ಬೀದರ.22.ಜನವರಿ.25:- 3 ಕರ್ನಾಟಕ ಏರ್ ಎನ್ಸಿಸಿ, ಬೀದರ್ ವತಿಯಿಂದ ಜನವರಿ.26 ರಂದು 76ನೇ ಗಣರಾಜ್ಯೋತ್ಸವನ್ನು ಆಚರಿಸಲಾಗುತ್ತಿರುವುದರಿಂದ ಭಾರತೀಯ ಸಂವಿಧಾನ ಅಂಗೀಕಾರದ ಸ್ಮರಣಾರ್ಥವಾಗಿ ಸಾರ್ವಜನಿಕರಲ್ಲಿ ಮತ್ತು ವಿಶೇಷವಾಗಿ ಎನ್ಸಿಸಿ ಕೆಡೆಟ್ಗಳಲ್ಲಿ ದೇಶಭಕ್ತಿಯನ್ನು ಬೆಳೆಸಲು ಜನವರಿ.26 ರಂದು ತಿರಂಗಾ ರ್ಯಾಲಿಯನ್ನು ಆಯೋಜಿಸಲಾಗಿದೆ ಎಂದು 3 ಕರ್ನಾಟಕ ಏರ್ ಎನ್ಸಿಸಿ ಬೀದರ್ನ ಕಮಾಂಡಿoಗ್ ಆಫೀಸರ್ ಗ್ರೂಪ್ ಕ್ಯಾಪ್ಟನ್ ವಿ ಎನ್ ಎಲ್ ರೆಡ್ಡಿ ತಿಳಿಸಿದ್ದಾರೆ.
ಈ ತಿರಂಗಾ ರ್ಯಾಲಿಯು ಬೆಳಿಗ್ಗೆ 9 ಗಂಟೆಗೆ ಎನ್ಸಿಸಿ ಕಛೇರಿಯಿಂದ ಪ್ರಾರಂಭವಾಗಿ ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತ, ಕನ್ನಡಾಂಬೆ ವೃತ್ತ, ನೆಹರು ಕ್ರೀಡಾಂಗಣ, ಮಡಿವಾಳ ವೃತ್ತದ ಮೂಲಕ ಎನ್ಸಿಸಿ ಕಛೇರಿಯವರೆಗೆ ಸಾಗಲಿದೆ.
ರ್ಯಾಲಿಯಲ್ಲಿ ಒಟ್ಟು 120 ಎನ್ಸಿಸಿ ಕೆಡೆಟ್ಗಳು ಭಾಗವಹಿಸಿಲಿದ್ದು, 60 ಅಡಿ ಉದ್ದದ ರಾಷ್ಟ್ರೀಯ ಧ್ವಜವನ್ನು ಹಿಡಿದು 2.5 ಕಿ.ಮೀ ದೂರದವರೆಗೆ ತಿರಂಗಾ ರ್ಯಾಲಿಯ ಭಾಗವಾಗಿ ನಡೆಯಿಲಿದ್ದಾರೆ.ಎಂದು ಅವರು ತಿಳಿಸಿದ್ದಾರೆ.