09/06/2025 5:07 PM

Translate Language

Home » ಲೈವ್ ನ್ಯೂಸ್ » ರೈತನ ಕಬ್ಬು ಬೆಂಕಿಗಾಹುತಿ.!

ರೈತನ ಕಬ್ಬು ಬೆಂಕಿಗಾಹುತಿ.!

Facebook
X
WhatsApp
Telegram

ಔರಾದ (ಬಾ). 25.ಜನವರಿ.25:- ಬೀದರ್ ಜಿಲ್ಲೆಯ ಔರಾದ ತಾಲ್ಲೂಕಿನ ಹೆಡಗಾಪುರ ರೈತ ಸಿದ್ದಪ್ಪ ಯರನಾಳೆ ಅವರ 3.8 ಎಕರೆಯಲ್ಲಿ ಬೆಳೆದಿದ್ದ ಕಬ್ಬು ಬೆಂಕಿಗಾಹುತಿಯಾಗಿದೆ. ಶುಕ್ರವಾರ ಮುಂಜಾನೆ ಆಕಸ್ಮಿಕವಾಗಿ ಕಬ್ಬಿನ ಗದ್ದೆಯಲ್ಲಿ ಬೆಂಕಿ ಕಾಣಿಸಿಕೊಂಡು ನೋಡು ನೋಡುತ್ತಿದ್ದಂತೆ ಎಲ್ಲೆಡೆ ಪಸರಿಸಿ, ಇಡೀ ಕಬ್ಬು ಸುಟ್ಟು ಹೋಗಿದೆ.

ಸ್ಥಳಕ್ಕೆ ಪೋಲಿಸ ಹಾಗೂ ಅಗ್ನಿಶಾಮಕ ತಂಡ ಭೇಟಿ ನೀಡಿ, ಪರಿಶೀಲಿಸಿತು.ಕಟಾವಿಗೆ ಬಂದರೂ ಕಾರ್ಖಾನೆಯವರು ಕಬ್ಬು ಸಾಗಿಸಲು ವಿಳಂಬ ಮಾಡಿದ್ದರಿಂದ ಹೊಲದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ತಗಲಿ ಕಬ್ಬು ಸುಟ್ಟು ಹೋಗಿದೆ. ಸುಮಾರು ₹ 5 ಲಕ್ಷದಷ್ಟು ಹಾನಿಯಾಗಿದೆ ಎಂದು ಸಂತ್ರಸ್ತ ರೈತ ಪೊಲೀಸರಿಗೆ ದೂರು ನೀಡಿದ್ದಾರೆ.

ವಿವಿಧ ಸಮಷ್ಯಗಳಿಂದ ರೈತರಿಗೆ ತುಂಬಾ ಕಷ್ಟಾ ಆಗ್ತಿದೆ ಕಬ್ಬು ಹಾಳಾದ ಸಂತ್ರಸ್ತ ರೈತನಿಗೆ ಸೂಕ್ತ ಪರಿಹಾರ ನೀಡಬೇಕು.
ಕಬ್ಬು ಹಾಳಾದ ಸಂತ್ರಸ್ತ ರೈತನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಹೆಡಗಾಪುರ ಪಿಕೆಪಿಎಸ್ ಅಧ್ಯಕ್ಷ ಶ್ರೀಮಂತ ಪಾಟೀಲ ಆಗ್ರಹಿಸಿದ್ದಾರೆ.

ಸರ್ಕಾರ ಉನ್ನತ ಮಟ್ಟದಲ್ಲಿ ಪರಿಶೀಲನೆ ಮಾಡಿ ರೈತ ವಿರೋಧಿ ಕುತಂತ್ರ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!