10/06/2025 7:40 AM

Translate Language

Home » ಲೈವ್ ನ್ಯೂಸ್ » ಫೆ.1ರಂದು ಮಾದಿಗ ಸಮಾಜ ಜಾಗೃತಿ ಸಮಾವೇಶ ಬೀದರ

ಫೆ.1ರಂದು ಮಾದಿಗ ಸಮಾಜ ಜಾಗೃತಿ ಸಮಾವೇಶ ಬೀದರ

Facebook
X
WhatsApp
Telegram

ಬೀದರ.21.ಜನವರಿ.25:- ಬೀದರ ನಗರದಲ್ಲಿ ಮಾದಾರ ಚನ್ನಯ್ಯನವರ 974ನೇ ಜಯಂತಿ ಆಚರಣೆ ಹಾಗೂ ಮಾದಿಗ ಸಮಾಜದ ಜಾಗೃತಿ ಸಮಾವೇಶ ಫೆ.1ರಂದು ಬೀದರ ನಗರದ ನೌಬಾದ್‌ನಲ್ಲಿರುವ ಡಾ.ಬಾಬು ಜಗಜೀವನರಾಂ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು “ಕರ್ನಾಟಕ ಮಾದಿಗ ವೆಲ್‌ಫೇರ್‌ ಅಸೋಸಿಯೇಶನ್‌” ಸಂಸ್ಥಾಪಕ ಅಧ್ಯಕ್ಷ ಸ್ವಾಮಿದಾಸ ಕೆಂಪೇನೋರ್ ತಿಳಿಸಿದರು.

ಸಾಮಾಜಿಕ ಕಾರ್ಯಕರ್ತ ವಾದಿರಾಜ, ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ, ಪೌರಾಡಳಿತ ಸಚಿವ ರಹೀಂ ಖಾನ್ ಹಾಗೂ ಸಂಸದ ಸಾಗರ ಖಂಡ್ರೆ ಪಾಲ್ಗೊಳ್ಳುವರು’ ಎಂದು ವಿವರಿಸಿದರು.

’12ನೇ ಶತಮಾನದ ಅದ್ಯ ವಚನಕಾರರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವವರು ಮಾದಾರ ಚನ್ನಯ್ಯನವರು. ಚೋಳ ರಾಜ ಮಾದಾರ ಚನ್ನಯ್ಯನವರ ಅಂಬಲಿ ತಿಂದು ತನ್ನ ಆರೋಗ್ಯ ಸುಧಾರಿಸಿಕೊಂಡು, ತನ್ನ ಅಹಂಕಾರ ಕಳೆದುಕೊಂಡಿರುವ ಪ್ರತೀತಿ ಇದೆ.

ಅದಕ್ಕೆ ಬಸವಣ್ಣನವರು ಮಾದಾರ ಚನ್ನಯ್ಯನವರಿಗೆ ಅಪ್ಪನು ನಮ್ಮ ಮಾದಾರ ಚನ್ನಯ್ಯ ಎಂದು ಕರೆದು ಇಡೀ ಶರಣರ ಪಾಲಿಗೆ ಚನ್ನಯ್ಯ ಅಪ್ಪ ಎಂದು ಸಂಭೋದಿಸಿದರು’ ಎಂದರು.

ಈ ಕಾರ್ಯಕ್ರಮದ ಸ್ಥಳ್ ನೌಬಾದ್‌ನಲ್ಲಿರುವ ಡಾ.ಬಾಬು ಜಗಜೀವನರಾಂ ಸಮುದಾಯ ಭವನದಲ್ಲಿ ನಡೆಯಲಿದೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!