09/06/2025 3:03 PM

Translate Language

Home » ಲೈವ್ ನ್ಯೂಸ್ » ಎಂಜಿನಿಯರಿಂಗ್ ಕಾಲೇಜು,ಪಾಲಿಟೆಕ್ನಿಕ್‌ಗಳಲ್ಲಿ 6,415 ಹುದ್ದೆ ಖಾಲಿ: ಅತಿಥಿಯೇ ಗತಿ

ಎಂಜಿನಿಯರಿಂಗ್ ಕಾಲೇಜು,ಪಾಲಿಟೆಕ್ನಿಕ್‌ಗಳಲ್ಲಿ 6,415 ಹುದ್ದೆ ಖಾಲಿ: ಅತಿಥಿಯೇ ಗತಿ

Facebook
X
WhatsApp
Telegram

ಬೆಂಗಳೂರು: 24.ಜನೆವರಿ.25:- ರಾಜ್ಯ ಉನ್ನತ ಶಿಕ್ಷಣ ಇಲಾಖೆಯಲ್ಲಿ ಹುದ್ದೆಗಳನ್ನೇ ಸೃಜಿಸದೆ ನಾಲ್ಕು ಎಂಜಿನಿಯರಿಂಗ್‌ ಕಾಲೇಜು ಮತ್ತು 26 ಪಾಲಿಟೆಕ್ನಿಕ್‌ ಸಂಸ್ಥೆಗಳನ್ನು ಮತ್ತು ರಾಜ್ಯದಲ್ಲಿ ಒಟ್ಟು 16 ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳಿವೆ. ಆರಂಭಿಸಿದ್ದರಿಂದಾಗಿ ರಾಜ್ಯದಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆ ಬೋಧಕ, ಬೋಧಕೇತರ ಸಿಬ್ಬಂದಿಯ ತೀವ್ರ ಕೊರತೆ ಎದುರಿಸುತ್ತಿದೆ.

ರಜ್ಯದಲಿ 16 ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳ ಈ ಪೈಕಿ, ಗದಗ ಜಿಲ್ಲೆಯ ನರಗುಂದ, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ಕೊಪ್ಪಳ ಜಿಲ್ಲೆಯ ತಳಕಲ್‌, ಗಂಗಾವತಿ, ಹಾಸನದ ಮೊಸಳೆಹೊಸಹಳ್ಳಿ ಮತ್ತು ಬೀದರ್‌ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳನ್ನು ಹುದ್ದೆಗಳನ್ನೇ ಸೃಜಿಸದೆ ಆರಂಭಿಸಲಾಗಿದೆ.

ಈ ಎಲ್ಲ ಕಾಲೇಜುಗಳು ‘ಅತಿಥಿ’ ಬೋಧಕ, ಬೋಧಕೇತರ ಸಿಬ್ಬಂದಿಯಿಂದ ನಡೆಯುತ್ತಿವೆ. ಹಾಸನ ಜಿಲ್ಲೆಯ ಅರಸೀಕರೆಯಲ್ಲಿ ಮತ್ತೊಂದು ಹೊಸ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ನಿರ್ಮಾಣಗೊಂಡಿದ್ದು, ಶೀಘ್ರದಲ್ಲೇ ಆರಂಭ ಆಗಲಿದೆ. ಈ ಕಾಲೇಜಿಗೂ ಹುದ್ದೆಗಳನ್ನು ಸೃಜಿಸಿಲ್ಲ.

ಇಲಾಖೆಗೆ ಈವರೆಗೆ 9,944 ಹುದ್ದೆಗಳು ಮಂಜೂರಾಗಿದ್ದು, 3,329 ಹುದ್ದೆಗಳಷ್ಟೆ ಭರ್ತಿ ಆಗಿವೆ. 6,415 ಖಾಲಿ ಇವೆ. ಈ ಹುದ್ದೆಗಳನ್ನು ತುಂಬುವ ಜೊತೆಗೆ 2,947 ಹುದ್ದೆಗಳನ್ನು ಹೊಸತಾಗಿ ಸೃಜಿಸಬೇಕೆಂದು ಆರ್ಥಿಕ ಇಲಾಖೆಗೆ ತಾಂತ್ರಿಕ ಶಿಕ್ಷಣ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ.

ಸರ್ಕಾರ ನೂರಾರು ಕೋಟಿ ವೆಚ್ಚದಲ್ಲಿ ಎಂಜಿನಿಯರಿಂಗ್‌ ಕಾಲೇಜು ಕಟ್ಟಿ, ವಿವಿಧ ಕೋರ್ಸ್‌ಗಳನ್ನು ಆರಂಭಿಸಿದೆ. ಆದರೆ, ಈ ಕಾಲೇಜುಗಳಿಗೆ ಅಗತ್ಯ ಸಂಖ್ಯೆಯ ಬೋಧಕ, ಬೋಧಕೇತರ ಸಿಬ್ಬಂದಿ ಹುದ್ದೆಗಳನ್ನು ಸೃಜಿಸಿ, ನೇಮಿಸುವ ಕೆಲಸ ಆಗಿಲ್ಲ.

ಏಳು ವರ್ಷಗಳಿಂದ ಯಾವುದೇ ಹುದ್ದೆಯನ್ನು ಸೃಷ್ಟಿಸದೆಯೇ 26 ಪಾಲಿಟೆಕ್ನಿಕ್‌ಗಳನ್ನು ಆರಂಭಿಸಲಾಗಿದೆ’ ಎಂದು ತಾಂತ್ರಿಕ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತಿನ (ಎಐಸಿಟಿಇ) ಪರಿಷ್ಕೃತ ನಿಯಮಾವಳಿಗಳ ಅನ್ವಯ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳು ಮತ್ತು ಪಾಲಿಟೆಕ್ನಿಕ್‌ಗಳಿಗೆ ಅಗತ್ಯ ಇರುವ ಬೋಧಕ, ಬೋಧಕೇತರ ಮತ್ತು ಆಡಳಿತ ಸಿಬ್ಬಂದಿ ಹುದ್ದೆಗಳನ್ನು ಸೃಜಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.

ಅಲ್ಲದೆ, ಮಂಜೂರಾಗಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸದ್ಯ ಚಾಲ್ತಿಯಲ್ಲಿರುವ ಎಐಸಿಟಿಇ ನಿಯಮಾವಳಿಗಳ ಪ್ರಕಾರ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪರಿಷ್ಕರಿಸಬೇಕಿದೆ. ಕರಡು ನಿಯಮಾವಳಿಗೆ ಸಂಪುಟ ಸಭೆ ಅನುಮೋದನೆ ನೀಡಿದೆ.

ಈ ನಿಯಮಗಳನ್ನು ಅಂತಿಮಗೊಳಿಸಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ವಹಿಸಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

2025-26ನೇ ಸಾಲಿಗೆ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಎಐಸಿಟಿಇ ಗುರುತಿಸಿದ ನ್ಯೂನತೆಗಳಲ್ಲಿ ಸಾಕಷ್ಟನ್ನು ಸರಿತೂಗಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಇಲಾಖೆಯ ಅಡಿಯಲ್ಲಿರುವ ಎಂಜಿನಿಯರಿಂಗ್, ಪಾಲಿಟೆಕ್ನಿಕ್‌ ಸಂಸ್ಥೆಗಳಲ್ಲಿ ವಿದ್ಯಾರ್ಥಿ- ಬೋಧಕ ಸಿಬ್ಬಂದಿಯ ಅನುಪಾತವನ್ನು (ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ 20:1, ಪಾಲಿಟೆಕ್ನಿಕ್‌ಗಳಲ್ಲಿ 25:1) ಸರಿತೂಗಿಸಲು ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗುತ್ತಿದೆ’ ಎಂದೂ ಅವರು ವಿವರಿಸಿದರು.

ಎಚ್‌. ಪ್ರಸನ್ನ ನಿರ್ದೇಶಕ ತಾಂತ್ರಿಕ ಶಿಕ್ಷಣ ಇಲಾಖೆಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಪಾಲಿಟೆಕ್ನಿಕ್‌ಗಳಲ್ಲಿ ಎಐಸಿಟಿಇ ಪರಿಷ್ಕೃತ ನಿಯಮಾವಳಿ ಪ್ರಕಾರ ಬೋಧಕ ಬೋಧಕೇತರ ಸಿಬ್ಬಂದಿ ಹುದ್ದೆ ಸೃಜಿಸಲು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆಡಾ.ಎಂ.ಸಿ. ಸುಧಾಕರ್ ಉನ್ನತ ಶಿಕ್ಷಣ ಸಚಿವಖಾಲಿ ಹುದ್ದೆಗಳ ಭರ್ತಿ ಮತ್ತು ಹೊಸತಾಗಿ ಹುದ್ದೆಗಳನ್ನು ಸೃಜಿಸುವ ಕುರಿತು ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಿದ್ದೇನೆ. ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲು ಕ್ರಮ ವಹಿಸಲಾಗುವುದು

ನ್ಯೂನತೆ ಪತ್ತೆ: ಶೇ 25 ಪ್ರವೇಶಾತಿ ಕಡಿತ

ಹಾವೇರಿ ತಳಕಲ್‌ ಮತ್ತು ಗಂಗಾವತಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳಿಗೆ ಸಂಬಂಧಿಸಿದಂತೆ ಎಐಸಿಟಿಇ ಸ್ಥಾಯಿ ವಿಚಾರಣಾ ಸಮಿತಿಯು ಅ. 14ರಂದು ಆನ್‌ಲೈನ್‌ ಮೂಲಕ ಸಭೆ ನಡೆಸಿದೆ. ನಿಯಮಾನುಸಾರ ಅವಶ್ಯ ಇರುವ ಬೋಧನಾ ಸಿಬ್ಬಂದಿ ಮತ್ತು ಇತರ ಸೌಲಭ್ಯ ಇಲ್ಲದೇ ಇರುವುದನ್ನು ಗಮನಿಸಿದ ಸಮಿತಿಯು 2025-26ನೇ ಸಾಲಿಗೆ ಈ ಕಾಲೇಜುಗಳಿಗೆ ಅನುಮೋದಿಸಿದ್ದ ಪ್ರವೇಶಾತಿಯಲ್ಲಿ ಶೇ 25ರಷ್ಟು ಕಡಿತಗೊಳಿಸುವಂತೆ ನಿರ್ದೇಶನ ನೀಡಿದೆ.

ಕಡಿತಗೊಳಿಸಿರುವ ಪ್ರವೇಶಾತಿಯನ್ನು ಮರು ಸ್ಥಾಪಿಸಲು ವಿದ್ಯಾರ್ಥಿ- ಬೋಧಕ ಅನುಪಾತ ಕಾಯ್ದುಕೊಳ್ಳಬೇಕು ಕಾಯಂ ಪ್ರಾಂಶುಪಾಲರನ್ನು ನೇಮಿಸಬೇಕು ಬೋಧಕ ಸಿಬ್ಬಂದಿಯ ಅರ್ಹತೆ ಮಟ್ಟ ಸುಧಾರಿಸಬೇಕು ತಾತ್ಕಾಲಿಕ ಬೋಧಕ ಬೋಧಕೇತರರ ಬದಲು ಕಾಯಂ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕು ಗ್ರಂಥಾಲಯ ಸೌಲಭ್ಯವನ್ನು ಹೆಚ್ಚಿಸಿಕೊಳ್ಳಬೇಕು ಮತ್ತಿತರ ಸಲಹೆಗಳನ್ನು ಎಐಸಿಟಿಇ ನೀಡಿದೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!