10/06/2025 7:36 AM

Translate Language

Home » ಲೈವ್ ನ್ಯೂಸ್ » 16ರಂದು ದರೋಡೆಕೋರರ ಗುಂಡೇಟಿನಿಂದ ಸಾವನ್ನಪ್ಪಿರುವ ₹50 ಲಕ್ಷ ಪರಿಹಾರ ಹಾಗೂ 5 ಎಕರೆ ಜಮೀನು ನೀಡಬೇಕು,ಬಿಎಸ್‌ಪಿ ಜಿಲ್ಲಾ ಅಧ್ಯಕ್ಷ ಕಪೀಲ್‌ ಗೋಡಬೋಲೆ ಆಗ್ರಹಿಸಿದರು.

16ರಂದು ದರೋಡೆಕೋರರ ಗುಂಡೇಟಿನಿಂದ ಸಾವನ್ನಪ್ಪಿರುವ ₹50 ಲಕ್ಷ ಪರಿಹಾರ ಹಾಗೂ 5 ಎಕರೆ ಜಮೀನು ನೀಡಬೇಕು,ಬಿಎಸ್‌ಪಿ ಜಿಲ್ಲಾ ಅಧ್ಯಕ್ಷ ಕಪೀಲ್‌ ಗೋಡಬೋಲೆ ಆಗ್ರಹಿಸಿದರು.

Facebook
X
WhatsApp
Telegram

ಬೀದರ.21.ಜನವರಿ.25: ಬೀದರ ನಗರದ ಎಸ್‌ಬಿಐ ಕಚೇರಿ ಎದುರು ಜನವರಿ 16ರಂದು ದರೋಡೆಕೋರರ ಗುಂಡೇಟಿನಿಂದ ಸಾವನ್ನಪ್ಪಿರುವ ಗಿರಿ ವೆಂಕಟೇಶ ಅವರ ಕುಟುಂಬಕ್ಕೆ ₹50 ಲಕ್ಷ ಪರಿಹಾರ ಹಾಗೂ 5 ಎಕರೆ ಜಮೀನು ನೀಡಬೇಕು. ಗಾಯಾಳು ಲಾಡಗೇರಿಯ ಶಿವಕುಮಾರ ಅವರ ಆಸ್ಪತ್ರೆಯ ಸಂಪೂರ್ಣ ವೆಚ್ಚವನ್ನು ಸರ್ಕಾರ ಭರಿಸಬೇಕು’ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಜಿಲ್ಲಾ ಅಧ್ಯಕ್ಷ ಕಪೀಲ್‌ ಗೋಡಬೋಲೆ ಆಗ್ರಹಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಚಿಟಗುಪ್ಪ ತಾಲ್ಲೂಕಿನ ಬೇಮಳಖೇಡದ ಗಿರಿ ವೆಂಕಟೇಶ ಬಡ ದಲಿತ ಕುಟುಂಬಕ್ಕೆ ಸೇರಿದ್ದ. ಗಿರಿ ಅವರನ್ನು ಕಳೆದುಕೊಂಡಿರುವ ಕುಟುಂಬಕ್ಕೆ ದೊಡ್ಡ ಆಘಾತವಾಗಿದೆ. ಅವರ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು. ಗುಂಡೇಟಿನಿಂದ ಗಾಯಗೊಂಡು ಹೈದರಾಬಾದ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವಕುಮಾರ ಅವರಿಗೆ ತಕ್ಷಣವೇ ಆರ್ಥಿಕ ನೆರವು ನೀಡಬೇಕು ಎಂದು ಒತ್ತಾಯಿಸಿದರು.

ಘಟನೆ ನಡೆದು ಆರು ದಿನಗಳಾಗಿವೆ. ಇದುವರೆಗೆ ದರೋಡೆಕೋರರನ್ನು ಬಂಧಿಸಲು ಜಿಲ್ಲಾಡಳಿತ ಹಾಗೂ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ. ಇದನ್ನು ಖಂಡಿಸಿ ಜ. 24ರಂದು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಗಾಯಾಳು ಶಿವಕುಮಾರ ಅವರನ್ನು ಹೈದರಾಬಾದ್‌ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿರುವುದು ಸಂತೋಷ. ಆದರೆ, ಮೃತ ಗಿರಿ ವೆಂಕಟೇಶ ಅವರ ಮನೆಗೆ ತೆರಳಿ ಸಾಂತ್ವನ ಹೇಳಿಲ್ಲ. ಅವರು ಅವರ ಸ್ಥಾನದಲ್ಲಿ ಮುಂದುವರೆಯಲು ಯೋಗ್ಯರಲ್ಲ. ಕೂಡಲೇ ಅವರನ್ನು ಬೇರೆಡೆ ವರ್ಗಾವಣೆಗೊಳಿಸಬೇಕೆಂದು ಒತ್ತಾಯಿಸಿದರು.

ನಗರದ ಹೃದಯ ಭಾಗದಲ್ಲಿ ಹಾಡಹಗಲೇ ದರೋಡೆ ನಡೆದಿದೆ. ಒಂದೆಡೆ ಜಿಲ್ಲಾಧಿಕಾರಿ ಕಚೇರಿ, ಇನ್ನೊಂದೆಡೆ ಜಿಲ್ಲಾ ನ್ಯಾಯಾಲಯ. ಸದಾ ಜನದಟ್ಟಣೆ ಇರುತ್ತದೆ. 20 ನಿಮಿಷಗಳ ಅವಧಿಯಲ್ಲಿ ದರೋಡೆಕೋರರು ಒಬ್ಬನ ಕೊಲೆ ಮಾಡಿ, ಇನ್ನೊಬ್ಬನ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಎಟಿಎಂಗೆ ಜಮೆ ಮಾಡಲು ಹಣ ಕೊಂಡೊಯ್ಯುವಾಗ ಗನ್‌ಮ್ಯಾನ್‌ ಇರಲಿಲ್ಲ. ನಿರ್ಲಕ್ಷ್ಯ ತೋರಿದ ಸಿಎಂಎಸ್‌ ಕಂಪನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಗಿರಿ ವೆಂಕಟೇಶ ಅವರ ಗ್ರಾಮದವರಾದ ರಜನೀಶ ಮುದಾಳೆ, ದಲಿತ ಯುನೈಟೆಡ್ ಮೂಮೆಂಟ್ ರಾಜ್ಯ ಘಟಕದ ಅಧ್ಯಕ್ಷ ಪ್ರಕಾಶ ರಾವಣ, ಸಂಸ್ಥಾಪಕ ಅಧ್ಯಕ್ಷ ವಿನೋದ ರತ್ನಾಕರ್, ಬಿಎಸ್ಪಿ ಔರಾದ್ ತಾಲ್ಲೂಕು ಘಟಕದ ಅಧ್ಯಕ್ಷ ಬೀದರ್ ಮಹೇಶ ಧೋಲಾ, ಮಲ್ಲಿಕಾರ್ಜುನ ಕಪಲಾಪೂರೆ, ಭೀಮ್‌ ಕೋರೆಗಾಂವ್‌ ಸೇನಾ ಸಮಿತಿ ಸಂಸ್ಥಾಪಕ ರವಿ ಭುಸಂಡೆ, ರಾಷ್ಟ್ರೀಯ ಭೀಮ ಸೇನಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ರಾಜಕುಮಾರ ಪ್ರಸಾದ ಹಾಜರಿದ್ದರು.

‘ಸಚಿವದ್ವಯರು ರಾಜೀನಾಮೆ ಕೊಡಲಿ’

ಬಿಎಸ್ಪಿ ಜಿಲ್ಲಾ ಉಪಾಧ್ಯಕ್ಷ ಸಚಿನ ಗಿರಿ ಮಾತನಾಡಿ, ಬೀದರ್‌ನಲ್ಲಿ ಮೇಲಿಂದ ಮೇಲೆ ಕೊಲೆ, ಸುಲಿಗೆ, ವಂಚನೆ ಪ್ರಕರಣಗಳು ನಡೆಯುತ್ತಿದ್ದರೂ ಉಭಯ ಸಚಿವರು ಹಾರಿಕೆಯ ಉತ್ತರ ನೀಡಿ ನುಣುಚಿಕೊಳ್ಳುತ್ತಿದ್ದಾರೆ. ನೈತಿಕತೆ ಇದ್ದರೆ ಇಬ್ಬರೂ ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ಬೀದಿಗಿಳಿದು ಹೋರಾಟ ಮಾಡಲಾಗುವುದು.

ಈ ಘಟನೆಗೆ ಸಂಬಂಧಿಸಿದಂತೆ ಜ. 24ರಂದು ಪ್ರತಿಭಟನೆ ಹಮ್ಮಿಕೊಂಡಿದ್ದು, ಎಲ್ಲ ದಲಿತಪರ ಸಂಘಟನೆಗಳವರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಈ ಘಟ್ನೆಗೆ ಸಂಬಂಧಿತ ಆರೋಪಿಗಳನ್ನು ಶೋಧ್ನೇಎಲಿ ಪೊಲೀಸರು ಪ್ರಯಾರ್ಟನದಲಿ ಇದಾರೆ ಅದಷ್ಟಬೇಗ ದುಷ್ಕರ್ಮಿಗಳನ್ನು ಅರೆಸ್ಟ್ ಮಾಡಲಾಗುವದು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!