15 ಡಿಸೆಂಬರ್ 24 ಇಂದು ಬೀದರ್ ಜಿಲ್ಲಾ ಲೋಕಸಭಾ ಸದಸ್ಯರಾದ ಶ್ರೀ ಸಾಗರ ಖಂಡ್ರೆ ಅವರು ಔರಾದ್ ತಾಲೂಕಿನ ದುಪತಮಹಗಾಂವ್, ಶಿವಕುಮಾರ್ ಪಾಟೀಲ ಅವರು ಕಾರು ಅಪಘಾತದ ಹಿನ್ನೆಲೆಯಲ್ಲಿ ಕುಟುಂಬಕ್ಕೆ ಸಾಂತ್ವನ ಹೇಳಿದರು, ಅದೇ ರೀತಿ ಜೀರಗಾ ಗ್ರಾಮದಲ್ಲಿ ರಸ್ತೆ ದಾಟುವಾಗ ಸೋಪಾನ ಎಂಬ ವಿದ್ಯಾರ್ಥಿ ಸಾವನ್ನಪ್ಪಿದ ಹಿನ್ನಲೆಯಲ್ಲಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಪ್ರದೀಪ ಗುಂಟೆ, ಸಿಪಿಐ ರಘುವೀರಸಿಂಗ್, ಪಿಎಸ್ ಐ ನಂದಕುಮಾರ ಬೋನ್, ಮುಖಂಡರಾದ ಸಂಗಮೇಶ ಪಾಟೀಲ, ಧನರಾಜ್ ಸೇರಿದಂತೆ ಹಲವು ಮುಖಂಡರು ಮುಸ್ತಾಪುರ, ಸುಧಾಕರ ಕೋಳೂರು, ವಿದ್ಯಾಸಾಗರ ಸಂತಾಪುರ, ಸಂಜುಕುಮಾರ ಲಾಧಾ, ಬಸವರಾಜ, ಮುಂತಾದವರು ಉಪಸ್ಥಿತರಿದ್ದರು.
