ಇವಿಎಂಗಳನ್ನು ಪ್ರಶ್ನಿಸಿದ ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ. ಸಂಸತ್ತಿನ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀ ಜೋಶಿ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಇವಿಎಂಗಳ ಬಗ್ಗೆ ಅದರ ಅಸಮಂಜಸ ನಿಲುವುಗಾಗಿ ಕಾಂಗ್ರೆಸ್ನ ಟೀಕೆಗಳನ್ನು ಉಲ್ಲೇಖಿಸಿ, ಕೆಲವು ವಿರೋಧ ಪಕ್ಷಗಳು ಸಹ ಮುಖ್ಯ ವಿರೋಧ ಪಕ್ಷದ ಮೇಲೆ ಬೆರಳುಗಳನ್ನು ಎತ್ತುತ್ತಿವೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ತನ್ನ ತಪ್ಪುಗಳನ್ನು ಅರಿತುಕೊಳ್ಳಬೇಕು ಎಂದರು.
ಒಮ್ಮೆ ಅದೇ ಇವಿಎಂಗಳನ್ನು ಬಳಸಿ ನೂರು ಲೋಕಸಭಾ ಸ್ಥಾನಗಳನ್ನು ಪಡೆದರೆ ಮತ್ತು ಅದನ್ನು ವಿಜಯವೆಂದು ಸಂಭ್ರಮಿಸಿದರೆ, ಫಲಿತಾಂಶಗಳು ನಿರೀಕ್ಷೆಗೆ ತಕ್ಕಂತೆ ಇಲ್ಲದಿದ್ದಾಗ ತಿರುಗಿ ಇವಿಎಂಗಳನ್ನು ದೂಷಿಸಲು ಸಾಧ್ಯವಿಲ್ಲ ಎಂದು ಅಬ್ದುಲ್ಲಾ ಈ ಹಿಂದೆ ಹೇಳಿದ್ದರು.