ಬೀದರ್.28.ಏಪ್ರಿಲ್.26:ಬೀದರನಲ್ಲಿ ಪ್ರಪ್ರಥಮವಾಗಿ ಸಕಲ ಸ್ವಾಭಿಮಾನಿ ಮರಾಠಾ ಸಮಾಜದ ವತಿಯಿಂದ, ವಿಶ್ವ ಜ್ಞಾನದ ಸಂಕೇತ ಹಾಗೂ ಸಂವಿಧಾನ ನಿರ್ಮಾತೃ ಪರಮ ಪೂಜ್ಯ ಬೌದ್ಧಿಸತ್ವ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ 135ನೇ ಜನ್ಮೋತ್ಸವವನ್ನು ದಿನಾಂಕ 29-04-2026, ಸಂಜೆ 6:00 ಗಂಟೆಗೆ, ಬೀದರ ನಗರದ ಛತ್ರಪತಿ ಶಿವಾಜಿ ಮಹಾರಾಜ ವೃತ್ತದ ಬಳಿ ಅತೀ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಈ ವಿಶೇಷ ಕಾರ್ಯಕ್ರಮಕ್ಕೆ ಕರ್ನಾಟಕದ ಕಾರ್ಮಿಕ ಇಲಾಖೆ ಸಚಿವರಾದ ಯುವಕರ ಕ್ರಾಂತಿಕಾರಿ ವಿಚಾರವಾದಿಗಳು ಸನ್ಮಾನ್ಯ ಸಂತೋಷ ಲಾಡ್ ಸಾಹೇಬರು ಹಾಗೂ ಭಾರತದ ಸುಪ್ರಸಿದ್ಧ ಭೀಮ್ ಶಾಯರ್ ರಾಹುಲ್ ಅನ್ವೇಕರ್ ಅವರು ಸಂಗೀತ ಮತ್ತು ಪ್ರಬೋಧನೆ ನೀಡಲು ಆಗಮಿಸಲಿದ್ದಾರೆ.
ಹೀಗಾಗಿ, ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅದರ ಸದುಪಯೋಗ ಪಡೆದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ನಿಮ್ಮ ಸಹಕಾರವನ್ನು ಮನಃಪೂರ್ವಕವಾಗಿ ಕೋರುತ್ತೇವೆ.





Any questions related to ಸ್ವಾಭಿಮಾನಿ ಮರಾಠಾ ಸಮಾಜದ ವತಿಯಿಂದ,ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ 135ನೇ ಜಯಂತಿ.?