೂ ವಿಭಾಗದ ವಾಹನಗಳಲ್ಲಿ ಪ್ರತಿ ದಿನ ಸರಾಸರಿ 1.15 ಲಕ್ಷ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ಸದರಿ ಮಹಿಳಾ ಮತ್ತು ಬಾಲಕಿಯರು ಒಟ್ಟು ಸಏರಿ ರೂ. 180.57 ಕೋಟಿ ಸಂದಾಯವಾಗಿರುತ್ತದೆ. ಪ್ರತಿ ದಿನ ಪ್ರಯಾಣಿಕರಿಂದ ಸರಾಸರಿ ರೂ. 35.68 ಲಕ್ಷ ಸಾರಿಗೆ ಆದಾಯ ಸಂದಾಯವಾಗುತ್ತಿದೆ ಎಂದರು. 


ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ 8057 ವಿಧ್ಯಾರ್ಥಿಗಳು ನೊಂದಣಿ ಮಾಡಿಕೊಂಡಿದ್ದು, ಸದರಿ ವಿದ್ಯಾರ್ಥಿಗಳ ಖಾತೆಗೆ ರೂ. 93234000 ನ್ನು ಜಮೆ ಮಾಡಲಾಗಿರುತ್ತದೆ ಎಂದರು.


ಗೃಹಜ್ಯೋತಿ ಯೋಜನೆಯಡಿಯಲ್ಲಿ ಗರಿಷ್ಠ 200 ಯುನಿಟ್‍ವರೆಗೆ ವಿದ್ಯುತ್ ಉಚಿತವಾಗಿ ಪಡೆಯುತಿದ್ದು, ಒಟ್ಟು 3,56,648 ಗ್ರಾಹಕರು ಇದರ ಲಾಭ ಪಡೆಯುತ್ತಿದ್ದು, ಈ ಯೋಜನೆಯು ಇಲ್ಲಿಯವರಗೆ ಶೇ.97 ಆಗಿದ್ದು, ಇನ್ನೂ ನೋಂದಣಿ ಪ್ರಕ್ರೀಯೆ ಚಾಲ್ತಿಯಲಿರುತ್ತದೆ.

ಆಗಸ್ಟ್.2023 ರಿಂದ ಡಿಸೆಂಬರ್.2024 ರ ಅಂತ್ಯದವರೆಗೆ ಸರ್ಕಾರದಿಂದ 263.23 ಕೋಟಿ ರೂ. ಅನುದಾನ ನೀಡಲಾಗಿದೆ ಎಂದರು.
ಗೃಹಲಕ್ಷ್ಮೀ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 3,45,713 ಅರ್ಹ ಫಲಾನುಭವಿಗಳು ನೋಂದಣಿಯಾಗಿದ್ದು, ಇಲ್ಲಿಯವರೆಗೆ ಪ್ರತಿ ಯಜಮಾನಿಗೆ ಮಾಹೆಯಾನ ತಲಾ ರೂ. 2000 ರಂತೆ ಒಟ್ಟು ರೂ. 929,88,20,000 ಗಳನ್ನು ಡಿ.ಬಿ.ಟಿ. ಮುಖಾಂತರ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ ಈಗಾಗಲೇ 18.224 ಲಕ್ಷ ಸಸಿಗಳನ್ನು ನೆಡಲಾಗಿರುತ್ತದೆ. 2025-26ನೇ ಸಾಲಿನಲ್ಲಿ 8.150 ಲಕ್ಷ ಸಸಿಗಳನ್ನು ಬೆಳೆಸಲಾಗಿದೆ. ಕರ್ನಾಟಕ ಅರಣ್ಯ ಕಾಯ್ದೆ 1963 ರನ್ವಯ ಒಟ್ಟು 1177.00 ಎಕರೆ ಒತ್ತುವರಿಯಾದ ಅರಣ್ಯ ಪ್ರದೇಶವನ್ನು ಒತ್ತುವರಿದಾರರಿಂದ ತೆರವುಗೊಳಿಸಿ ಇಲಾಖಾ ವಶಕ್ಕೆ ಪಡೆದುಕೊಳ್ಳಲಾಗಿದೆ.

ಹೊನ್ನಿಕೇರಿ ಮಿಸಲು ಅರಣ್ಯ ಮತ್ತು ಇತರೆ ಜೀವವೈವಿಧ್ಯ ಪ್ರದೇಶಗಳಲ್ಲಿ ಪರಿಸರ ಪ್ರವಾಸೋದ್ಯಮ ಮತ್ತು ಸಂರಕ್ಷಣಾತ್ಮಕ ಕಾರ್ಯಕ್ರಮಗಳಿಗಾಗಿ ರೂ. 15,00 ಕೋಟಿಗೆ ಆಡಳಿತಾತ್ಮಕ ಅನುಮೋದನೆ ಪಡೆಯಲಾಗಿದ್ದು ಟೆಂಡರ್ ಹಂತದಲ್ಲಿರುತ್ತದೆ. ಕಲ್ಯಾಣ ಕರ್ನಾಟಕದ ಎಲ್ಲ 7 ಜಿಲ್ಲೆಗಳಲ್ಲಿ ಹಸಿರು ಹೊದಿಕೆ ಮತ್ತು ಅರಣ್ಯ ವ್ಯಾಪ್ತಿ ಹೆಚ್ಚಳಕ್ಕೆ ವಿಶೇಷ ಯೋಜನೆಯೊಂದನ್ನೂ ರೂಪಿಸಲಾಗುತ್ತಿದೆ. 100 ಕೋಟಿ ವೆಚ್ಚದಲ್ಲಿ ಬೀದರನ 5 ಜಿಲ್ಲೆಯಲ್ಲಿ ರಸ್ತೆ ಬದಿ ಎತ್ತರದ ಸಸಿ ನೆಡುವ ಯೋಜನೆ ರೂಪಿಸಲಾಗಿದ್ದು ಪ್ರತಿ ಸಸಿಗೆ ಜಿಯೋಟ್ಯಾಗ ಅಳವಡಿಸಲಾಗುವುದು ಎಂದರು.


ಕಂದಾಯ ಇಲಾಖೆಯಲ್ಲಿ ಭೂ ಮಂಜೂರಾತಿ ಪ್ರಕರಣಗಳಲ್ಲಿ ಸರಳೀಕರಣವಾದ ದರಖಾಸ್ತು ಪೆÇೀಡಿ ಅಭಿಯಾನ ಮಾಡಲು ಜಿಲ್ಲಾಡಳಿತ ಬೀದರ ಕ್ರಮ ಕೈಗೊಂಡಿದ್ದು,  ಒಟ್ಟು 18 ಜನ ಫಲಾನುಭವಿಗಳಿಗೆ ಪೆÇೀಡಿ ದುರಸ್ತಿ / ಹೊಸ ಪಹಣಿ ಇಂದು ವಿತರಿಸಲಾಗಿದೆ. ಹಳೆಯ ದಾಖಲಾತಿಗಳ ಡಿಜಿಟಲೀಕರಣಗೊಳಿಸಲು ಭೂ ಸುರಕ್ಷಾ ಯೋಜನೆಯಡಿ ಬೀದರ, ಭಾಲ್ಕಿ, ಚಿಟಗುಪ್ಪಾ, ಬಸವಕಲ್ಯಾಣ, ಹುಲಸೂರ, ಕಮಲನಗರ ಮತ್ತು ಔರಾದ (ಬ) ತಾಲ್ಲೂಕುಗಳಲ್ಲಿ  ಕಾರ್ಯಕೈಗೊಳ್ಳಲಾಗಿದೆ ಎಂದರು.


ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ 4,15,569 ಹೆಕ್ಟರ್ ಗುರಿ ಇದ್ದು, ಶೇ. 100 ರಷ್ಟು ಬಿತ್ತನೆಯಾಗಿರುತ್ತದೆ.  2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 4,33,603 ರೈತರ ತಾಕುಗಳ ಮಾಹಿತಿಯನ್ನು ಬೆಳೆ ಸಮೀಕ್ಷೆ ಮಾಡಲಾಗಿರುತ್ತದೆ. 98 % ಪ್ರಗತಿ ಸಾಧಿಸಲಾಗಿರುತ್ತದೆ. ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಪ್ರಗತಿಯಲ್ಲಿದೆ.

ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 1,96,966 ರೈತರು ಹಾಗೂ ಹಿಂಗಾರು ಹಂಗಾಮಿನಲ್ಲಿ 3178 ರೈತರು ಬೆಳೆ ಮೀಮೆ ಯೋಜನೆಯಡಿ ನೊಂದಾಯಿಸಿಕೊಂಡಿರುತ್ತಾರೆ. ಮುಂಗಾರು ಹಂಗಾಮಿನಲ್ಲಿ ಐoಛಿಚಿಟizeಜ ಅಚಿಟಚಿmiಣಥಿ ಯಡಿ 28,131 ರೈತರಿಗೆ ಒಟ್ಟು 12.43 ಕೋಟಿ ರೂ.ಗಳ ಬೆಳೆ ವಿಮಾ ಪರಿಹಾರ ನೀಡಲು ಅಂದಾಜಿಸಲಾಗಿದೆ ಎಂದರು.


ಜಿಲ್ಲೆಯ ಜನರ ಆರೋಗ್ಯಪೂರ್ಣ ಬದುಕಿಗಾಗಿ ಸರ್ಕಾರವು ಬದ್ಧವಾಗಿದ್ದು, ಎಲ್ಲರಿಗೂ ಆರೋಗ್ಯ ಎಲ್ಲಡೆಯೂ ಆರೋಗ್ಯ ಎಂಬ ಧ್ಯೆಯವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ತಾಯಿ ಮತ್ತು ಮಕ್ಕಳ ಸುರಕ್ಷತೆಗಾಗಿ ಜನನಿ ಸುರಕ್ಷಾ ಯೋಜನೆ, ಜನನಿ ಶಿಶು ಸುರಕ್ಷಾ ಕಾರ್ಯಕ್ರಮ, ನಗು-ಮಗು ಆರೋಗ್ಯ ಕವಚ, ಜನನಿ ಸುರಕ್ಷಾವಾಹಿನಿಯಂತಹ ಹಲವಾರು ಆರೋಗ್ಯ ಕಾರ್ಯಕ್ರಮಗಳು ಪರಿಣಾಮವಾಗಿ ಅನುಷ್ಠಾನಗೊಳಿಸಲಾಗಿದೆ ಎಂದರು.

ಕಲ್ಯಾಣ ಕರ್ನಾಟಕ ಸಂಪೂರ್ಣ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಹೊಸದಾಗಿ ಪ್ರಸ್ತಾಪಿಸಿರುವ ನಗರ ಆರೋಗ್ಯ ಸಂಸ್ಥೆಗಳು ಹುಮನಾಬಾದ ಮತ್ತು ಭಾಲ್ಕಿ. ಜನವಾಡಾ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 30 ಹಾಸಿಗೆಯುಳ್ಳ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ.  ಬೀದರ ನಗರಕ್ಕೆ ಹೊಸದಾಗಿ ಪ್ರಸ್ತಾಪಿಸಿರುವ ನಗರ ಸಮುದಾಯ ಆರೋಗ್ಯ ಕೇಂದ್ರ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ವಿವಿಧ ಆರೋಗ್ಯ ಸಂಸ್ಥೆಗಳನ್ನು ಮೇಲ್ದರ್ಜೆರಿಸಲಾಗಿದೆ.

ಹುಲಸೂರು, ಕಮಲನಗರ, ಚಿಟಗುಪ್ಪಾ, ಮನ್ನಾಎಖೆಳ್ಳಿ, ನಿಟ್ಟೂರ(ಬಿ), ರಾಜೇಶ್ವರ ಸಮುದಾಯ ಆರೋಗ್ಯ ಕೇಂದ್ರಗಳನ್ನು 30 ಹಾಸಿಗೆಯಿಂದ 50 ಹಾಸಿಗೆಗೆ ಮೇಲ್ದರ್ಜೆಗೇರಿಸುವುದು. ಭಾಲ್ಕಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯನ್ನು 100 ಹಾಸಿಗೆಯಿಂದ 150 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸುವುದಕ್ಕೆ ಪ್ರಸ್ತಾಪಿಸಲಾಗಿದೆ. ಬಸವಕಲ್ಯಾಣ ಉಪವಿಭಾಗಿಯ ಆಸ್ಪತ್ರೆಯನ್ನು 300 ಹಾಸಿಗೆಯ ಜಿಲ್ಲಾ ಮಟ್ಟದ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.


ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಡಿ ಜಿಲ್ಲೆಗೆ 3 ಸಾವಿರ ಇದ್ದ ಅನುದಾನವನ್ನು 5 ಸಾವಿರಕ್ಕೆ ಹೆಚ್ಚಿಸಲಾಗಿದೆ. ಜಿಲ್ಲೆಯಲ್ಲಿ 2024-25 ರವರೆಗೆ 2436.26 ಕೋಟಿ ಮೊತ್ತದಲ್ಲಿ 4764 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಜಿಲ್ಲೆಯ ರಸ್ತೆ ಸುಧಾರಣೆಗೆ ಅಗತ್ಯ ಕ್ರಮ ವಹಿಸಲಾಗುತ್ತಿದೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಎಸ್.ಹೆಚ್.ಡಿ.ಪಿ.) ಅಡಿಯಲ್ಲಿ ರೂ. 90.00 ಕೋಟಿಗಳು ಮಂಜೂರಾಗಿ ಈಗಾಗಲೇ ಗುತ್ತಿಗೆ ನೇಮಿಸಿದ್ದು, ಸುಮಾರು 30.00 ಕಿ.ಮೀ. ಉದ್ದದ ರಸ್ತೆಯನ್ನು ಸುಧಾರಣೆ ಮಾಡುವ ಕಾಮಗಾರಿ ಪ್ರಗತಿಯಲ್ಲಿದೆ.

ಜಿಲ್ಲಾ ಮುಖ್ಯ ರಸ್ತೆ ಸುಧಾರಣೆ ಮಾಡಲು 27 ಕಾಮಗಾರಿಗಳು ಒಟಟು ರೂ. 62.00 ಕೋಟಿಗಳಿಗೆ ಮಂಜೂರಾಗಿದ್ದು, ಟಎಂಡರ್ ಪ್ರಕ್ರಿಯೆ ಹಂತದಲ್ಲಿದೆ. ಬೀದರ ಪಟ್ಟಣದಲ್ಲಿ ರೂ. 59.80 ಕೋಟಿಗಳಿಗೆ ಜಿಲ್ಲಾ ಸಂಕೀರ್ಣ ಕಟ್ಟಡ ನಿರ್ಮಿಸಲು ಸಚಿವ ಸಂಪುಟದಿಂದ ಮಂಜೂರಾಗಿದ್ದು, ಟೆಂಡರ್ ಕರೆಯುವ ಹಂತದಲ್ಲಿದ್ದು ಮಾರ್ಚ ತಿಂಗಳಲ್ಲಿ ಮುಖ್ಯಮಂತ್ರಿಗಳಿಂದ ಅಡಿಗಲ್ಲು ನೆರವೇರಿಸಲಾಗುವುದು. ಭಾಲ್ಕಿ ಪಟ್ಟಣದಲ್ಲಿ ರೂ. 16.60 ಕೋಟಿಗಳಿಗೆ ಕ್ರೀಡಾಂಗಣ ಕಟ್ಟಡ ನಿರ್ಮಿಸಲು ಮಂಜೂರಾಗಿ ಟೆಂಡರ ಹಂತದಲ್ಲಿದೆ ಎಂದರು.

ನೀರಾವರಿ ಯೋಜನೆಗಳಿಗೆ ಒತ್ತು ನೀಡಲಾಗಿದ್ದು, ಭಾಲ್ಕಿ ಏತ ನೀರಾವರಿ ಹಾಗೂ ಔರಾದ್ ತಾಲ್ಲೂಕಿನ 504 ಕೋಟಿ ವೆಚ್ಚದ 36 ಕೆರೆ ತುಂಬುವ ಯೋಜನೆಗೆ ಸಿದ್ಧಗೊಂಡಿದೆ. 876 ಜನವಸತಿ ಪ್ರದೇಶಗಳಲ್ಲಿ ಬಹುಗ್ರಾಮ ಯೋಜನೆಯಡಿ 900 ಕೋಟಿ ರೂ.ಗಳ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
ಬೀದರ ಜಿಲ್ಲೆಯ ಯುವಕರಿಗೆ ಕೌಶಲ್ಯ ಅಭಿವೃದ್ದಿಗಾಗಿ ಶೀಘ್ರವೇ ಇನ್ನೊಂದು ಜೆ.ಟಿ.ಟಿ.ಸಿ. ಟೂಲ್ಸ್ ಆಂಡ ಟ್ರೇನಿಂಗ್ ಸ್ಥಾಪಿಸಲಾಗುವುದು. ಹೈದ್ರಾಬಾದ್ ಹತ್ತಿರವಾಗುವುದರಿಂದ ಇಂಕುಬೇಷನ್ ಕೇಂದ್ರ ಸ್ಥಾಪಿಸಲು ಚರ್ಚಿಸಲಾಗಿದೆ. ತಾರಾಲಯ ನಿರ್ಮಾಣ, ವಿಜ್ಞಾನ ಕೇಂದ್ರ ಸ್ಥಾಪನೆಗೂ ಸಹ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.


ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸನ್ಮಾನಿತರ ವಿವರ:- ಪತ್ರಿಕಾ ರಂಗ (ಮುದ್ರಣ) ಕ್ಷೇತ್ರದಲ್ಲಿ ಚಂದ್ರಕಾತ ತಂದೆ ಹಣಮಂತಪ್ಪಾ, ದೃಶ್ಯ ಮಾಧ್ಯಮ ಕ್ಷೇತ್ರದಲ್ಲಿ ರಾಮಕೃಷ್ಣ ಎಸ್.ಎಲ್. ಶಿಕ್ಷಣ ಕ್ಷೇತ್ರದಲ್ಲಿ ಮಾಣಿಕಪ್ಪಾ ಗೋರನಾಳೆ, ಅಂಗವಿಕಲ/ಶಿಕ್ಷಣ ಕ್ಷೇತ್ರದಲ್ಲಿ ಖಾಜಾ ಫರಿದೋದ್ದಿನ್, ಜನಪದ ಕ್ಷೇತ್ರದಲ್ಲಿ ಶ್ರೀಮತಿ ಡಿಲೈಮಾ ಗಂಡ ಅಮೃತ, ಸಂಗೀತ ಕ್ಷೇತ್ರದಲ್ಲಿ ಕಲ್ಯಾಣರಾವ ತಂದೆ ಮಾಣಿಕರಾವ, ಆರೋಗ್ಯ ಕ್ಷೇತ್ರದಲ್ಲಿ ಅರವಿಂದಕುಮಾರ ತಂದೆ ದತ್ತಾತ್ರೇಯರಾವ ಕುಲಕರ್ಣಿ, ಕ್ರೀಡಾ ಕ್ಷೇತ್ರದಲ್ಲಿ ಸುದೇಶ ತಂದೆ ಸೂರ್ಯಕಾಂತ ಮೊರೆ, ಸಮಾಜ ಸೇವೆ ಕ್ಷೇತ್ರದಲ್ಲಿ ಶ್ರೀಧರ ಬಾಂಗ್ಲೆ ತಂದೆ ಶ್ರೀಪೌಲ ಬಾಂಗ್ಲೆ, ಕೃಷಿ ಕ್ಷೇತ್ರದಲ್ಲಿ ಜಿಜಾಬಾಯಿ ಗಂಡ ದಿ.ನಾಗಪ್ಪಾ ಮಚಕೂರಿ ಹಾಗೂ ಕ್ರೀಡೆ ಸೈಕಲಿಂಗ ಕ್ಷೇತ್ರದಲ್ಲಿ ಕು.ಲತಿಕಾ ತಂದೆ ಜೈಭೀಮ ಇವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.


ಈ ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಮಕ್ಕಳಿಂದ ಆಕರ್ಷಕ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ಸಾಗರ ಈಶ್ವರ ಖಂಡ್ರೆ, ವಿಧಾನ ಪರಿಷತ್ ಸದಸ್ಯರಾದ ಮಾರುತಿರಾವ ಮೂಳೆ, ನಗರಸಭೆ ಅಧ್ಯಕ್ಷರಾದ ಮಹ್ಮದ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ|| ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ.ವಾನತಿ, ಅಪರ ಜಿಲ್ಲಾಧಿಕಾರಿ ಶಿವುಕುಮಾರ ಶೀಲವಂತ, ಸಹಾಯಕ ಆಯುಕ್ತರಾದ ಎಂ.ಡಿ.ಶಕೀಲ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!