ಬೀದರ.25ಜನವರಿ.25:- ಅಭಿವೃದ್ಧಿಪರ ತಮ್ಮ ಕನಸುಗಳು ಮತ್ತು ವಿನೂತನ ಕಾರ್ಯಚಟುವಟಿಕೆಗಳಿಂದ ಹೆಸರಾಗಿರುವ ಬೀದರ ಜಿಲ್ಲಾ ಪಂಚಾಯತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಗಿರೀಶ ದಿಲೀಪ್ ಬದೋಲೆ ಅವರು ಇಂದು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕದ ರಾಜ್ಯಪಾಲರಾದ ಗೌರವಾನ್ವಿತ ಥಾವರ್ ಚಂದ ಗೆಹ್ಲೋಟ್ ಅವರಿಂದ ಪ್ರಶಸ್ತಿ ಸ್ವೀಕರಿಸುವ ಮೂಲಕ ತಮ್ಮ ಸಾಧನೆಯ ವೈಶಿಷ್ಟ್ಯತೆಯನ್ನು ಮೆರೆದಿದ್ದಾರೆ.
ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಬೀದರ ಜಿಲ್ಲಾ ಸ್ವೀಪ್ ಮುಖ್ಯಸ್ಥರಾಗಿ ಚುನಾವಣೆಗಳಲ್ಲಿ ಡಾ.ಗಿರೀಶ ದಿಲೀಪ್ ಬದೋಲೆ ಅವರು ನಿರ್ವಹಿಸಿದ ಅತ್ಯುತ್ತಮ ಕಾರ್ಯಸಾಧನೆಗಾಗಿ ಉತ್ತಮ ಪ್ರಯೋಗಗಳು (Best practices) ಪ್ರಶಸ್ತಿ ವಿಭಾಗದಡಿ ಇಂದು ಗೌರವಾನ್ವಿತ ರಾಜ್ಯಪಾಲರಿಂದ ಪ್ರಶಸ್ತಿ ಸ್ವೀಕರಿಸಿದರು.