ಬೀದರ.24ಜನವರಿ.25:- ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಿಂದ ಬೀದರ ಜಿಲ್ಲೆಯಲ್ಲಿ ಹಾಲಿ ಇರುವ 22/110/11ಕೆವಿ ಹಲಬರ್ಗಾ ವಿದ್ಯುತ್ ಸ್ವೀಕರಣಾ ಕೇಂದ್ರದಿoದ ಹೊಸದಾಗಿ ನಿರ್ಮಿಸಿರುವ 220/110/11ಕೆವಿ ಸಂತಪುರ ವಿದ್ಯುತ್ ಸ್ವೀಕರಣಾ ಕೇಂದ್ರದ ವರೆಗೆ ನಿರ್ಮಿಸಿರುವ 28.084 ಕಿ.ಮೀ. ಉದ್ದದ 220ಕೆವಿ ವಿದ್ಯುತ್ ಮಾರ್ಗವು ಭಾಲ್ಕಿ ತಾಲ್ಲೂಕಿನ ಮಳಚಾಪುರ, ಸೇವಾನಗರ, ಹಾಲಹಿಪ್ಪರಗಾ, ಕೋಸಮ, ನಾಗೂರ (ಕೆ), ಖಾಶೆಂಪುರ, ಚಂದಾಪುರ, ಗೋರನಾಳ ಮತ್ತು ಹಾಜನಾಳ ಮತ್ತು ಔರಾದ ತಾಲ್ಲೂಕಿನ ಹೆಡಗಾಪುರ ಮತ್ತು ನಾಗೂರ (ಬಿ) ಗ್ರಾಮಗಳ ಸರಹದ್ದಿನಲ್ಲಿ ಹಾದುಹೋಗಿರುತ್ತದೆ. ಮತ್ತು ಹೊಸದಾಗಿ ನಿರ್ಮಿಸಿರುವ 220/110/11ಕೆವಿ ಸಂತಪುರ ವಿದ್ಯುತ್ ಸ್ವೀಕರಣಾ ಕೇಂದ್ರದಿAದ ಹೊರಹೋಗುತ್ತಿರುವ 110ಕೆವಿ ವಿದ್ಯುತ್ ಮಾರ್ಗಗಳು ನಾಗೂರ(ಬಿ), ಮಸ್ಕಲ ಮತ್ತು ಚಟನಾಳ ಗ್ರಾಮಗಳ ಸರಹದ್ದಿನಲ್ಲಿ ಹಾದುಹೋಗಿರುತ್ತದೆ.
ಈ ವಿದ್ಯುತ್ ಮಾರ್ಗಗಳಲ್ಲಿ ದಿನಾಂಕ: 25-01-2025 ರಂದು ಅಥವಾ ತದನಂತರ ಯಾವುದೇ ದಿನಾಂಕದoದು ವಿದ್ಯುತ್ ಹರಿಸಲಾಗುವುದು. ಕಾರಣ ಸಾರ್ವಜನಿಕರು ವಿದ್ಯುತ್ ಗೋಪುರಕ್ಕೆ ಹತ್ತುವುದಾಗಲಿ ಅಥವಾ ಅದಕ್ಕೆ ದನ ಕರುಗಳನ್ನು ಕಟ್ಟುವುದಾಗಲಿ, ಹಸಿರು ಟೊಂಗೆಗಳನ್ನು ವಿದ್ಯುತ್ ಲೈನಿಗೆ ಎಸೆಯುವುದು ಪ್ರಾಣಕ್ಕೆ ಅಪಾಯವಿರುವುದರಿಂದ ಸಾರ್ವಜನಿಕರು ಈ ಚಟುವಟಿಕೆಗಳನ್ನು ಮಾಡಬಾರದೆಂದು ಬೀದರ ಬೃಹತ್ ಕಾಮಗಾರಿ ವಿಭಾಗ ಕಾರ್ಯನಿರ್ವಾಹಕ ಅಭಿಯಂತರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.