ಬೀದರ.21.ಜನವರಿ.25:-ದಾಡಗಿ ಕ್ರಾಸ್ ನಲ್ಲಿರುವ ಬಸವಣ್ಣರ ಮೂರ್ತಿಯ ಕೈ ಮುರಿದು ವಿರೂಪಗೊಳಿಸಿರುವ ಪ್ರಕರಣದಲ್ಲಿ ಟ್ರ್ಯಾಕ್ಟರ್ ಚಾಲಕನನ್ನು ಬಂಧಿಸಲಾಗಿದೆ ಎಂದು ಖಟಕ್ ಚಿಂಚೋಳಿ ಪೊಲೀಸ್ ಠಾಣೆಯ ಪಿಎಸ್ಐ ಸುದರ್ಶನ್ ರೆಡ್ಡಿ ಹೇಳಿದ್ದಾರೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ದಾಡಗಿ ಕ್ರಾಸ್ ಬಸವಣ್ಣರ ಮೂರ್ತಿಯ ಕ್ಯ ಮುರಿದು ವಿರೂಪಗೊಳಿಸಿರುವ ಪ್ರಕರಣ ಕೆ ಸಂಬಂಧಿತ ವ್ಯಕ್ತಿ ಅರೆಸ್ಟ್ ಮಧ್ಲಾಗಿದೆ.
ಜ.14 ರ ಮಧ್ಯರಾತ್ರಿ ಸುಮಾರು 3 ಗಂಟೆಗೆ ಈ ಘಟನೆ ನಡೆದಿದ್ದು, ಬಸವಣ್ಣನ ಮೂರ್ತಿ ಮೇಲೆ ಮತ್ತು ಅಕ್ಕ ಪಕ್ಕ ಕಬ್ಬಿನ ಗುರುತುಗಳು ಸಿಕ್ಕಿದ್ದರಿಂದ ಕಬ್ಬು ತುಂಬಿದ್ದ ವಾಹನವೇ ಹೊಡೆದಿರಬಹುದು ಎಂದು ಶಂಕಿಸಲಾಗಿತ್ತು.
ಅಂದಿನ ರಾತ್ರಿ ಆ ಹೊತ್ತಿಗೆ ಮಹಾರಾಷ್ಟ್ರ ಮೂಲದ ಕಬ್ಬು ತುಂಬಿದ ಟ್ರ್ಯಾಕ್ಟರ್ ಒಂದು ಘೋಡವಾಡಿ ಗ್ರಾಮದಿಂದ ಉದಗೀರ್ ಪಟ್ಟಣದ ಸಕ್ಕರೆ ಕಾರ್ಖಾನೆಗೆ ಹೋಗಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಅಂದು ರಾತ್ರಿ ಇಡೀ ಆ ಒಂದು ಕಬ್ಬಿನ ಟ್ರ್ಯಾಕ್ಟರ್ ಬಿಟ್ಟರೆ ಬೇರೆ ಯಾವುದೇ ಕಬ್ಬಿನ ವಾಹನ ಅಲ್ಲಿಂದ ಹೋಗಿರಲಿಲ್ಲ. ಜ.16 ರಂದೇ ಆ ಟ್ರ್ಯಾಕ್ಟರ್ ಮಾಲಕನನ್ನು ವಿಚಾರಿಸಿದಾಗ ತಪ್ಪೋಪ್ಪಿಕೊಂಡಿದ್ದಾನೆ.
ಟ್ರ್ಯಾಕ್ಟರ್ ಚಾಲಕ ಕೂಡ ಮಹಾರಾಷ್ಟ್ರ ಮೂಲದವನೇ ಆಗಿದ್ದಾನೆ ಎಂದು ತಿಳಿಸಿದ್ದಾರೆ.
ಈ ಘಟನೆ ವಿರುದ್ಧ ಬಸವ ಅನುಯಾಯಿಗಳು ಅಂದು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರು. ಪ್ರಕರಣ ದಾಖಲಿಸಿ ತಪ್ಪಿತಸ್ಥರನ್ನು ಬಂಧಿಸಿ, ಬಸವಣ್ಣನವರ ನೂತನ ಪ್ರತಿಮೆ ಅನಾವರಣ ಮಾಡಲಾಗುವುದು ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂತೆಗೆದುಕೊಳ್ಳಲಾಗಿತ್ತು.
ಈ ಕುರಿತು ಖಟಕ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.