10/06/2025 11:24 AM

Translate Language

Home » ಲೈವ್ ನ್ಯೂಸ್ » ಭಾರತೀಯ ಸಂಸ್ಕೃತಿ ಉತ್ಸವ: ಬಸವ ರಥಕ್ಕೆ ಚಾಲನೆ ನೀಡಲಾಯಿತು.!

ಭಾರತೀಯ ಸಂಸ್ಕೃತಿ ಉತ್ಸವ: ಬಸವ ರಥಕ್ಕೆ ಚಾಲನೆ ನೀಡಲಾಯಿತು.!

Facebook
X
WhatsApp
Telegram

ಬೀದರ.21.ಜನೆವರಿ.25:- 29ರಿಂದ ಫೆ. 6ರವರೆಗೆ ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ನಡೆಯಲಿರುವ ಭಾರತೀಯ ಸಂಸ್ಕೃತಿ ಉತ್ಸವದ ಅಂಗವಾಗಿ ನಗರದಲ್ಲಿ ಬಸವ ರಥಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.

ನಗರದ ಗಣೇಶ ಮೈದಾನದಲ್ಲಿ ಅಲಂಕೃತ ಬಸವ ರಥಕ್ಕೆ ತಡೋಳಾ-ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ, ರಾಮಕೃಷ್ಣ ವಿವೇಕಾನಂದ ಆಶ್ರಮದ ಜ್ಯೋತಿರ್ಮಯಾನಂದ ಸ್ವಾಮೀಜಿ ಚಾಲನೆ ನೀಡಿದರು.

ಇದಕ್ಕೂ ಮುನ್ನ ನಗರದ ರಾಣಿ ಚನ್ನಮ್ಮ ವೃತ್ತ ಹಾಗೂ ಶಿವನಗರ ವೃತ್ತದಿಂದ ಕಾಲೇಜು ವಿದ್ಯಾರ್ಥಿಗಳು ಏಕಕಾಲಕ್ಕೆ ಜಾಥಾದಲ್ಲಿ ಗಣೇಶ ಮೈದಾನಕ್ಕೆ ಬಂದು ಸೇರಿದರು. ಅಲ್ಲಿ ರಥಕ್ಕೆ ಚಾಲನೆ ನೀಡಲಾಯಿತು.

ಬಳಿಕ ಮಾತನಾಡಿದ ವಿಕಾಸ ಅಕಾಡೆಮಿಯ ಜಿಲ್ಲಾ ಸಂಯೋಜಕ ರೇವಣಸಿದ್ದಪ್ಪ ಜಲಾದೆ,’ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಏಳೂ ಜಿಲ್ಲೆಗಳಲ್ಲಿ ಅಲ್ಲಿನ ಮಹಾತ್ಮರ ಹೆಸರುಗಳಲ್ಲಿ ರಥ ಸಂಚರಿಸಲಿವೆ. ಬಸವಣ್ಣನವರ ಕರ್ಮಭೂಮಿ ಇದಾಗಿರುವುದರಿಂದ ಅವರ ಹೆಸರಿನಲ್ಲಿ ಬೀದರ್‌ನಲ್ಲಿ ಬಸವ ರಥಕ್ಕೆ ಚಾಲನೆ ನೀಡಲಾಗಿದೆ’ ಎಂದು ಹೇಳಿದರು.

‘ಜಿಲ್ಲೆಯ ಕಮಲನಗರ, ಔರಾದ್‌, ಭಾಲ್ಕಿ, ಬಸವಕಲ್ಯಾಣ, ಹುಮನಾಬಾದ್‌, ಚಿಟಗು‌ಪ್ಪ ತಾಲ್ಲೂಕಿನಲ್ಲಿ ಸಂಚರಿಸಿ ಬಳಿಕ ಕಲಬುರಗಿಗೆ ರಥ ಮುಖ ಮಾಡಲಿದೆ. ಕೆಲ ಜಿಲ್ಲೆಗಳ ರಥಗಳು ಸೇಡಂ ತಲುಪಿದರೆ, ಕೆಲವು ಕಲಬುರಗಿ ತಲುಪಲಿವೆ. ಅಲ್ಲಿ ನಡೆಯಲಿರುವ ಮೆರವಣಿಗೆ ಮೂಲಕ ಕಾರ್ಯಕ್ರಮದ ಸ್ಥಳಕ್ಕೆ ತೆರಳಲಿವೆ’ ಎಂದು ಹೇಳಿದರು.

‘ಜ.29ರಿಂದ ಫೆ. 6ರವರೆಗೆ ಸೇಡಂನಲ್ಲಿ ಬಸವರಾಜ ಪಾಟೀಲ ಸೇಡಂ ಅವರ ನೇತೃತ್ವದಲ್ಲಿ ಭಾರತೀಯ ಸಂಸ್ಕೃತಿ ಉತ್ಸವ ಜರುಗಲಿದೆ. ದೇಶದ ವಿವಿಧ ಭಾಗದ ಮಠಾಧೀಶರು, ಪ್ರಗತಿಪರ ರೈತರು, ಕ್ರೀಡಾಪಟುಗಳು, ವಿಜ್ಞಾನಿಗಳು, ಸಂಶೋಧಕರು, ರಾಜಕಾರಣಿಗಳು ಪಾಲ್ಗೊಳ್ಳುವರು. ಇದು ದಕ್ಷಿಣ ಭಾರತದ ಕುಂಭ ಮೇಳ’ ಎಂದರು.

ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಫೌಂಡೇಶನ್‌ ಅಧ್ಯಕ್ಷ ಶಿವಶರಣಪ್ಪ ವಾಲಿ, ಕರ್ನಲ್‌ ಶರಣಪ್ಪ ಸಿಕೇನಪೂರೆ, ಪ್ರಗತಿಪರ ರೈತ ಮಹಾದೇವ ನಾಗೂರೆ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!