ಔರಾದ.18.ಜನವರಿ.25:- ಆ ದಿನಗಳು ಹಾಗೂ ಮೈನಾ ಖ್ಯಾತಿಯ ಚಲನಚಿತ್ರ ನಟ, ಸಾಮಾಜಿಕ ಹೋರಾಟಗಾರ, ಸೋಶಿಯಲ್ ಸ್ಟಾರ್ ಚೇತನ್ ಅಹಿಂಸಾ ಅವರು ಔರಾದ ಪಟ್ಟಣಕ್ಕೆ ಆಗಮಿಸುತ್ತಿದ್ದಾರೆ.
ನಾಳೆ ಭಾನುವಾರದಂದು ಪಟ್ಟಣದ ಬಸ್ ನಿಲ್ದಾಣದ ಬಳಿಯಿರುವ ಕನ್ನಡ ಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ಸಭೆ ಆಯೋಜಿಸಲಾಗಿದೆ.
ಪ್ರಸ್ತುತ ಸಮಾಜದ ಬೆಳವಣಿಗೆ ಹಾಗೂ ಪರ್ಯಾಯ ರಾಜಕಾರಣದ ವಿಷಯದ ಕುರಿತು ಚರ್ಚಿಸಲಿದ್ದು, ಸಾಮಾಜಿಕ ಚಿಂತಕರು, ಪ್ರಗತಿಪರ ಹೋರಾಟಗಾರರು, ವಿದ್ಯಾರ್ಥಿಗಳು, ರೈತ, ಕೂಲಿಕಾರ್ಮಿಕರ ಸಂಘಟನೆಗಳ ಪ್ರಮುಖರು ಭಾಗವಹಿಸಬೇಕು ಎಂದು ಆಯೋಜಕರಾದ ಸುಭಾಷ್ ಲಾಧಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
