09/06/2025 10:08 PM

Translate Language

Home » ಲೈವ್ ನ್ಯೂಸ್ » ವಿಧ್ಯಾರ್ಥಿಗಳು ಆತ್ಮ ವಿಶ್ವಾಸದಿಂದ ಅಸಾಧ್ಯವಾದದ್ದು ಸಾಧಿಸಲು ಸಾಧ್ಯ- ಸಚಿವ ಈಶ್ವರ ಖಂಡ್ರೆ.

ವಿಧ್ಯಾರ್ಥಿಗಳು ಆತ್ಮ ವಿಶ್ವಾಸದಿಂದ ಅಸಾಧ್ಯವಾದದ್ದು ಸಾಧಿಸಲು ಸಾಧ್ಯ- ಸಚಿವ ಈಶ್ವರ ಖಂಡ್ರೆ.

Facebook
X
WhatsApp
Telegram



ಬೀದರ.23.ಜನವರಿ.25:- ಬೀದರ ತಾಲ್ಲುಕಿನ  ಕೋಳಾರ ಕೆ ಗ್ರಾಮದ ಹೊರವಲಯದಲ್ಕಿರುವ ಸಂಸ್ಕಾರ ಪಿಯು ಕಾಲೇಜ ಆವರಣದಲ್ಲಿ  ಶಾಲಾ ಶಿಕ್ಷಣ ಇಲಾಖೆ,ಹಾಗೂ ಬನ್ಸಲ್ ಕ್ಲಾಸೆಸ್ ಸಂಯುಕ್ತಾಶ್ರಯದಲ್ಲಿ  ಗುರುವಾರ ಹಮ್ಮಿಕೊಂಡಿರುವ  2024- 25 ಸಾಲಿನ ಜಿಲ್ಲೆಯ 10 ನೇ ತರಗತಿ ಫಲಿತಾಂಶ ಸುಧಾರಣೆ ಕಾರ್ಯಗಾರ ಉದ್ಘಾಟಿಸಿ ಹಾಗೂ ಶತಾಯುಷಿ ಭಿಮಣ್ಣಾ ಖಂಡ್ರೆ ಹಾಗು ಲಿಂಗೈಕ್ಯ ಬಸವರಾಜ ಪಾಟೀಲ್ ಹುಮನಬಾದ ಅವರ ಸ್ಮರಣಾರ್ಥ ವಾಗಿ ಸುರಬಿ ಎನ್ ಜಿ ಓ ದಿಂದ ಘೊಷಣೆ ಮಾಡಿರುವ ಗೋಲ್ಡನ್ ಕಾರ್ಡ್  ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಬಿಡುಗಡೆ ಮಾಡಿದರು.


ನಂತರ ಅವರು ಮಾತನಾಡಿ
ಆತ್ಮ ವಿಶ್ವಾದಿಂದ ಅಸಾಧ್ಯವಾದದ್ದು ಸಾಧಿಸಲು ಸಾಧ್ಯವಿದೆ ಎಂದು ನುಡಿದರು.


ವಿದ್ಯಾರ್ಥಿಗಳು ಜಿವಮದಲ್ಲಿ ದೊಡ್ಡ ಗುರಿಯಿಟುಕೊಂಡು ಕಠಿಣ ಪರಿಶ್ರಮದೊಂದಿಗೆ ತಾವು ಕಂಡಿರುವ ಕನಸು ನನಸಾಗಿಸಿಕೊಳ್ಳಲು ಸಾಧ್ಯವಿದೆ ಎಂದರು.


ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಕಠಿಣ ಪರಿಶ್ರಮದ ಅಗತ್ಯವಿದೆ ,ಕೆವಲ ವಿದ್ಯಾವಂತನಾದರೆ ಸಾಲದು ಜೊತೆಯಲ್ಲಿ ಉತ್ತಮ ಚಾರಿತ್ರೆ ಹೊಂದಿರಬೇಕು ಎಂದು ತಿಳಿಸಿದರು.
ನಮ್ಮಲಿ ಪ್ರತಿಭಾವಂತರ ಕೊರತೆಯಿಲ್ಲ.ಇವತ್ತು ನಮ್ಮಲಿ ಉನ್ನತ ವ್ಯಾಸಾಂಗ ಮಾಡಿ ವಿದೇಶಗಳಲ್ಲಿ ಉನ್ನತ ಸ್ಥಾನದಲ್ಲಿ ಕಾರ್ಯ ನಿರವಹಿಸುತಿದ್ದಾರೆ.

ಒಂದು ವೇಳೆ ಮರಳಿ ಭಾರತಕ್ಕೆ ಬಂದರೆ ಆ ದೇಶಗಳ ಆಡಳಿತ ವ್ಯವಸ್ಥೆ ಕುಸಿಯುತದೆ ಎಂದರು.
ವಿದ್ಯಾರ್ಥಿ ಗಳ ಭವಿಷ್ಯ ರೂಪಿಸುವ ಮಹತ್ವ ಘಟಹೊಂದಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ರೀತಿ ಸಾಧನೆ ಮಾಡಿ ಹೆಚ್ಚಿನ ಅಂಕಗಳು ಪಡೆದು ಉನ್ನತ ವಿದ್ಯಾಭಾಸ ಮಾಡುವಂತೆ ತಿಳಿಸಿದರು.


ಸುರಬಿ ಎನ್ ಜಿ.ಓ ದಿಂದ ಘೊಷಿಸಿರುವ ಗೊಲ್ಡ್ ಕಾರ್ಡ್ ಜಿಲ್ಲೆಯ ಸರಕಾರಿ ,ಅನುದಾನಿತ,ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಂದ ಯಾರು ಅತಿ ಹೆಚ್ಚು ಅಂಕಗಳನ್ನು ಹತ್ತನೆ ತರಗತಿಯಲ್ಕಿ ಪಡೆಯುತ್ತಾರೆ ಅಂಥವರನು ಇದರ ಸದುಪಯೊಗ ಪಡೆದುಕೊಳ್ಳಲು ಅತ್ಯುತ್ತಮ ಅವಕಾಶವಿದೆ ಎಂದು ಹೆಳಿದರು.


ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರ ಶೇಖರ ಪಾಟೀಲ್ ಮಾತನಾಡಿ ಹತ್ತನೆ ತರಗತಿಯ ಫಲಿತಾಂಸ ಸುಧಾರಣೆ ಕುರಿತು ಹಮ್ಮಿಕೊಂಡಿರುವ ಕಾರ್ಯಗಾರ ಬಹಳಷ್ಟು ಸಂತಸ ತಂದಿದೆ ಎಂದರು.


ವಿದ್ಯಾರ್ಥಿಗಳು ಯಾವದೆ ರೀತಿ ಧೈರ್ಯ ಕುಂದದೆ ಗುರಿಯಿಟುಕೊಂಡು ಪರಿಶ್ರಮ ಪಟ್ಟರೆ ತಾವು ಅಂದಿಕೊಂಡಿದು ಸಾಧಿಸಲು ಸಾಧ್ಯವಿದೆ ಎಂದು ನುಡಿದರು.
ಅನ್ನುತಿರಣವಾದರೆ ಧೈರ್ಯ ಗುಂದದೆ ವಿದ್ಯಾಭಾಸದಲ್ಲಿ ಮುಂದುವರೆಯಬೇಕು ಎಂದು ಸಲಹೆ ನೀಡಿದರು.


ಸಂಸ್ಥೆ ಯ ವ್ಯವಸ್ಥಾಪಕ ನಿರ್ದೇಶಕ ರಾದ ಡಾ.ಅಮರ ಎರಳೊಕರ ಗೊಲ್ಡ್ ಕಾರ್ಡ್ ಪ್ರಯೊಜನ ,ಸೌಲಭ್ಯ ಪಡೆಯಬೇಕಾದ ಅರ್ಹ ತೆ ಕುರಿತು ಸವಿಸ್ತಾರವಾಗಿ ತಿಳಿಸಿದರು.


ವೇದಿಕೆಯ ಮೇಲೆ  ಸಂಸ್ಥೆ ಯ ಅಧ್ಯಕ್ಷರಾದ ಶ್ರೀ ಮತಿ ಅನುಪಮ ಎರೊಳಕರ್,ನಿರ್ದೇಶಕ ರಾದ ಪ್ರಕಾಶ ಟೊಣೆ, ಕು.ಕ್ಷಿತಿಜಾ ಎರಳೊಕರ್, ಆಡಳಿತ ಅಧಿಕಾರಿ ಶ್ರಿಮತಿ ಸರೋಜಾ ಅರಳಿ,ಅವಿನಾಶ ಎರಳೊಕರ,ಬೀದರ್ ಕ್ಷೇತ್ರ  ಶಿಕ್ಷಣಾಧಿಕಾರಿ ಟಿ.ಆರ್.ದೊಡ್ಡಿ.ಪ್ರಾಂಶುಪಾಲ ಮಲಿನಾಥ ಮಠಪತ್ತಿ ಸೇರಿದಂತೆ ಮತಿತರರು ಇದ್ದರು.


ಕಾರ್ಯಗಾರದಲ್ಲಿ ಜಿಲ್ಲೆಯ ವಿವಿಧ ಶಾಲೆಯ ವಿದ್ಯಾರ್ಥಿ,ವಿದ್ಯಾರ್ಥಿ ನಿಯರು.ಶಿಕ್ಷಕರು ಭಾಗವಹಿಸಿದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!