ಕರ್ನಾಕದಾದ್ಯಂತ ರಾಜ್ಯ ಸರಕಾರಿ ನೌಕರ ಸಂಘ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆ ಜಿದ್ದಾಜಿದ್ದಿಯಿಂದ ಕೂಡಿತ್ತು. ಇಂದು ಮತದಾನ ಬಳಿಕ ಮತ ಎಣಿಕೆ ನಡೆದು ಸಿ.ಎಸ್. ಷಡಾಕ್ಷರಿ 507 ಮತಗಳನ್ನು ಪಡೆದು ಜಯಶಾಲಿಯಾಗಿದ್ದಾರೆ.
ಬಿ.ಪಿ. ಕೃಷ್ಣೇಗೌಡ 442 ಮತ ಪಡೆದು ಪರಾಭವಗೊಂಡಿದ್ದಾರೆ
ಷಡಕ್ಷರಿ ಅವರು ಮತ್ತು ಅವರ ವಿರುದ್ಧ ಸ್ಪರ್ಧಿಸಿದ್ದ ಬಿ.ಪಿ. ಕೃಷ್ಣೇಗೌಡ 442 ಮತ ಪಡೆದು ಪರಾಭವಗೊಂಡಿದ್ದಾರೆ.
ರಾಜ್ಯ ಖಜಾಂಚಿ ಸ್ಥಾನಕ್ಕೆ ವಿ.ವಿ. ಶಿವರುದ್ರಯ್ಯ 485 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ನಾಗರಾಜ ಆರ್. ಜುಮ್ಮನ್ನವರ 467 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.
ಷಡಕ್ಷರಿ ಅವರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷ ಏಕೆ ಆಗಿದ್ದಾರೆ ಮತ್ತು ಚುನಾವಣಾ ಕಾರ್ಯ ಅಧಿಕಾರಿಯಾಗಿ ಹನುಮನರಸಯ್ಯ ಕಾರ್ಯನಿರ್ವಹಿಸಿದ್ದರು. 2024 -2029ನೇ ಅವಧಿಯ ರಾಜ್ಯಾಧ್ಯಕ್ಷ ಸ್ಥಾನ, ರಾಜ್ಯ ಖಜಾಂಚಿ ಸ್ಥಾನಕ್ಕೆ ಇಂದು ಚುನಾವಣೆ ನಡೆದಿದ್ದು, ಸಿ.ಎಸ್. ಷಡಾಕ್ಷರಿ ಅಧ್ಯಕ್ಷರಾಗಿ, ಶಿವರುದ್ರಯ್ಯ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಲಾಗಿದೆ.