ಬೀದರ.23.ಜನವರಿ.25:- ಇಂದು ಬೀದರ ಜಿಲ್ಲಾ ಅಧಿಕಾರಿ ಅವರ ಕಚೇರಿಯಲ್ಲಿ ನೆಯುತ್ತಿರುವ ಕಾರ್ಯಕ್ರಮದದ ವಿವರ.ನೂರು ಪ್ರಯಾಣಿಕರನ್ನು ಹೊತ್ತು ಒಯ್ಯುವ ರಸ್ತೆ ಸಾರಿಗೆ ನಿಗಮದ ಚಾಲಕರು ಜವಾಬ್ದಾರಿಯಿಂದ ಜಾಗರೂಕತನದಿಂದ ಅಪಘಾತರಹಿತವಾಗಿ ಚಾಲನೆ ಮಾಡುವಂತೆ ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ತಿಳಿಸಿದರು.
ಅವರು ನಗರದ ಹಳೆಯ ಬಸ್ ನಿಲ್ದಾಣದಲ್ಲಿಂದ ಬೀದರ ಮಾರ್ಗದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಮ್ಮಿಕೊಂಡ ಜಿಲ್ಲಾಧಿಕಾರಿಗಳ ಕಚೇರಿಯಿಂದ ನಿಯೋಜಿಸಲಾದ ಹೊರಗುತ್ತಿಗೆಯ ಚಾಲಕ ಅಭ್ಯರ್ಥಿಗಳಿಗೆ ಕಾರ್ಯಾದೇಶ ವಿತರಿಸಿ ಅವರು ಮಾತನಾಡುತ್ತಿದ್ದರು.
ಪ್ರತಿ ಚಾಲಕರು ಪ್ರಾಮಾಣಿಕತೆಯಿಂದ ಮೈಯೆಲ್ಲಾ ಕಣ್ಣಾಗಿಸಿಕೊಂಡು ಸಾರ್ವಜನಿಕರಿಗೆ, ಪ್ರಯಾಣಿಕರಿಗೆ ತೊಂದರೆಯಾಗದಂತೆ ಸೇವೆ ಸಲ್ಲಿಸಬೇಕು. ರಸ್ತೆ ಸಂಚಾರ ನಿಯಮಗಳನ್ನು ತಪ್ಪದೇ ಪಾಲಿಸಬೇಕೆಂದು ಜಿಲ್ಲಾಧಿಕಾರಿಗಳು ಕರೆ ನೀಡಿದರು.
‘ವೇಗಮಿತಿ’ ನಿಯಂತ್ರಣ, ತಪ್ಪು ಚಾಲನೆ ಕಡೆ ಗಮನವಿಡಬೇಕು. ವಿದ್ಯಾರ್ಥಿಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕೆಂದರು.
ಗುಲಬರ್ಗಾ ರಸ್ತೆ ಸಾರಿಗೆ ನಿಗಮದ ವಿಭಾಗದ ವ್ಯವಸ್ಥಾಪಕ ನಿರ್ದೇಶಕರಾದ ಎನ್.ರಾಚಪ್ಪ ಅವರು ಮಾತನಾಡಿ, ಇಡೀ ವಿಭಾಗದಲ್ಲಿ ಪ್ರಥಮ ಬಾರಿಗೆ ಜಿಲ್ಲಾಧಿಕಾರಿಗಳ ಕಚೇರಿ ವತಿಯಿಂದ ಹೊರಗುತ್ತಿಗೆ ಚಾಲಕರನ್ನು ನಿಯೋಜಿಸಲಾಗುತ್ತಿದೆ. ಈ ಹಿಂದೆ ವಿವಿಧ ಏಜೇನ್ಸಿಗಳಿಂದ ನಿಯೋಜಿಸಲಾದಾಗ ವಿವಿಧ ರೀತಿಯ ತೊಂದರೆಗಳನ್ನು ಚಾಲಕರು ಅನುಭವಿಸುತ್ತಿದ್ದರು.
ಆದ್ದರಿಂದ ಈ ಬಾರಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪಾರದರ್ಶಕವಾಗಿ ರೋಸ್ಟರ್ ಪ್ರಕಾರ ಮೆರಿಟ್ ಆಧಾರದ ಮೇಲೆ 150 ಜನ ಚಾಲಕ ಹಾಗೂ 50 ಜನ ಮೆಕ್ಯಾನಿಕ್ಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಚಾಲಕರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವಂತೆ ತಿಳಿಸಿದರು.
ಈ ಸಂದರ್ಭಧಲ್ಲಿ ಬೀದರ ವಿಭಾಗೀಯ ಸಾರಿಗೆ ನಿಯಂತ್ರಣ ಅಧಿಕಾರಿ ಆನಂದ ಭದ್ರಕಲೆ, ಮುಖ್ಯ ಭದ್ರತಾಧಿಕಾರಿ ಚಂದ್ರಕಾಂತ ಫುಲೇಕರ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.