ಬೀದರ 07.ಜನೆವರಿ.25.ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (K-SET) 2024 ಪರೀಕ್ಷೆಯಲ್ಲಿ ಹಿಂದಿ ವಿಷಯದಲ್ಲಿ ಪ್ರಥಮ ಪ್ರಯತ್ನದಲ್ಲಿ ಶ್ರೀಮತಿ. ಸುಮಿತ್ರಾ ಡಾ.ಗಣಪತಿ ಅಡ್ಡೆ ಪಾಸಾಗಿದ್ದು ಅವರು ಔರಾದ ತಾಲೂಕಿನ ಏಕಂಬಾ ಗ್ರಾಮ ನಿವಾಸಿಯಾಗಿರುವ ಸದರಿಯವರು ಅತಿ ಕಡುಬಡ ಪರಿವಾರದ ,ರೈತ ವರ್ಗದವರಾದ ಶ್ರೀಮತಿ ಸುಮಿತ್ರಾ ಅಡ್ಡೆ ಅವರ ಕನಸು ನನಸಾಗಿದೆ. ಗ್ರಾಮೀಣ ಭಾಗದಲ್ಲಿ ಈ ಸಾಧನೆ ಗ್ರಾಮೀಣ ಭಾಗದಲ್ಲಿ ಹಾಗೂ ತಾಂಡಾದ ವಾಸಿಯಾಗಿರುವ ವಿಧ್ಯಾರ್ಥಿಗಳಿಗೆ ಸ್ಪೂರ್ತಿಯಾಗಲಿದೆ.
ಶ್ರೀಮತಿ.ಸುಮಿತ್ರಾ ಅಡ್ಡೆರವರು ಹಗಲು ರಾತ್ರಿ ಎನ್ನದೆ ಕಷ್ಟ ಪಟ್ಟು ಓದಿ ಮೊದಲ ಪ್ರಯತ್ನದಲ್ಲೇ ಪಾಸಾಗುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತು ಪಡಿಸುತ್ತಾರೆ.
